ಆ್ಯಪ್ನಗರ

15 ವರ್ಷಗಳ ನಿರಂತರ ಪ್ರಕ್ರಿಯೆಯಿಂದ ಮಸೂದ್ ಅಜರ್ ಜಾಗತಿಕ ಭಯೋತ್ಪಾದಕನಾಗಿದ್ದು: ಕಾಂಗ್ರೆಸ್

ಮನಮೋಹನ್ ಸಿಂಗ್ ಸರಕಾರ ಹಫೀಜ್‌ ಸಯೀದ್‌ಗಿಂತ ಅತಿದೊಡ್ಡ ಭಯೋತ್ಪಾದಕ ಲಖ್ವಿ ಸೇರಿ ಇತರ ಉಗ್ರರನ್ನು ಜಾಗತಿಕ ಭಯೋತ್ಪಾದಕ ಪಟ್ಟಿಗೆ ಸೇರಿಸುವಲ್ಲಿ ಯಶಸ್ವಿಯಾಗಿತ್ತು. ಆದರೆ, ಕೈ ಪಕ್ಷ ಇದನ್ನೆಂದೂ ಚುನಾವಣೆ ವಿಚಾರವಾಗಿ ಬಳಸಿಕೊಂಡಿಲ್ಲ ಎಂದು ಎಐಸಿಸಿ ವಕ್ತಾರ ರಾಜೀವ್ ಶುಕ್ಲಾ ಹೇಳಿದ್ದಾರೆ.

TIMESOFINDIA.COM 3 May 2019, 2:22 pm
ಹೊಸದಿಲ್ಲಿ: ಮಸೂದ್‌ ಅಜರ್‌ ಅನ್ನು ಜಾಗತಿಕ ಭಯೋತ್ಪಾದಕ ಪಟ್ಟಿಗೆ ವಿಶ್ವಸಂಸ್ಥೆ ಸೇರಿಸಿದ ವಿಚಾರದಲ್ಲಿ ರಾಜಕೀಯ ಕೆಸರೆರಚಾಟ ನಡೀತಿದೆ. ವಿಶ್ವಸಂಸ್ಥೆಯ ನಿರ್ಧಾರವನ್ನು ಆಡಳಿತಾರೂಢ ಬಿಜೆಪಿ ಕ್ರೆಡಿಟ್ ತೆಗೆದುಕೊಳ್ಳುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಅಲ್ಲದೆ, ಪ್ರಧಾನಿ ಮೋದಿ ರಾಷ್ಟ್ರೀಯ ಭದ್ರತೆಯ ವಿಚಾರದಲ್ಲಿ ರಾಜಕೀಯ ನಡೆಸುತ್ತಿದ್ದಾರೆ ಎಂದು ಸಹ ಕೈ ಪಕ್ಷ ಟೀಕೆ ಮಾಡಿದೆ.
Vijaya Karnataka Web masood azhar


ಮಸೂದ್ ಅಜರ್‌ ಅನ್ನು ಜಾಗತಿಕ ಭಯೋತ್ಪಾದಕ ಪಟ್ಟಿಗೆ ವಿಶ್ವಸಂಸ್ಥೆ ಸೇರಿಸಿರುವುದು ನಿರಂತರ 15 ವರ್ಷಗಳ ಕಾಲ ನಡೆದ ಪ್ರಕ್ರಿಯೆಯ ಫಲಿತಾಂಶ ಎಂದು ಕಾಂಗ್ರೆಸ್ ಹೇಳಿಕೊಂಡಿದೆ. ಅಲ್ಲದೆ, ಪುಲ್ವಾಮಾ ದಾಳಿಯ ಜತೆಗೆ ಗಡ್ಚಿರೋಲಿಯಲ್ಲಿ ನಡೆದ ನಕ್ಸಲರ ದಾಳಿಯನ್ನು ಒಟ್ಟಿಗೆ ಸೇರಿಸಿಕೊಂಡು ಕೇಂದ್ರ ಸರಕಾರ ಭದ್ರತಾ ವಿಚಾರದಲ್ಲಿ ವಿಫಲವಾಗಿದೆ ಎಂದು ಆರೋಪಿಸಿದೆ.

ಮನಮೋಹನ್ ಸಿಂಗ್ ಸರಕಾರ ಹಫೀಜ್‌ ಸಯೀದ್‌ಗಿಂತ ಅತಿದೊಡ್ಡ ಭಯೋತ್ಪಾದಕ ಲಖ್ವಿ ಸೇರಿ ಇತರ ಉಗ್ರರನ್ನು ಜಾಗತಿಕ ಭಯೋತ್ಪಾದಕ ಪಟ್ಟಿಗೆ ಸೇರಿಸುವಲ್ಲಿ ಯಶಸ್ವಿಯಾಗಿತ್ತು. ಆದರೆ, ಕೈ ಪಕ್ಷ ಇದನ್ನೆಂದೂ ಚುನಾವಣೆ ವಿಚಾರವಾಗಿ ಬಳಸಿಕೊಂಡಿಲ್ಲ ಎಂದು ಎಐಸಿಸಿ ವಕ್ತಾರ ರಾಜೀವ್ ಶುಕ್ಲಾ ಹೇಳಿದ್ದಾರೆ.

ಅಲ್ಲದೆ, ಅಜರ್‌ನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಿಸುವಂತೆ 2009ರಲ್ಲಿ ವಿಶ್ವಸಂಸ್ಥೆಗೆ ಯುಪಿಎ ಸರಕಾರ ಮನವಿ ಮಾಡಿಸತ್ತು. ಜತೆಗೆ, ಜಾಗತಿಕ ಸಮುದಾಯಕ್ಕೆ ಹಲವು ದಾಖಲೆಗಳನ್ನು ನೀಡಿತ್ತು.

ಮೋದಿ ಸರಕಾರಾವಧಿಯಲ್ಲಿ ಸತತವಾಗಿ ಗುಪ್ತಚರ ವೈಫಲ್ಯಗಳು ಸಂಭವಿಸಿದೆ. ಇದರಿಂದಾಗಿ ಭಯೋತ್ಪಾದಕ ದಾಳಿಗಳು ನಡೆಯುತ್ತಿದೆ ಎಂದು ಕಾಂಗ್ರೆಸ್ ವಕ್ತಾರೆ ರಾಗಿಣಿ ನಾಯಕ್ ಹೇಳಿದ್ದಾರೆ. ಆರ್‌ಡಿಎಕ್ಸ್‌ ಎಲ್ಲಿಂದ ಬಂದಿದ್ದು ಎಂದು ಉತ್ತರಿಸಲು ಕೇಂದ್ರ ಹಾಗೂ ಮಹಾರಾಷ್ಟ್ರ ಸರಕಾರಗಳು ವಿಫಲವಾಗಿವೆ ಎಂದು ಟೀಕೆ ಮಾಡಿದ್ದಾರೆ. ಅಲ್ಲದೆ, ನಕ್ಸಲಿಸಂ ವಿರುದ್ಧ ಮೋದಿ ತಮ್ಮ 56 ಇಂಚಿನ ಎದೆಯನ್ನು ತೋರಿಸುವುದು ಯಾವಾಗ ಎಂದು ರಾಗಿಣಿ ವ್ಯಂಗ್ಯವಾಡಿದ್ದಾರೆ.

ಇನ್ನು, ಭದ್ರತಾ ಸಂಬಂಧಿತ ವಿಚಾರಗಳನ್ನು ಕೇಂದ್ರ ಸರಕಾರ ಕೇವಲ ರಾಜಕೀಯಗೊಳಿಸುತ್ತಿದೆ. ಕೇವಲ ಕ್ರೆಡಿಟ್ ತೆಗೆದುಕೊಳ್ಳುವುದಕ್ಕೆ ಮುಂದಾಗುತ್ತದೆ ಎಂದು ಶುಕ್ಲಾ ಆರೋಪಿಸಿದ್ದಾರೆ. ಅಲ್ಲದೆ, ಬಿಜೆಪಿ ಸರಕಾರ ( ವಾಜಪೇಯಿ ಪ್ರಧಾನಿಯಾಗಿದ್ದಾಗ) ಜಮ್ಮು ಜೈಲಿನಿಂದ ಮಸೂದ್‌ ಅಜರ್‌ನನ್ನು ಬಿಡುಗಡೆ ಮಾಡಿದ ಬಳಿಕವೇ ಅವನು ಭಾರತಕ್ಕೆ ಸಮಸ್ಯೆಯ ಮೂಲವಾದ ಎಂಬ ಸತ್ಯವನ್ನು ಜನರಿಗೆ ತಿಳಿಸಬೇಕು ಎಂದು ಕಾಂಗ್ರೆಸ್ ವಕ್ತಾರ ಶುಕ್ಲಾ ಮೋದಿ ಸರಕಾರವನ್ನು ಕೇಳಿಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ