ಆ್ಯಪ್ನಗರ

ಮದುವೆ ಮಾಡಿಸಿದ ಪುರೋಹಿತನ ಜತೆ ನವವಿವಾಹಿತೆ ಪರಾರಿ

ಕಳೆದೆರಡು ವಾರಗಳ ಹಿಂದೆ ಆಕೆಯ ಮದುವೆಯಾಗಿದ್ದು, ಇದೇ ವ್ಯಕ್ತಿ ಅಂದು ಮದುವೆ ಶಾಸ್ತ್ರ ಮಾಡಿಸಲು ಬಂದಿದ್ದ ಎಂದು ತಿಳಿದುಬಂದಿದೆ.

Times Now 29 May 2019, 3:17 pm
ಸಿರೋಂಜ್: ಮದುವೆ ಶಾಸ್ತ್ರ ಮಾಡಿಸಲು ಬಂದಿದ್ದ ಪುರೋಹಿತನ ಜತೆ ನವವಿವಾಹಿತೆ ಪರಾರಿಯಾದ ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದೆ.
Vijaya Karnataka Web Marriage pooja


ಕಳೆದೆರಡು ವಾರಗಳ ಹಿಂದೆ ಆಕೆಯ ಮದುವೆಯಾಗಿದ್ದು, ಇದೇ ವ್ಯಕ್ತಿ ಅಂದು ಮದುವೆ ಶಾಸ್ತ್ರ ಮಾಡಿಸಲು ಬಂದಿದ್ದ ಎಂದು ತಿಳಿದುಬಂದಿದೆ.

ಮೇ 7ರಂದು ಅಸಾತ್ ಗ್ರಾಮದಲ್ಲಿ ಆಕೆಯ ಮದುವೆಯಾಗಿದ್ದು ಗ್ರಾಮದಲ್ಲಿರುವ ದೇವಸ್ಥಾನದ ಪೂಜಾರಿ ವಿನೋದ್ ಮಹಾರಾಜ್ ಮದುವೆ ಮಾಡಿಸಲು ಬಂದಿದ್ದ.

ಮದುವೆಯ ಮೂರು ದಿನಗಳ ಬಳಿಕ ಮಹಿಳೆ ತವರಿಗೆ ಬಂದಿದ್ದಳು. ಮೇ 23ರಂದು ಗ್ರಾಮದಲ್ಲಿ ಇನ್ನೊಂದು ಮದುವೆ ಇದ್ದು ಅಂದು ಕೂಡ ಆತನೇ ಪೂಜಾರಿಯಾಗಿ ಬರಬೇಕಿತ್ತು. ಆದರಾತ ಅಂದು ಬರಲೇ ಇಲ್ಲ.

ಇತ್ತ 15 ದಿನಗಳ ಹಿಂದೆ ಮದುವೆಯಾಗಿದ್ದ ನವ ವಧುವು ಕೂಡ ಮನೆಯಲ್ಲಿ ಕಾಣಿಸಲಿಲ್ಲ. ಹೀಗಾಗಿ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದರು. ಆಕೆ 1.5 ಲಕ್ಷ ರೂ ಮೌಲ್ಯದ ಬಂಗಾರ ಮತ್ತು 30ಸಾವಿರ ರೂಪಾಯಿಯೊಂದಿಗೆ ಪರಾರಿಯಾಗಿದ್ದಾಳೆ ಎಂದು ತಿಳಿದು ಬಂದಿದೆ.

ಅವರಿಬ್ಬರಲ್ಲು 2 ವರ್ಷಗಳಿಂದ ಪ್ರೇಮ ಸಂಬಂಧವಿತ್ತೆಂದು ಹೇಳಲಾಗುತ್ತಿದೆ.

ವರದಿಗಳ ಪ್ರಕಾರ ಪೂಜಾರಿ ವಿವಾಹಿತನಾಗಿದ್ದು, 2 ಮಕ್ಕಳ ತಂದೆಯಾಗಿದ್ದಾನೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ