ಆ್ಯಪ್ನಗರ

ಪುಲ್ವಾಮಾ ದಾಳಿಯ ಪ್ರಧಾನ ಸಂಚುಕೋರ ಪತ್ತೆ

ಎಲೆಕ್ಟ್ರಿಷಿಯನ್‌ ಕೆಲಸ ಮಾಡಿಕೊಂಡಿದ್ದ ಈ ಪಾತಕಿಯೇ ದಾಳಿಗೆ ಬಳಸಲಾದ ಮಾರುತಿ ಇಕೋ ಕಾರು ಹಾಗೂ ಭಾರಿ ಪ್ರಮಾಣದ ಆರ್‌ ಡಿಎಕ್ಸ್‌ ಪೂರೈಕೆ ಮಾಡಿದ್ದ ಎಂಬುದನ್ನು ಭದ್ರತಾ ಅಧಿಕಾರಿಗಳ ತಂಡ ಪತ್ತೆ ಮಾಡಿದೆ.

Vijaya Karnataka 11 Mar 2019, 10:33 am
ಶ್ರೀನಗರ: 44 ಯೋಧರನ್ನು ಬಲಿಪಡೆದ ಪುಲ್ವಾಮಾ ಉಗ್ರ ದಾಳಿಯ ಪ್ರಧಾನ ಸಂಚುಕೋರ ಜೈಷೆ ಮೊಹಮ್ಮದ್‌ ಉಗ್ರ 23 ವರ್ಷದ ಮುದಾಸಿರ್‌ ಅಹ್ಮದ್‌ ಖಾನ್‌ ಅಲಿಯಾಸ್‌
Vijaya Karnataka Web Pulwama

ಮೊಹಮ್ಮದ್‌ ಭಾಯ್‌ ಎಂದು ಗುರುತಿಸಲಾಗಿದೆ.

ಪುಲ್ವಾಮಾ ಜಿಲ್ಲೆಯ ಈತ ಪದವೀಧರ.

ಎಲೆಕ್ಟ್ರಿಷಿಯನ್‌ ಕೆಲಸ ಮಾಡಿಕೊಂಡಿದ್ದ ಈ ಪಾತಕಿಯೇ ದಾಳಿಗೆ ಬಳಸಲಾದ ಮಾರುತಿ ಇಕೋ ಕಾರು ಹಾಗೂ ಭಾರಿ ಪ್ರಮಾಣದ ಆರ್‌ ಡಿಎಕ್ಸ್‌ ಪೂರೈಕೆ ಮಾಡಿದ್ದ ಎಂಬುದನ್ನು ಭದ್ರತಾ ಅಧಿಕಾರಿಗಳ ತಂಡ ಪತ್ತೆ ಮಾಡಿದೆ. 2017ರಲ್ಲಿ ಜೈಷೆ ಉಗ್ರ ಸಂಘಟನೆ ಸೇರಿದ ಅಹ್ಮದ್‌ ಖಾನ್‌ ಕಮಾಂಡರ್‌ ನೂರ್‌ ಮೊಹಮ್ಮದ್‌ ತಂತ್ರೆ ಅಲಿಯಾಸ್‌ ‘ನೂರ್‌ ತ್ರಾಲಿ’ ಜತೆ ಸೇರಿಕೊಂಡು ಹಲವು ಉಗ್ರ ಕೃತ್ಯಗಳನ್ನು ನಡೆಸಿದ್ದ. 2018ರಲ್ಲಿ ಲೆಥಪೋರಾದ ಸಿಆರ್‌ಪಿಎಫ್‌ ಶಿಬಿರದ ಮೇಲೆ ನಡೆದ ಉಗ್ರ ದಾಳಿಯಲ್ಲೂ ಈತನ ಕೈವಾಡವಿದೆ ಎಂದು ಅಧಿಕಾರಿಗಳ ತಂಡ ಹೇಳಿದೆ.

ಫೆಬ್ರವರಿ 14ರಂದು ಸಿಆರ್‌ಪಿಎಫ್ ವಾಹನದ ಮೇಲೆ ನಡೆಸಿದ ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ 44 ಸೈನಿಕರು ಹುತಾತ್ಮರಾಗಿ ಅನೇಕರು ಗಾಯಗೊಂಡಿದ್ದರು. ಜೈಷೆ ಮೊಹಮ್ಮದ್ ಉಗ್ರ ಸಂಘಟನೆ ರೂಪಿಸಿದ ದಾಳಿ ಯೋಜನೆಯನ್ನು ಕಾರ್ಯರೂಪಕ್ಕೆ ತಂದವ ಕೇವಲ 21 ವರ್ಷ ವಯಸ್ಸಿನ ಚಿಗುರು ಮೀಸೆ ತರುಣ ಆದಿಲ್ ಅಹಮದ್ ಖಾನ್ ದರ್. ಈತ ಕಾಶ್ಮೀರದ ನಿವಾಸಿಯಾಗಿದ್ದ. 015ರಲ್ಲಿಯೇ ಆತ ಹಫೀಜನಾಗಿದ್ದ. ಆತನಿಗೆ ಸಂಪೂರ್ಣ ಕುರಾನ್ ಬಾಯಲ್ಲಿಯೇ ಇತ್ತು. ಧರ್ಮದ ಬಗ್ಗೆ ಆತನ ಅಭಿಮಾನ ಹೆಚ್ಚುತ್ತ ಹೋಯಿತು. 2016ರಲ್ಲಿ ಬುರ್ಹಾನ್ ವಾನಿ ಸಾವನ್ನಪ್ಪಿದ ಬಳಿಕ ನಡೆದ ಕಲ್ಲು ತೂರಾಟದಲ್ಲಿ ಆತನ ಕಾಲಿಗೆ ಗುಂಡು ತಗುಲಿತ್ತು. ಬಳಿಕ ಆತ ಮೂಲಭೂತವಾದಿಯಾಗಿ ಬದಲಾದ ಎಂದು ಹೇಳಲಾಗುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ