ಆ್ಯಪ್ನಗರ

ಕರ್ನೂಲ್‌ನಲ್ಲಿ ಬಾಂಬ್‌ ಸ್ಫೋಟ: 3 ಉದ್ಯಮಿಗಳ ಸಾವು

ನಂದ್ಯಾಲ ಚೆಕ್‌ಪೋಸ್ಟ್‌ ಬಳಿಯ ರಿಯಲ್‌ ಎಸ್ಟೇಟ್‌ ಸೈಟ್‌ ಒಂದರಲ್ಲಿ ಪ್ರಬಲ ಬಾಂಬ್‌ ಸ್ಪೋಟಗೊಂಡ ಪರಿಣಾಮ ಮೂವರು ಉದ್ಯಮಿಗಳು ಮೃತಪಟ್ಟಿದ್ದಾರೆ.

Samayam Telugu 31 Jul 2018, 7:00 pm
ಕರ್ನೂಲ್: ನಂದ್ಯಾಲ ಚೆಕ್‌ಪೋಸ್ಟ್‌ ಬಳಿಯ ರಿಯಲ್‌ ಎಸ್ಟೇಟ್‌ ಸೈಟ್‌ ಒಂದರಲ್ಲಿ ಪ್ರಬಲ ಬಾಂಬ್‌ ಸ್ಪೋಟಗೊಂಡ ಪರಿಣಾಮ ಮೂವರು ಉದ್ಯಮಿಗಳು ಮೃತಪಟ್ಟಿದ್ದಾರೆ.
Vijaya Karnataka Web Telugu-image


ಮಲ್ಲಿಕಾರ್ಜುನ್‌, ರಾಜಶೇಖರ್‌ ಹಾಗೂ ಶ್ರೀನಿವಾಸುಲು ಮೃತ ದುರ್ಧೈವಿಗಳು.

ನಗರದ ವಿವಿಧ ಭಾಗಗಳಲ್ಲಿ ಹಲವಾರು ವಸತಿ ಸಮುಚ್ಚಯಗಳನ್ನು ನಿರ್ಮಿಸಿದ್ದ ಉದ್ಯಮಿಗಳು, ಸ್ಥಳ ವೀಕ್ಷಣೆಗಾಗಿ ಘಟನಾ ಸ್ಥಳಕ್ಕೆ ಬಂದಿದ್ದಾರೆ. ಯೋಜನೆ ಆರಂಭಕ್ಕೆ ಮುನ್ನ ಸ್ಥಳಕ್ಕೆ ಬಂದು, ಕೆಲಸಗಾರರಿಂದ ಸ್ವಚ್ಛಗೊಳಿಸಿದ್ದಾರೆ. ಈ ವೇಳೆ ಪ್ರಬಲ ಬಾಂಬ್‌ ಸ್ಪೋಟಗೊಂಡು ಮಲ್ಲಿಕಾರ್ಜುನ್‌ ಹಾಗೂ ರಾಜಶೇಖರ್‌ ಸ್ಥಳದಲ್ಲೇ ಮೃತಪಟ್ಟರೆ, ಶ್ರೀನಿವಾಸುಲು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಈ ವೇಳೆ ವಾಹನ ಚಾಲಕ ಸುಧಾಕರ್‌ ಗಂಭೀರವಾಗಿ ಗಾಯಗೊಂಡಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ.

ರಾಜಶೇಖರ್‌ ಹಾಗೂ ಮಲ್ಲಿಕಾರ್ಜುನ್‌ ಸಹೋದರರಾಗಿದ್ದು, ಶ್ರೀನಿವಾಸುಲು ಸೋದರ ಸಂಬಂಧಿ ಎಂದು ತಿಳಿದುಬಂದಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ