ಆ್ಯಪ್ನಗರ

ಮಾಜಿ ಪ್ರಿಯತಮೆ ಜತೆ ಮಾತನಾಡಿದ್ದಕ್ಕೆ ಬಾಲಕನನ್ನು ಹತ್ಯೆ ಮಾಡಿದ ಬಾಲಕ

ಮೃತ ಕುದರುತುಲ್ಲ ಜತೆ ಅನೇಕ ದಿನಗಳಿಂದ ಇದೇ ವಿಷಯಕ್ಕೆ ಜಗಳವಾಡುತ್ತಿದ್ದ ಆರೋಪಿ, ಈ ವಿವಾದವನ್ನು ಮಾತನಾಡಿಕೊಂಡು ಬಗೆಹರಿಸಿಕೊಳ್ಳೋಣ ಎಂದು ಹೇಳಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದ. ಅಲ್ಲಿ ಆತನಿಗೆ ಡಜನ್‌ಗಿಂತ ಹೆಚ್ಚು ಬಾರಿ ಇರಿದು ಕೊಲ್ಲಲಾಗಿದೆ.

TIMESOFINDIA.COM 10 Feb 2019, 10:58 am
ಹೊಸದಿಲ್ಲಿ: ತನ್ನ ಮಾಜಿ ಪ್ರಿಯತಮೆಗೆ ಹತ್ತಿರವಾಗಿದ್ದಕ್ಕೆ ಕೆರಳಿದ 16 ವರ್ಷದ ಬಾಲಕನೊಬ್ಬ ತನ್ನ ಸ್ನೇಹಿತರ ಗ್ಯಾಂಗ್ ಕಟ್ಟಿಕೊಂಡು ಬಂದು ಯುವಕನೊಬ್ಬನನ್ನು ಚಾಕುವಿನಿಂದ ಇರಿದು ಕೊಲೆಗೈದ ಬೆಚ್ಚಿ ಬೀಳಿಸುವ ಘಟನೆ ಆನಂದ ಪರ್ಬತ್ ಪ್ರದೇಶದ ತಾಲಿ ಬಸ್ತಿ ಪ್ರದೇಶದಲ್ಲಿ ಶುಕ್ರವಾರ ನಡೆದಿದೆ.
Vijaya Karnataka Web Murder


ಮೃತ ಕುದರುತುಲ್ಲ ಜತೆ ಅನೇಕ ದಿನಗಳಿಂದ ಇದೇ ವಿಷಯಕ್ಕೆ ಜಗಳವಾಡುತ್ತಿದ್ದ ಆರೋಪಿ, ಈ ವಿವಾದವನ್ನು ಮಾತನಾಡಿಕೊಂಡು ಬಗೆಹರಿಸಿಕೊಳ್ಳೋಣ ಎಂದು ಹೇಳಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದ. ಅಲ್ಲಿ ಆತನಿಗೆ ಡಜನ್‌ಗಿಂತ ಹೆಚ್ಚು ಬಾರಿ ಇರಿದು ಕೊಲ್ಲಲಾಗಿದೆ.

ಆತನ ಕೂಗಾಟ ಕೇಳಿ ಹತ್ತಿರದ ಗ್ರಾಮವೊಂದರ ಜನರು ಸ್ಥಳಕ್ಕೋಡಿ ಬಂದಿದ್ದು, ಆರೋಪಿಗಳು ಚಾಕುವನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ಗಾಯಗೊಂಡ ಕುದರುತಲ್ಲಾನನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಆತ ಅದಾಗಲೇ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ಘೋಷಿಸಿದ್ದಾರೆ.

ಆರೋಪಿಗಳೆಲ್ಲರನ್ನು ಬಂಧಿಸಲಾಗಿದ್ದು, ಬಾಲಾಪರಾಧಿಗಳ ಮನಃಪರಿವರ್ತನಾ ಕೇಂದ್ರಕ್ಕೆ ಕಳುಹಿಸಲಾಗಿದೆ.

ಮುಖ್ಯ ಆರೋಪಿಯ ಗೆಳತಿ ಜಗಳವಾಡಿಕೊಂಡು ದೂರವಾದ ಬಳಿಕ ಕುದರುತುಲ್ಲಾಗೆ ಹತ್ತಿರವಾಗಿದ್ದಳು. ಇದರಿಂದ ಕೆರಳಿದ ಆರೋಪಿ ಆಕೆಯನ್ನು ಭೇಟಿಯಾಗಿ ಜಗಳವಾಡಿದ್ದ. ನಾನು ಕುದರುತುಲ್ಲಾನನ್ನು ಪ್ರೀತಿಸುತ್ತಿದ್ದು ಮತ್ತೆ ನನ್ನನ್ನು ಭೇಟಿಯಾಗಬೇಡ ಎಂದಾಕೆ ಕಡ್ಡಿ ಮುರಿದಂತೆ ಹೇಳಿದ್ದಳು. ಇದರಿಂದ ಕೋಪಗೊಂಡ ಆರೋಪಿ ಈ ಕೃತ್ಯವೆಸಗಿದ್ದಾನೆ.

ಬಾಲಕಿಗೆ ಕಿರುಕುಳ ನೀಡಬೇಡ ಎಂದು ಕುದರುತುಲ್ಲಾ ಈ ಹಿಂದೆ ಆರೋಪಿಗೆ ಎಚ್ಚರಿಕೆ ನೀಡಿದ್ದು, ಇದು ಕೂಡ ಅವರಿಬ್ಬರ ನಡುವಿನ ವೈರತ್ವಕ್ಕೆ ಕಾರಣವಾಗಿತ್ತು ಎಂದು ತಿಳಿದುಬಂದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ