ಆ್ಯಪ್ನಗರ

ಓದು ಎಂದಿದ್ದಕ್ಕೆ ತಾಯಿಯನ್ನೇ ಕೊಂದ ಶಾಲಾ ಬಾಲಕ

ಶಾಲಾ ಪಾಠದ ಅಭ್ಯಾಸ ಮಾಡು ಎಂದಿದ್ದಕ್ಕೆ 15 ವರ್ಷದ ಬಾಲಕನೊಬ್ಬ ತಾಯಿಯನ್ನೇ ಕೊಂದು ಹಾಕಿದ ಬೆಚ್ಚಿ ಬೀಳಿಸುವ ಘಟನೆ ಮಧ್ಯಪ್ರದೇಶದ ಚಿಂದ್ವಾರಾದಲ್ಲಿ ಶನಿವಾರ ರಾತ್ರಿ ನಡೆದಿದೆ.

Vijaya Karnataka 20 Aug 2018, 11:20 am
ಭೋಪಾಲ್: ಶಾಲಾ ಪಾಠದ ಅಭ್ಯಾಸ ಮಾಡು ಎಂದಿದ್ದಕ್ಕೆ 15 ವರ್ಷದ ಬಾಲಕನೊಬ್ಬ ತಾಯಿಯನ್ನೇ ಕೊಂದು ಹಾಕಿದ ಬೆಚ್ಚಿ ಬೀಳಿಸುವ ಘಟನೆ ಮಧ್ಯಪ್ರದೇಶದ ಚಿಂದ್ವಾರಾದಲ್ಲಿ ಶನಿವಾರ ರಾತ್ರಿ ನಡೆದಿದೆ.
Vijaya Karnataka Web crime_1


ಹಿವಾರ್‌ಕೇಡಿ ಪೊಲೀಸ್ ಠಾಣಾ ವ್ಯಾಪ್ತಿಯ ಪಿಂಡ್ರೈ ಸರಫಾ ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದ್ದು ಮೃತಳನ್ನು ಕುಮಾರಿ (35) ಎಂದು ಗುರುತಿಸಲಾಗಿದೆ.

ಮೃತಳ ಪತಿ ಜೋಗೇಶ್ ಕೆಲ ವರ್ಷಗಳ ಹಿಂದೆ ಸಾವನ್ನಪ್ಪಿದ್ದು, ಕೂಲಿ ಕಾರ್ಮಿಕಳಾಗಿ ಕೆಲಸ ಮಾಡಿಕೊಂಡು ತನ್ನೆರೆಡು ಮಕ್ಕಳನ್ನಾಕೆ ಪೋಷಿಸುತ್ತಿದ್ದಳು. ಹಿರಿಯ ಮಗ (ಆರೋಪಿ) 9ನೇ ತರಗತಿಯಲ್ಲಿ ಓದುತ್ತಿದ್ದು ಶುಕ್ರವಾರ ದಿನ ಆತ ಹೋಮ್ ವರ್ಕ್ ಮಾಡದೆ ಸಂಬಂಧಿಕರ ಮನೆಗೆ ಪಲಾಯನ ಮಾಡಿದ್ದ. ಮೊಂಡು ಬುದ್ಧಿಯ ಮಗನನ್ನು ಮನೆಗೆ ಕರೆತಂದ ತಾಯಿ ಅಭ್ಯಾಸ ಮಾಡದಿರುವುದಕ್ಕೆ ಬೈದು ಥಳಿಸಿದ್ದಾಳೆ. ಇದರಿಂದ ಸಿಟ್ಟಿಗೆದ್ದ ಬಾಲಕ ಕಬ್ಬಿಣದ ಸಲಾಕೆಯಿಂದ ಆಕೆಯ ತಲೆ ಮತ್ತು ಕುತ್ತಿಗೆ ಮೇಲೆ ಹಲ್ಲೆ ನಡೆಸಿದ್ದಾನೆ. ಪರಿಣಾಮ ಬಡ ತಾಯಿ ಸ್ಥಳದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾಳೆ, ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಕೃತ್ಯವೆಸಗಿದ ಬಳಿಕ ಬಾಲಕ ರಕ್ತಲೇಪಿತ ಬಟ್ಟೆಗಳನ್ನು ಬದಲಾಯಿಸಿ ಮನೆಯಿಂದ 1 ಕಿಮೀ ದೂರದಲ್ಲಿದ್ದ ಸಂಬಂಧಿಕರ ಮನೆಗೆ ಪಲಾಯನ ಮಾಡಿದ್ದಾನೆ.

ಸ್ಥಳೀಯರು ನೀಡಿದ ಮಾಹಿತಿಯ ಮೇರೆಗೆ ಪೊಲೀಸರು ಆರೋಪಿ ಬಾಲಕನನ್ನು ಬಂಧಿಸಿದ್ದಾರೆ.

ಬಾಲ ನ್ಯಾಯ ಮಂಡಳಿ ಮುಂದೆ ಹಾಜರು ಪಡಿಸಿ ಬಾಲಕನ್ನು ಬಾಲಾಪರಾಧಿ ಸುಧಾರಣಾಗೃಹಕ್ಕೆ ಕಳುಹಿಸಿ ಕೊಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ