ಆ್ಯಪ್ನಗರ

ಒಂದು ಲಕ್ಷಕ್ಕಾಗಿ ಬಾಲಕನ ಕೊಲೆಗೈದ ಹುಡುಗರು

ಒಂದು ಲಕ್ಷಕ್ಕಾಗಿ ಏಳು ವರ್ಷದ ಬಾಲಕ ಸೂರಜ್‌ನನ್ನುತಿಕ್ರಿ ಕ್ರುದ್‌ ಗ್ರಾಮದ ಜಮೀನಿನಲ್ಲಿ ಹುಡುಗರು ಕೊಲೆ ಮಾಡಿ ಪೊದೆಗೆ ಬಿಸಾಡಿದ್ದು, ಪೊಲೀಸರು ಕೊಲೆಗಟುಕರನ್ನು ಪತ್ತೆ ಹಚ್ಚಿದ್ದಾರೆ.

TIMESOFINDIA.COM 10 Aug 2018, 11:41 am
ಹೊಸದಿಲ್ಲಿ: ಒಂದು ಲಕ್ಷಕ್ಕಾಗಿ ಏಳು ವರ್ಷದ ಬಾಲಕ ಸೂರಜ್‌ನನ್ನುತಿಕ್ರಿ ಕ್ರುದ್‌ ಗ್ರಾಮದ ಜಮೀನಿನಲ್ಲಿ ಹುಡುಗರು ಕೊಲೆ ಮಾಡಿ ಪೊದೆಗೆ ಬಿಸಾಡಿದ್ದು, ಪೊಲೀಸರು ಕೊಲೆಗಟುಕರನ್ನು ಪತ್ತೆ ಹಚ್ಚಿದ್ದಾರೆ.
Vijaya Karnataka Web boy


16 ವರ್ಷದ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದಾಗ ಅಪಹರಣ ಮತ್ತು ಹತ್ಯೆ ಕುರಿತು ಕಟ್ಟು ಕಥೆಗಳನ್ನು ಹೇಳಿದ್ದಾರೆ. ಆರೋಪಿಗಳು ಶಾಲೆ ತೊರೆದವರಾಗಿದ್ದು, ಬಾಲಕ ಸೂರಜ್‌ ಜತೆ ಆಟವಾಡುತ್ತಿದ್ದವರು. ಹೊಸ ಸೈಕಲ್‌ನಲ್ಲಿ ಜಮೀನಿಗೆ ರೈಡ್‌ ಮಾಡಿಸುವುದಾಗಿ ಅವರು ಬಾಲಕನಿಗೆ ಆಮಿಷವೊಡ್ಡಿ ಕರೆದೊಯ್ದು ಜ್ಯೂಸ್‌ ನೀಡಿ ಕತ್ತು ಹಿಚುಕಿ ಸಾಯಿಸಿದ್ದರು.

ಕೊಲೆ ಮಾಡಿದ ಬಳಿಕ ಆರೋಪಿಗಳು ಕ್ಷೌರಿಕ ವೃತ್ತಿ ಮಾಡುತ್ತಿರುವ ಸೂರಜ್‌ ತಂದೆಗೆ ಕರೆ ಮಾಡಿ, ಒಂದು ಲಕ್ಷ ಹಣ ನೀಡುವಂತೆ ಕೇಳಿದ್ದಾರೆ. ಬಾಲಕನ ತಂದೆ ತಕ್ಷಣ ಅಲಿಪುರ ಪೊಲೀಸ್‌ ಠಾಣೆಗೆ ವಿಷಯ ತಿಳಿಸಿದ್ದಾರೆ. ನಿಗದಿತ ಸ್ಥಳಕ್ಕೆ ಪೊಲೀಸರು ಬ್ಯಾಗ್‌ ಸಹಿತ ಹೋಗಿ ಕಾದಿದ್ದರು. ಆರೋಪಿಗಳಲ್ಲಿ ಒಬ್ಬಾತ ಸ್ಥಳಕ್ಕೆ ಹೋಗಿ ಬ್ಯಾಗ್‌ನಲ್ಲಿ ಏನಿದೆ ಎಂದು ನೋಡದೆ ಎತ್ತಿಕೊಂಡು ಹೋಗುವಲ್ಲಿ ಯಶಸ್ವಿಯಾಗಿದ್ದಾನೆ.

ಇಬ್ಬರು ಹುಡುಗರು ಎರಡು ದಿನಗಳಿಂದ ಕಾಣೆಯಾಗಿರುವ ಮಾಹಿತಿ ಪಡೆದ ರೋಹಿಣಿ ವಿಭಾಗದ ರಜನೀಶ್‌ ಗುಪ್ತಾ , ಒಬ್ಬನನ್ನು ಪತ್ತೆ ಹಚ್ಚಿ ವಿಚಾರಣೆ ನಡೆಸಿದ್ದಾರೆ. ಮತ್ತೊಬ್ಬನನ್ನು ನರೇಲದಲ್ಲಿರುವ ಸಂಬಂಧಿಯ ಮನೆಯಿಂದ ವಶಕ್ಕೆ ಪಡೆದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ