ಆ್ಯಪ್ನಗರ

'ನಾನು ಸೆಗಣಿಯಲ್ಲಿ ಜನಿಸಿದವಳು, ಕೊರೊನಾ ನನ್ನ ಹತ್ತಿರವೂ ಸುಳಿಯಲ್ಲ..!;ಬಿಜೆಪಿ ಸಚಿವೆ

ತಾನು ಗೋವಿನ ಸೆಗಣಿ ಮತ್ತು ಮಣ್ಣಿನಲ್ಲಿ ಜನಿಸಿದವಳು. ಈ ಕಾರಣಕ್ಕಾಗಿ ಕೊರೊನಾ ವೈರಸ್ ತನ್ನ ಹತ್ತಿರವೂ ಸುಳಿಯಲ್ಲ’ ಎಂದು ಹೇಳಿರೋದು ದೇಶಾದ್ಯಂತ ಸಾಕಷ್ಟು ಟ್ರೋಲ್‌ಗೆ ಒಳಗಾಗಿದೆ. ಇತ್ತೀಚೆಗೆ ಸಚಿವೆ ಇಮಾರ್ತಿ ದೇವಿಯವರಿಗೆ ಕೊರೊನಾ ತಗುಲಿತ್ತು ಎಂದು ಮಾಧ್ಯಮಗಳಲ್ಲಿ ವರದಿ ಪ್ರಸಾರ ಆಗಿತ್ತು.

Vijaya Karnataka Web 8 Sep 2020, 2:51 pm
ಹೊಸದಿಲ್ಲಿ: ಬಾಬ್‌ಜಿ ಪಾಪಡ್‌ ತಿನ್ನೋದರಿಂದ ಕೊರೊನಾ ಕಡಿಮೆಯಾಗುತ್ತೆ ಅಂದಾಯ್ತು. ದಿನಕ್ಕೆ 30-60ನಷ್ಟು ರಮ್‌ ಸೇವಿಸುವುದರಿಂದ ಕೊರೊನಾ ಹತ್ತಿರ ಸುಳಿಯಲ್ಲ ಅಂತಾ ಹೇಳಿ ಆಯ್ತು, ದೀಪ ಹಚ್ಚೋದರಿಂದ, ಜಾಗಟೆ ಬಡಿಯೋದರಿಂದ ಕೊರೊನಾ ಹೋಗುತ್ತೆ ಅನ್ನೋದು ಕೂಡ ಹಳೇದಾಯ್ತು. ಆದರೆ ಈಗ ಇದಕ್ಕೆ ಮತ್ತೊಂದು ಹೊಸ ಸಂಶೋಧನೆ ಸೇರ್ಪಡೆಯಾಗಿದೆ.
Vijaya Karnataka Web Imarti Devi


ಕಾರ್ಗಿಲ್ , ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿ ತೀವ್ರವಾಗಿ ಕಂಪಿಸಿದ ಭೂಮಿ

ಈ ಸಂಶೋಧನೆಯನ್ನು ವೈದ್ಯರೋ ಅಥವಾ ವಿಜ್ಞಾನಿಗಳು ಮಾಡಿದ್ದಾರೋ ಅಂತಾ ಕೇಳ್ಬೇಡಿ. ಯಾಕೆಂದರೆ ಇದನ್ನು ಸ್ವತಃ ತಾವೇ ಅಳವಡಿಸಿಕೊಂಡು, ಅನುಭವಿಸಿಕೊಂಡು, ಖಾತ್ರಿಪಡಿಸಿದ ನಂತರ ಮಧ್ಯಪ್ರದೇಶದ ಮಹಿಳಾ ಸಚಿವೆಯೊಬ್ಬರು ಹೇಳಿದ ಮಾತಿದು. ಮಧ್ಯಪ್ರದೇಶದಲ್ಲಿ ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಸಚಿವೆಯಾಗಿರುವ ಇಮಾರ್ತಿ ದೇವಿ ಅವರು, ತನ್ನ ಬಳಿ ಕೊರೊನಾ ಸುಳಿಯಲ್ಲ ಎಂದಿದ್ದಾರೆ.

ಬಿಜೆಪಿ ಐಟಿ ಸೆಲ್ ರಾಕ್ಷಸೀಕರಣಗೊಂಡಿದೆ; ಬಹಿರಂಗವಾಗಿ ಕಿಡಿಕಾರಿದ ಸುಬ್ರಮಣಿಯನ್ ಸ್ವಾಮಿ

ಇಮಾರ್ತಿ ದೇವಿ ಅವರು ತನ್ನ ಹತ್ತಿರವೂ ಕೊರೊನಾ ಸುಳಿಯಲ್ಲ ಎಂದು ಹೇಳಿದ್ದರೆ ಅಷ್ಟೋನೂ ಇದು ಚರ್ಚೆಯಾಗ್ತಿರಲಿಲ್ಲ. ಆದರೆ ಅವರು ಹೇಳಿರೋದು, ‘ತಾನು ಸೆಗಣಿ ಮತ್ತು ಮಣ್ಣಿನಲ್ಲಿ ಜನಿಸಿದವಳು. ಈ ಕಾರಣಕ್ಕಾಗಿ ಕೊರೊನಾ ವೈರಸ್ ತನ್ನ ಹತ್ತಿರವೂ ಸುಳಿಯಲ್ಲ’ ಎಂದು ಹೇಳಿರೋದು ದೇಶಾದ್ಯಂತ ಸಾಕಷ್ಟು ಟ್ರೋಲ್‌ಗೆ ಒಳಗಾಗಿದೆ.


ಲಡಾಖ್‌ನ ಗಡಿಪ್ರದೇಶದಲ್ಲಿ ಪರಿಸ್ಥಿತಿ ತುಂಬಾ ಗಂಭೀರವಾಗಿದೆ : ವಿದೇಶಾಂಗ ಸಚಿವ ಎಸ್‌

ಇತ್ತೀಚೆಗೆ ಸಚಿವೆ ಇಮಾರ್ತಿ ದೇವಿಯವರಿಗೆ ಕೊರೊನಾ ತಗುಲಿತ್ತು ಎಂದು ಹೇಳಲಾಗಿತ್ತು. ಇದಕ್ಕೆ ಉತ್ತರಿಸಿದ ಅವರು, ನನಗೆ ಕೊರೊನಾ ಬಂದಿಲ್ಲ. ಮಾಧ್ಯಮಗಳಲ್ಲಿ ತಪ್ಪಾಗಿ ವರದಿ ಪ್ರಸಾರ ಆಗಿದೆ ಎಂದು ಆರೋಪಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ