ಕೃಷ್ಣಾ ಸಂಗಮದಲ್ಲಿ ದೋಣಿ ದುರಂತ: 26 ಮಂದಿ ಸಾವು
ಕೃಷ್ಣಾ ನದಿಯ ಪವಿತ್ರ ಸಂಗಮ್ ಘಾಟ್ ಬಳಿ 40 ಮಂದಿಯಿದ್ದ ಬೋಟ್ ಮಗುಚಿದ್ದು 26ಕ್ಕೂ ಅಧಿಕ ಮಂದಿ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.
TNN 12 Nov 2017, 9:48 pm
ವಿಜಯವಾಡ: ಕೃಷ್ಣಾ ನದಿಯ ಪವಿತ್ರ ಸಂಗಮ್ ಘಾಟ್ ಬಳಿ 40 ಮಂದಿಯಿದ್ದ ಬೋಟ್ ಮಗುಚಿದ್ದು 26ಕ್ಕೂ ಅಧಿಕ ಮಂದಿ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.
ಭವಾನಿ ಐಲ್ಯಾಂಡ್ನಿಂದ ಪವಿತ್ರ ಸಂಗಮಕ್ಕೆ ಹೋಗುತ್ತಿದ್ದಾಗ ದೋಣಿ ಮುಳುಗಿದ್ದು ಈಗಾಗಲೇ 13 ಪ್ರವಾಸಿಗರ ಮೃತದೇಹಗಳನ್ನು ತೆಗೆಯಲಾಗಿದೆ. ಉಳಿದ 13 ಮಂದಿಯ ಮೃತ ದೇಹ ಇನ್ನೂ ದೊರಕಬೇಕಷ್ಟೆ, ಮೃತ ವ್ಯಕ್ತಿಗಳ ದೇಹಕ್ಕಾಗಿ ಶೋಧ ಕಾರ್ಯಾಚರಣೆ ಇನ್ನೂ ಮುಂದುವರಿದಿದೆ.
ಸಂಗಮದಲ್ಲಿ ಪವಿತ್ರ ಆರತಿ ವೀಕ್ಷಿಸಲು ದೋಣಿಯಲ್ಲಿ ಪ್ರತಿನಿತ್ಯ ಸಾವಿರಾರು ಭಕ್ತರು ಆಗಮಿಸುತ್ತಾರೆ. ಈ ವೇಳೆ ದುರ್ಘಟನೆ ನಡೆದಿದ್ದು, ಮಾಹಿತಿಗಳ ಪ್ರಕಾರ ದೋಣಿಯಲ್ಲಿ ಸಾಮರ್ಥ್ಯಕ್ಕೂ ಅಧಿಕ ಜನರನ್ನು ಹೊತ್ತೊಯ್ಯಲಾಗುತ್ತಿತ್ತು. ಹೀಗಾಗಿ ಅವಘಡ ಸಂಭವಿಸಿದೆ. ಮೃತ ವ್ಯಕ್ತಿಗಳಲ್ಲಿ ಏಳು ಮಂದಿ ಮಹಿಳೆಯರೂ ಇದ್ದರು. ಆದರೆ ಇಷ್ಟು ದೊಡ್ಡ ಮಟ್ಟದ ಅವಘಡ ಸಂಭವಿಸಿದರೂ ಅಂಬಿಗ ಸೂರಿಬಾಬು ಆಶ್ಚರ್ಯಕರ ರೀತಿಯಲ್ಲಿ ಸಾವಿನ ದವಡೆಯಿಂದ ಪಾರಾಗಿದ್ದಾರೆ.
ಭವಾನಿ ಐಲ್ಯಾಂಡ್ನಿಂದ ಪವಿತ್ರ ಸಂಗಮಕ್ಕೆ ಹೋಗುತ್ತಿದ್ದಾಗ ದೋಣಿ ಮುಳುಗಿದ್ದು ಈಗಾಗಲೇ 13 ಪ್ರವಾಸಿಗರ ಮೃತದೇಹಗಳನ್ನು ತೆಗೆಯಲಾಗಿದೆ. ಉಳಿದ 13 ಮಂದಿಯ ಮೃತ ದೇಹ ಇನ್ನೂ ದೊರಕಬೇಕಷ್ಟೆ, ಮೃತ ವ್ಯಕ್ತಿಗಳ ದೇಹಕ್ಕಾಗಿ ಶೋಧ ಕಾರ್ಯಾಚರಣೆ ಇನ್ನೂ ಮುಂದುವರಿದಿದೆ.
ಸಂಗಮದಲ್ಲಿ ಪವಿತ್ರ ಆರತಿ ವೀಕ್ಷಿಸಲು ದೋಣಿಯಲ್ಲಿ ಪ್ರತಿನಿತ್ಯ ಸಾವಿರಾರು ಭಕ್ತರು ಆಗಮಿಸುತ್ತಾರೆ. ಈ ವೇಳೆ ದುರ್ಘಟನೆ ನಡೆದಿದ್ದು, ಮಾಹಿತಿಗಳ ಪ್ರಕಾರ ದೋಣಿಯಲ್ಲಿ ಸಾಮರ್ಥ್ಯಕ್ಕೂ ಅಧಿಕ ಜನರನ್ನು ಹೊತ್ತೊಯ್ಯಲಾಗುತ್ತಿತ್ತು. ಹೀಗಾಗಿ ಅವಘಡ ಸಂಭವಿಸಿದೆ. ಮೃತ ವ್ಯಕ್ತಿಗಳಲ್ಲಿ ಏಳು ಮಂದಿ ಮಹಿಳೆಯರೂ ಇದ್ದರು. ಆದರೆ ಇಷ್ಟು ದೊಡ್ಡ ಮಟ್ಟದ ಅವಘಡ ಸಂಭವಿಸಿದರೂ ಅಂಬಿಗ ಸೂರಿಬಾಬು ಆಶ್ಚರ್ಯಕರ ರೀತಿಯಲ್ಲಿ ಸಾವಿನ ದವಡೆಯಿಂದ ಪಾರಾಗಿದ್ದಾರೆ.