ಆ್ಯಪ್ನಗರ

ವಿದ್ಯುತ್ ಕಂಬದ ಮೇಲೆ ಮೂತ್ರ ಮಾಡಲು ಹೋಗಿ ಜೀವ ಕಳೆದುಕೊಂಡ!

ಬರೇಲಿಯ ಗಣೇಶ್ಪುರದ ಗ್ರಾಮದ ನಿವಾಸಿಯಾಗಿದ್ದ ಕಿಶೋರ್ ಬುಧವಾರ ದಿನ , ತನ್ನ ಸ್ನೇಹಿತರೊಂದಿಗೆ ಮನೆಗೆ ಮರಳುತ್ತಿದ್ದಾಗ ರಸ್ತೆ ಬದಿಯಲ್ಲಿದ್ದ ವಿದ್ಯುತ್ ಕಂಬಕ್ಕೆ ಮೂತ್ರ ಮಾಡಿದ್ದ. ತಕ್ಷಣ ಆತನಿಗೆ ವಿದ್ಯುತ್ ಶಾಕ್ ತಗುಲಿದ್ದು ಗೆಳೆಯರು ಸಹಾಯಕ್ಕಾಗಿ ಕೂಗಿ ಕೊಂಡಿದ್ದಾರೆ.

TIMESOFINDIA.COM 9 May 2019, 12:52 pm
ಬರೇಲಿ: ಟೈ ಟೆನ್ಸನ್ ತಂತಿ ಹೊತ್ತಿದ್ದ ವಿದ್ಯುತ್ ಕಂಬದ ಮೇಲೆ ಮೂತ್ರ ಮಾಡಲು ಹೋದ ಶಾಲಾ ಬಾಲಕ ವಿದ್ಯುತ್ ಹರಿದು ಸಾವನ್ನಪ್ಪಿದ ದಾರುಣ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
Vijaya Karnataka Web Death


ಮೃತ ಭುಪ್ ಕಿಶೋರ್ 10 ನೇ ತರಗತಿ ವಿದ್ಯಾರ್ಥಿಯಾಗಿದ್ದಾನೆ.

ಬರೇಲಿಯ ಗಣೇಶ್ಪುರದ ಗ್ರಾಮದ ನಿವಾಸಿಯಾಗಿದ್ದ ಕಿಶೋರ್ ಬುಧವಾರ ದಿನ , ತನ್ನ ಸ್ನೇಹಿತರೊಂದಿಗೆ ಮನೆಗೆ ಮರಳುತ್ತಿದ್ದಾಗ ರಸ್ತೆ ಬದಿಯಲ್ಲಿದ್ದ ವಿದ್ಯುತ್ ಕಂಬಕ್ಕೆ ಮೂತ್ರ ಮಾಡಿದ್ದ. ತಕ್ಷಣ ಆತನಿಗೆ ವಿದ್ಯುತ್ ಶಾಕ್ ತಗುಲಿದ್ದು ಗೆಳೆಯರು ಸಹಾಯಕ್ಕಾಗಿ ಕೂಗಿ ಕೊಂಡಿದ್ದಾರೆ. ಹತ್ತಿರದ ಹೊಲವೊಂದರಲ್ಲಿ ಕೆಲಸ ಮಾಡುತ್ತಿದ್ದ ಪ್ರೇಮ್ ಸಿಂಗ್ ಎಂಬ ರೈತ ತಕ್ಷಣ ಸಹಾಯಕ್ಕಾಗಿ ಓಡಿ ಬಂದು ಒಣಗಿದ ಕಟ್ಟಿಗೆಯಿಂದ ಕಂಬಕ್ಕೆ ಅಂಟಿಕೊಂಡಿದ್ದ ಬಾಲಕನನ್ನು ಬೇರ್ಪಡಿಸಿದ್ದಾರೆ. ಆದರೆ ದೇಹವೆಲ್ಲ ಸುಟ್ಟು ಹೋದ ಪರಿಣಾಮ ಆತ ಅದಾಗಲೇ ಸಾವನ್ನಪ್ಪಿದ್ದಾನೆ.

ಮೃತ ಕಿಶೋರ್ ಪಂಜಾಬ್‌ನಲ್ಲಿ ಕೂಲಿ ಕೆಲಸ ಮಾಡಿಕೊಂಡು ಕುಟುಂಬ ನಿರ್ವಹಣೆ ಮಾಡುತ್ತಿರುವ ಹುಲಸಿ ರಾಮ್ ಎಂಬುವವರ ನಾಲ್ಕು ಮಕ್ಕಳಲ್ಲಿ ಮೂರನೆಯವನಾಗಿದ್ದಾನೆ.

ಕಂಬಕ್ಕೆ ಮೂತ್ರ ಮಾಡಿದ್ದಕ್ಕೆ ಬಾಲಕನಿಗೆ ಶಾಕ್ ಹೊಡೆದಿದ್ದು ಹೇಗೆ ಎಂಬುದರ ಬಗ್ಗೆ ವಿದ್ಯುತ್ ಇಲಾಖೆ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ