ಆ್ಯಪ್ನಗರ

ರಾಮಮಂದಿರ ನಿರ್ಮಾಣಕ್ಕೆ ಈಗಾಗಲೇ ಸಿದ್ಧವಾಗಿದೆ ನೀಲನಕ್ಷೆ

ದಶಕಗಳಿಂದಲೂ ಇದ್ದ ಅಯೋಧ್ಯೆ ರಾಮ ಜನ್ಮಭೂಮಿ ವಿವಾದಕ್ಕೆ ಸುಪ್ರೀಂ ಕೋರ್ಟ್‌ ಕೊನೆ ಹಾಡಿದೆ. ಈಗ ಎಲ್ಲರ ಕುತೂಹಲ ಇರುವುದು ರಾಮಮಂದಿರ ನಿರ್ಮಾಣ ಹೇಗಿರಲಿದೆ ಎಂಬುದು.

Vijaya Karnataka Web 9 Nov 2019, 5:50 pm
ಹೊಸದಿಲ್ಲಿ: ರಾಮನ ಜನ್ಮ ಸ್ಥಾನವಾಗಿರುವ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡಬೇಕು ಎಂಬ ಹಿಂದೂ ಪರ ಸಂಘಟನೆಗಳ ಆಶಯಕ್ಕೆ ಈಗ ಪೂರಕ ಎಂಬಂತೆ ಸುಪ್ರೀಂ ಕೋರ್ಟ್‌ ಕೂಡ ತೀರ್ಪು ನೀಡಿದೆ.
Vijaya Karnataka Web ರಾಮಮಂದಿರ
ರಾಮಮಂದಿರ


ವಿವಾದಿತ ಸ್ಥಳದಲ್ಲಿ ಬೃಹತ್‌ ರಾಮಮಂದಿರ ನಿರ್ಮಾಣಕ್ಕೆ ಈಗ ಗ್ರೀನ್‌ ಸಿಗ್ನಲ್‌ ಸಿಕ್ಕಂತಾಗಿದೆ. ಈಗ ರಾಮಮಂದಿರ ಯಾವ ರೀತಿ ಇರಲಿದೆ ಎಂಬುದು ಎಲ್ಲರ ಕುತೂಹಲವಾಗಿದೆ.

ಇಡೀ ಜಗತ್ತಿನಲ್ಲಿ ಎಲ್ಲೂ ಇರದ ರೀತಿಯಲ್ಲಿ ರಾಮಮಂದಿರ ಕಟ್ಟಿಸಲು ಉತ್ತರ ಪ್ರದೇಶ ಸರಕಾರ ಈ ಹಿಂದೆ ಮುಂದಾಗಿತ್ತು. ಇದಕ್ಕಾಗಿ ಕಳೆದ ವರ್ಷ ನೀಲನಕ್ಷೆ ಕೂಡ ಸಿದ್ಧಪಡಿಸಿತ್ತು ಎನ್ನಲಾಗಿದೆ.

ಮಂದಿರದ ಪ್ರಮುಖ ಆಕರ್ಷಣೆಯಾಗಿ ಸರಯೂ ನದಿ ತೀರದಲ್ಲಿ 221 ಅಡಿ ಎತ್ತರದ ಬಿಲ್ಲು ಬಾಣ ಹಿಡಿದಿರುವ ಶ್ರೀರಾಮನ ಪ್ರತಿಮೆಯನ್ನು ನಿರ್ಮಾಣ ಮಾಡುವ ಉದ್ದೇಶವನ್ನು ಉತ್ತರ ಪ್ರದೇಶ ಸರಕಾರ ಹೊಂದಿದೆ ಎಂದು ತಿಳಿದುಬಂದಿದೆ.

ಇದರ ಸಮೀಪದಲ್ಲಿಯೇ ವಸ್ತು ಪ್ರದರ್ಶನ, ಐತಿಹಾಸಿಕ ಕೇಂದ್ರ, ರಾಮಾಯಣದ ಕತೆ ಹೇಳುವ ವಸ್ತು ಪ್ರದರ್ಶನ. ಅಯೋಧ್ಯೆ ನಗರದ ಕತೆ ಹೇಳುವ ಐತಿಹಾಸಿಕ ಕೇಂದ್ರ, ಬೃಹತ್‌ ಮಂದಿರ ನಿರ್ಮಾಣದ ಗುರಿ ಹೊಂದಲಾಗಿದೆ.

ದಶಾವತಾರ ಪ್ರದರ್ಶನಕ್ಕೂ ಅವಕಾಶ ಕಲ್ಪಿಸಲು ತಯಾರಿ ನಡೆಸಲಾಗಿದೆ.

ಈಗ ಸುಪ್ರೀಂ ಬಂದ ನಂತರ ಕೇಂದ್ರ ಸರಕಾರ ನೀತಿ ನಿಯಮ ರೂಪಿಸಿ. ಟ್ರಸ್ಟ್‌ ರಚನೆ ಮಾಡಲಿದ್ದು, ಅಲ್ಲಿಂದ ಅನುಮತಿ ಸಿಕ್ಕ ಕೂಡಲೇ ರಾಮಮಂದಿರ ನಿರ್ಮಾಣ ಕಾರ್ಯ ಆರಂಭವಾಗುವ ಸಾಧ್ಯತೆಗಳಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ