ಆ್ಯಪ್ನಗರ

ಕೇರಳದಲ್ಲಿ ಭಾರೀ ವಿವಾದ ಸೃಷ್ಟಿಸಿದ 'ಬ್ರಾಹ್ಮಣರಿಗೆ ಮಾತ್ರ ಟಾಯ್ಲೆಟ್‌' ಫಲಕ!

ಕೇರಳದ ದೇವಾಲಯದ ಶೌಚಗೃಹದಲ್ಲಿ ಹಾಕಲಾಗಿದ್ದ 'ಬ್ರಾಹ್ಮಣರಿಗೆ ಮಾತ್ರ' ಎಂಬ ನಾಮಫಲಕ ದೊಡ್ಡ ವಿವಾದವನ್ನೇ ಸೃಷ್ಟಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದ್ದು, ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ.

Vijaya Karnataka Web 7 Mar 2020, 5:20 pm
ತ್ರಿಶೂರ್‌: ಕೇರಳದ ದೇವಾಲಯದ ಶೌಚಗೃಹದಲ್ಲಿ ಹಾಕಲಾಗಿದ್ದ 'ಬ್ರಾಹ್ಮಣರಿಗೆ ಮಾತ್ರ' ಎಂಬ ನಾಮಫಲಕ ದೊಡ್ಡ ವಿವಾದವನ್ನೇ ಸೃಷ್ಟಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದ್ದು, ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ.
Vijaya Karnataka Web Brahmins-only toilet


ಕೇರಳದ ತ್ರಿಶೂರಿನ ಕುಟ್ಟು ಮುಕ್ಕು ಮಹದೇವ ದೇವಸ್ಥಾನದಲ್ಲಿ ಒಟ್ಟು 3 ಶೌಚಗೃಹಗಳಿವೆ. ಈ ಮೂರು ಶೌಚಗೃಹಗಳೂ ನಾಮಫಲಕವನ್ನು ಹೊಂದಿವೆ. ಒಂದು ಕೇವಲ ಮಹಿಳೆಯರಿಗೆ ಮೀಸಲಿದ್ದರೆ, ಮತ್ತೊಂದು ಪುರುಷರಿಗೆ ಮೀಸಲಾಗಿದೆ. ಉಳಿದ ಇನ್ನೊಂದು ಶೌಚಗೃಹಕ್ಕೆ 'ಬ್ರಾಹ್ಮಣರಿಗೆ ಮಾತ್ರ' ಎಂಬ ನಾಮಫಲಕ ಹಾಕಲಾಗಿದೆ. ಇದು ಸಾಮಾಜಿಕ ಮಾಧ್ಯಮಗಳಲ್ಲಿ ದೊಡ್ಡ ಸದ್ದು ಮಾಡುತ್ತಿದೆ.

ಅರ್ಚಕರು ಹಾಗೂ ದೇಗುಲದ ಆಡಳಿತ ಮಂದಿ ಮಾತ್ರವೇ ಬಳಸುತ್ತಿದ್ದ ಈ ಟಾಯ್ಲೆಟ್‌ ಅನ್ನು ಕಳೆದ 20 ವರ್ಷಗಳಿಂದಲೂ ಹೀಗೇ ಪ್ರತ್ಯೇಕವಾಗಿ ಬಳಸಿಕೊಂಡು ಬರಲಾಗುತ್ತಿದೆ. ಇದುವರೆಗೂ ಯಾರೊಬ್ಬರೂ ಆಕ್ಷೇಪ ವ್ಯಕ್ತಪಡಿಸಿರಲಿಲ್ಲ ಎಂದು ದೇಗುಲದ ಆಡಳಿತ ಸಮಿತಿಯ ಅಧಿಕಾರಿ ಕಣ್ಣನ್ ತಿಳಿಸಿದ್ದಾರೆ.

ಪತ್ರಕರ್ತರು ಒಳ್ಳೆಯ ವಿಷಯಗಳನ್ನು ಮಾತ್ರ ಸಮಾಜಕ್ಕೆ ನೀಡಬೇಕು: ಡಾ.ವೀರೇಂದ್ರ ಹೆಗ್ಗಡೆ

ಇದೀಗ 'ಬ್ರಾಹ್ಮಣರಿಗೆ ಮಾತ್ರ' ಬೋರ್ಡ್ ಕಿತ್ತೊಗೆದು, 'ಸಿಬ್ಬಂದಿಗೆ ಮಾತ್ರ' ಎಂದು ಹೊಸ ಬೋರ್ಡ್‌ ನೇತು ಹಾಕಲಾಗಿದೆ ಎಂದು ಕಣ್ಣನ್ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ