ಆ್ಯಪ್ನಗರ

200 ರೂಪಾಯಿ ಕದ್ದಿದ್ದಕ್ಕೆ ಬಾಲಕನನ್ನು ಮರಕ್ಕೆ ಕಟ್ಟಿ ಹಾಕಿ ಹಲ್ಲೆ ನಡೆಸಿದ ಭೂಪ..!

ಅಂಗಡಿ ಮಾಲೀಕ ರಾಮೇಶ್ವರ್ ದಾಡ್‌ ಸೇನಾ ಎಂಬಾತ ತನ್ನ ಅಂಗಡಿಯಲ್ಲಿ ಬಾಲಕ ಬಿಸ್ಕತ್‌ ಮತ್ತು ಇನ್ನೂರು ರೂಪಾಯಿ ಕದ್ದಿದ್ದಾನೆ ಎಂದು ಮರಕ್ಕೆ ಕಟ್ಟಿ ಹಾಕಿ ಹಲ್ಲೆ ನಡೆಸಿದ್ದಾನೆ. ಬಾಲಕ ತಾನು ಕಳ್ಳತನ ನಡೆಸಿಲ್ಲ ಎಂದು ಗೋಗರೆದರೂ ಬಾಲಕ ಮಾತನ್ನು ಕಿವಿಗೆ ಹಾಕಿಕೊಳ್ಳದೆ ಅಮಾನುಷವಾಗಿ ಹಲ್ಲೆ ನಡೆಸಿದ್ದಾನೆ ಎಂದು ಎಂದು ಸ್ಥಳೀಯರು ತಿಳಿಸಿದ್ದಾರೆ.

Agencies 14 Jul 2020, 4:30 pm
ಛತ್ತೀಸ್‌ಗಡ: ಕೇವಲ 200 ರೂಪಾಯಿ ಕದ್ದಿದ್ದಾನೆ ಎಂದು ಆರೋಪಿಸಿ ಏಳು ವರ್ಷದ ಬಾಲಕನನ್ನು ಮರಕ್ಕೆ ಕಟ್ಟಿ ಹಾಕಿ ಅಮಾನುಷವಾಗಿ ಹಲ್ಲೆ ಮಾಡಿರುವ ಘಟನೆ ಛತ್ತೀಸ್‌ಗಡದ ಜಸ್ಪುರ್‌ ಜಿಲ್ಲೆಯ ಕೊಟ್ಟಾ ಎಂಬ ಊರಿನಲ್ಲಿ ನಡೆದಿದೆ.
Vijaya Karnataka Web BOY BEATEN


ಸತ್ಯವನ್ನು ಗೊಂದಲದಲ್ಲಿಡಬಹುದೇ ಹೊರತು ಸೋಲಿಸಲಾಗದು: ಸಚಿನ್ ಪೈಲ

ಅಂಗಡಿ ಮಾಲೀಕ ರಾಮೇಶ್ವರ್ ದಾಡ್‌ ಸೇನಾ ಎಂಬಾತ ತನ್ನ ಅಂಗಡಿಯಲ್ಲಿ ಬಾಲಕ ಬಿಸ್ಕತ್‌ ಮತ್ತು ಇನ್ನೂರು ರೂಪಾಯಿ ಕದ್ದಿದ್ದಾನೆ ಎಂದು ಮರಕ್ಕೆ ಕಟ್ಟಿ ಹಾಕಿ ಹಲ್ಲೆ ನಡೆಸಿದ್ದಾನೆ. ಬಾಲಕ ತಾನು ಕಳ್ಳತನ ನಡೆಸಿಲ್ಲ ಎಂದು ಗೋಗರೆದರೂ ಬಾಲಕ ಮಾತನ್ನು ಕಿವಿಗೆ ಹಾಕಿಕೊಳ್ಳದೆ ಅಮಾನುಷವಾಗಿ ಹಲ್ಲೆ ನಡೆಸಿದ್ದಾನೆ ಎಂದು ಎಂದು ಸ್ಥಳೀಯರು ತಿಳಿಸಿದ್ದಾರೆ. ಘಟನೆ ತಿಳಿಯುತ್ತಿದ್ದಂತೆ ಬಾಲಕನ ಪೋಷಕರು ಸ್ಥಳಕ್ಕೆ ಆಗಮಿಸಿದ್ದು, ಅಂಗಡಿ ಮಾಲೀಕನಿಗೆ ಇನ್ನೂರು ರೂಪಾಯಿ ಕೊಟ್ಟು ಬಾಲಕನನ್ನು ಬಿಡಿಸಿಕೊಂಡು ಹೋಗಿದ್ದಾರೆ.

ಪೈಲಟ್‌ ಕೈಯಲ್ಲಿ ಏನೂ ಇಲ್ಲ, ಬಂಡಾಯದ ಹಿಂದಿರುವುದು ಬಿಜೆಪಿ - ಗೆಹ್ಲೋಟ್‌ ವಾಗ್ದಾಳಿ

ಅಂಗಡಿ ಮಾಲೀಕ ರಾಮೇಶ್ವರ್ ದಾಡ್ ಸೇನಾ ವಿರುದ್ಧ ಆರೋಪ ಮಾಡಿರುವ ಬಾಆಲಕನ ಪೋಷಕರು, ತಮ್ಮ ಮಗ ಕಳ್ಳತನ ಮಾಡಿಲ್ಲ ಎಂದು ಹೇಳುತ್ತಿದ್ದರೂ ಅಮಾನುಷವಾಗಿ ಹಲ್ಲೆ ಮಾಡಿದ್ದಾನೆ. ಹೀಗಾಗಿ ನಮಗೆ ನ್ಯಾಯ ಕೊಡಿಸಿ ಎಂದು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಘಟನೆ ಸಂಬಂಧ ದೂರು ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 342ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.

ಬಾಲಕನನ್ನು ಮರಕ್ಕೆ ಕಟ್ಟಿ ಹಾಕಿ ಆರೋಪಿ ಹಲ್ಲೆ ಮಾಡುತ್ತಿರುವ ದೃಶ್ಯದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡ್ತಿದೆ.

ನೇಪಾಳ ಪ್ರಧಾನಿ ಮಾನಸಿಕ ಸ್ಥಿಮಿತ ಕಳೆದುಕೊಂಡಿರುವಂತಿದೆ : ಅಭಿಷೇಕ್ ಮನು ಸಿಂಘ್ವಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ