ಆ್ಯಪ್ನಗರ

Bomb Threat: ಇರಾನ್‌ - ಚೀನಾ ವಿಮಾನಕ್ಕೆ ಭಾರತೀಯ ವಾಯುಗಡಿಯಲ್ಲಿ ಬಾಂಬ್ ಬೆದರಿಕೆ!

ಇರಾನ್‌ನ ತೆಹ್ರಾನ್‌ನಿಂದ ಚೀನಾಗೆ ಬರುತ್ತಿರುವ ವಿಮಾನದಲ್ಲಿ ಬಾಂಬ್ ಇದೆ ಎಂದು ದಿಲ್ಲಿ ಪೊಲೀಸರಿಗೆ ಕರೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಕಾರ್ಯಪ್ರವೃತ್ತರಾದ ಪೊಲಿಸರು, ದಿಲ್ಲಿ ಎಟಿಸಿಗೆ ಮಾಹಿತಿ ರವಾನಿಸಿದ್ದರು. ಬಳಿಕ ಸರಣಿ ಹೈಡ್ರಾಮಗಳು ನಡೆದವು. ವಿಮಾನಕ್ಕೆ ದಿಲ್ಲಿಯಲ್ಲಿ ಲ್ಯಾಂಡ್‌ ಆಗಲು ಅನುಮತಿ ನಿರಾಕರಿಸಿ ಜೈಪುರಕ್ಕೆ ಹೋಗಲು ತಿಳಿಸಿದರೂ ಪೈಲಟ್ ನಿರಾಕರಿಸಿದರು. ಆಗ ಭಾರತೀಯ ವಾಯು ಸೇನೆಯ ವಿಮಾನಗಳು ಅಖಾಡಕ್ಕೆ ಇಳಿದವು. ಅಂತಿಮವಾಗಿ ಚಂಡೀಗಢದಲ್ಲಿ ಲ್ಯಾಂಡ್ ಮಾಡುವಂತೆ ಆಯ್ಕೆ ನೀಡಿದರೂ ಪೈಲಟ್ ಒಪ್ಪಲಿಲ್ಲ. ನೇರವಾಗಿ ಚೀನಾ ಗಡಿಗೆ ವಿಮಾನ ಪ್ರವೇಶಿಸಿತು.

Authored byದಿಲೀಪ್ ಡಿ. ಆರ್. | ANI 3 Oct 2022, 1:50 pm

ಹೈಲೈಟ್ಸ್‌:

  • ಇರಾನ್‌ನ ತೆಹ್ರಾತ್‌ನಿಂದ ಚೀನಾದ ಗುವಾಂಗ್ಜುಗೆ ಹೊರಟಿದ್ದ ವಿಮಾನ
  • ಮಹಾನ್ ಏರ್‌ ವಿಮಾನದಲ್ಲಿ ಬಾಂಬ್ ಇದೆ ಎಂಬ ಬೆದರಿಕೆ ಕರೆ
  • ವಿಮಾನದ ಪೈಲಟ್ ದಿಲ್ಲಿಯಲ್ಲಿ ತುರ್ತು ಲ್ಯಾಂಡಿಂಗ್‌ಗೆ ಅನುಮತಿ ಕೇಳಿದ್ದರು
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web flight
ಇರಾನ್‌ - ಚೀನಾ ವಿಮಾನಕ್ಕೆ ಭಾರತೀಯ ವಾಯುಗಡಿಯಲ್ಲಿ ಬಾಂಬ್ ಬೆದರಿಕೆ!
ಹೊಸ ದಿಲ್ಲಿ: ಇರಾನ್‌ನಿಂದ ಚೀನಾಗೆ ಹೊರಟಿದ್ದ ಪ್ರಯಾಣಿಕ ವಿಮಾನ ಒಂದರಲ್ಲಿ ಬಾಂಬ್ ಇದೆ ಎಂಬ ಬೆದರಿಕೆ ಕರೆ ಅಲ್ಲೋಲ ಕಲ್ಲೋಲ ಸೃಷ್ಟಿಸಿತು. ಇರಾನ್‌ನ ತೆಹ್ರಾತ್‌ನಿಂದ ಚೀನಾದ ಗುವಾಂಗ್ಜುಗೆ ಹೊರಟಿದ್ದ ಮಹಾನ್ ಏರ್‌ ವಿಮಾನದಲ್ಲಿ ಬಾಂಬ್ ಇದೆ ಎಂಬ ಬೆದರಿಕೆ ಕರೆ ಬಂದಿತ್ತು. ಅದೂ ಕೂಡಾ ವಿಮಾನವು ಭಾರತದ ವಾಯು ಸೀಮೆ ಪ್ರವೇಶಿಸಿದ ಬಳಿಕ ಈ ಬಾಂಬ್ ಕರೆ ಬಂದ ಪರಿಣಾಮ, ವಿಮಾನದ ಪೈಲಟ್ ದಿಲ್ಲಿಯಲ್ಲಿ ತುರ್ತು ಲ್ಯಾಂಡಿಂಗ್‌ಗೆ ಅನುಮತಿ ಕೇಳಿದರು. ಆದ್ರೆ, ಭಾರತದ ಎಟಿಸಿ ಈ ವಿಮಾನಕ್ಕೆ ದಿಲ್ಲಿ ಏರ್‌ಪೋರ್ಟ್‌ನಲ್ಲಿ ಲ್ಯಾಂಡ್‌ ಮಾಡಲು ಅನುಮತಿ ನಿರಾಕರಿಸಿತು. ಆದರೆ, ಜೈಪುರ ಏರ್‌ಪೋರ್ಟ್‌ಗೆ ತೆರಳಲು ಸೂಚನೆ ನೀಡಿತು.
ಆದರೆ, ವಿಮಾನದಲ್ಲಿದ್ದ ಇರಾನಿ ಸಿಬ್ಬಂದಿ ಭಾರತದ ಎಡಿಸಿ ಸೂಚನೆಯನ್ನು ಪಾಲನೆ ಮಾಡಲಿಲ್ಲ. ಹೀಗಾಗಿ, ಭಾರತೀಯ ವಾಯು ಪಡೆಗೆ ಸುದ್ದಿ ಮುಟ್ಟಿಸಲಾಯ್ತು. ಕುಡಲೇ ಕಾರ್ಯ ಪ್ರವೃತ್ತವಾದ ಪಂಜಾಬ್ ಹಾಗೂ ಜೋಧಪುರ ವಾಯು ನೆಲೆಯ ಯುದ್ಧ ವಿಮಾನಗಳು, ಇರಾನ್‌ನ ಮಹಾನ್ ಏರ್‌ಲೈನ್ಸ್‌ ಪ್ರಯಾಣಿಕ ವಿಮಾನವನ್ನು ಬೆನ್ನತ್ತಿದವು. ಅಂತಿಮವಾಗಿ ಈ ಪ್ರಯಾಣಿಕ ವಿಮಾನಕ್ಕೆ ಚಂಡೀಘಡದಲ್ಲಿ ತುರ್ತು ಲ್ಯಾಂಡ್ ಮಾಡಲು ಅನುಮತಿ ನೀಡಲಾಯ್ತು. ಆದರೆ, ವಿಮಾನದ ಪೈಲಟ್, ಈ ಎರಡೂ ವಿಮಾನ ನಿಲ್ದಾಣಗಳಲ್ಲಿ ಲ್ಯಾಂಡ್ ಮಾಡಲು ಮನಸ್ಸು ಮಾಡಲೇ ಇಲ್ಲ. ನಿರಂತರವಾಗಿ ಸಾಗಿದ ವಿಮಾನ ನೇರವಾಗಿ ಚೀನಾದ ವಾಯು ಸೀಮೆ ಪ್ರವೇಶಿಸಿತು.

ವಿಮಾನ ಸ್ಪೋಟಿಸುತ್ತೇವೆ: ಎರಡೆರಡು ಬಾಂಬ್‌ ಬೆದರಿಕೆ ಕರೆ ಹಿನ್ನೆಲೆ ದಿಲ್ಲಿ ಏರ್‌ಪೋರ್ಟ್‌ನಲ್ಲಿ ಹೈ ಅಲರ್ಟ್‌
ಇರಾನ್‌ನ ವಿಮಾನ ಚೀನಾದ ವಾಯು ಸೀಮೆ ಪ್ರವೇಶಿಸಿದ ಬಳಿಕ ಭಾರತೀಯ ವಾಯು ಸೇನೆಯ ಯುದ್ಧ ವಿಮಾನಗಳು ಪ್ರಯಾಣಿಕ ವಿಮಾನವನ್ನು ಬೆನ್ನತ್ತುವ ಕೆಲಸ ನಿಲ್ಲಿಸಿ ವಾಪಸ್ ಮರಳಿದವು.


ಸೋಮವಾರ ಬೆಳಗ್ಗೆ 9.20ಕ್ಕೆ ದಿಲ್ಲಿ ಪೊಲಿಸರಿಗೆ ಈ ಬೆದರಿಕೆ ಕರೆ ಬಂದಿತ್ತು ಎನ್ನಲಾಗಿದೆ. ಇರಾನ್‌ನ ತೆಹ್ರಾನ್‌ನಿಂದ ಚೀನಾಗೆ ಬರುತ್ತಿರುವ ವಿಮಾನದಲ್ಲಿ ಬಾಂಬ್ ಇದೆ ಎಂದು ದಿಲ್ಲಿ ಪೊಲೀಸರಿಗೆ ಕರೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಕಾರ್ಯ ಪ್ರವೃತ್ತರಾದ ಪೊಲಿಸರು, ದಿಲ್ಲಿ ಎಟಿಸಿಗೆ ಮಾಹಿತಿ ರವಾನಿಸಿದ್ದರು. ಆ ಬಳಿಕ ಸರಣಿ ಹೈಡ್ರಾಮಗಳು ನಡೆದವು. ವಿಮಾನಕ್ಕೆ ದಿಲ್ಲಿಯಲ್ಲಿ ಲ್ಯಾಂಡ್‌ ಆಗಲು ಅನುಮತಿ ನಿರಾಕರಿಸಿ ಜೈಪುರಕ್ಕೆ ಹೋಗಲು ತಿಳಿಸಿದರೂ ಪೈಲಟ್ ನಿರಾಕರಿಸಿದರು. ಆಗ ಭಾರತೀಯ ವಾಯು ಸೇನೆಯ ಯುದ್ಧ ವಿಮಾನಗಳು ಅಖಾಡಕ್ಕೆ ಇಳಿದವು. ಅಂತಿಮವಾಗಿ ವಿಮಾನಕ್ಕೆ ಚಂಡೀಗಢದಲ್ಲಿ ಲ್ಯಾಂಡ್ ಮಾಡುವಂತೆ ಆಯ್ಕೆ ನೀಡಿದರೂ ಪೈಲಟ್ ಒಪ್ಪಲಿಲ್ಲ. ನೇರವಾಗಿ ಚೀನಾ ಗಡಿಗೆ ವಿಮಾನ ಪ್ರವೇಶಿಸಿತು.

ಜಮ್ಮು ವಿಮಾನ ನಿಲ್ದಾಣದಲ್ಲಿ ಅವಳಿ ಸ್ಫೋಟ: ಭಾರತೀಯ ಸೇನೆಯ ನೆಲೆಯ ಮೇಲೆ ಮೊದಲ ಡ್ರೋನ್ ದಾಳಿ
ಆ ನಂತರ ಚೀನಾದ ಯಾವ ವಿಮಾನ ನಿಲ್ದಾಣದಲ್ಲಿ ಈ ಪ್ರಯಾಣಿಕ ವಿಮಾನ ಲ್ಯಾಂಡ್ ಆಯ್ತು? ವಿಮಾನದಲ್ಲಿ ಬಾಂಬ್ ಇತ್ತಾ? ಇತ್ಯಾದಿ ಪ್ರಶ್ನೆಗಳಿಗೆ ಯಾವುದೇ ಉತ್ತರ ಈವರೆಗೆ ಸಿಕ್ಕಿಲ್ಲ. ಆದರೆ, ದಿಲ್ಲಿ - ಜೈಪುರ ನಡುವೆ ಪ್ರಯಾಣಿಸುವಾಗ ವಿಮಾನವು ಕೆಲವು ಸಮಯದ ಮಟ್ಟಿಗೆ ತಳಮಟ್ಟದಲ್ಲಿ ಹಾರಾಟ ನಡೆಸಿದೆ ಎಂದು ಎಟಿಸಿ ಅಂಕಿ ಅಂಶಗಳು ತಿಳಿಸಿವೆ. ಆ ನಂತರ ವಿಮಾನ ನೇರವಾಗಿ ಚೀನಾ ವಾಯು ಸೀಮೆ ಪ್ರವೇಶಿಸಿತು ಎಂದು ತಿಳಿದು ಬಂದಿದೆ.
ಲೇಖಕರ ಬಗ್ಗೆ
ದಿಲೀಪ್ ಡಿ. ಆರ್.
ವಿಜಯ ಕರ್ನಾಟಕದ ಡಿಜಿಟಲ್ ಪತ್ರಕರ್ತನಾಗಿ 2019ರ ಆಗಸ್ಟ್‌ನಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡ ಟಿವಿ ನ್ಯೂಸ್ ವಾಹಿನಿಗಳಲ್ಲಿ 14 ವರ್ಷಕ್ಕೂ ಹೆಚ್ಚು ಕಾಲ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ. ರಾಜಕೀಯ, ವಿಜ್ಞಾನ-ತಂತ್ರಜ್ಞಾನ ರಂಗಗಳು ಇವರ ಆಸಕ್ತಿಯ ವಿಷಯಗಳು. ಇದಲ್ಲದೆ ಹಾಸ್ಯ, ವಿಡಂಬನಾತ್ಮಕ ಬರಹ, ವ್ಯಕ್ತಿ ಚಿತ್ರ, ಜೀವ ಪರ ನಿಲುವಿನ ಸಂವೇದನಾತ್ಮಕ ಲೇಖನಗಳನ್ನು ಹೆಚ್ಚಾಗಿ ಬರೆಯುತ್ತಾರೆ. ಕಾಡು, ಹಸಿರು, ಬೆಟ್ಟ ಗುಡ್ಡಗಳ ಚಾರಣ ಮಾಡುವುದು ಇವರ ಹವ್ಯಾಸ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ