ಆ್ಯಪ್ನಗರ

ಜಲಾವೃತಗೊಂಡ ಗ್ರಾಮದಲ್ಲೇ ನಡೆಯಿತು ಅಪರೂಪದ ಮದುವೆ..! ಮೊಣಕಾಲಿನವರೆಗಿನ ನೀರಿನಲ್ಲೇ ವರನ ಮೆರವಣಿಗೆ..!

ಬಿಹಾರದ ಮುಜಾಫುರ್‌ ನಗರದ ಹಳ್ಳಿಯೊಂದರಲ್ಲಿ ಕೊರೊನಾ ನೀತಿ ಸಂಹಿತೆಯ ಮಧ್ಯೆಯೂ ಈ ವಿವಾಹ ನಡೆದಿದ್ದು, ಇದಿಗ ಮದುವೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇಲ್ಲಿನ ಮೊಹಮ್ಮದ್ ಹಸನ್ ರಝಾ ಮತ್ತು ಮಜ್ದಾ ಖತೂನ್ ಅವರ ವಿವಾಹವನ್ನು ಈ ಹಿಂದೆ ನಿರ್ಣಯಿಸಲಾಗಿತ್ತು. ಆದರೆ ಕೊರೊನಾ ಸಾಂಕ್ರಾಮಿಕ ರೋಗದಿಂದ ಲಾಕ್‌ಡೌನ್ ಉಂಟಾದ ಪರಿಣಾಮ ಮದುವೆಯನ್ನು ಮುಂದೂಡಲಾಗಿತ್ತು. ಅದರಂತೆ ಇತ್ತೀಚೆಗೆ ಮದುವೆಗೆ ದಿನ ನಿಗದಿ ಪಡಿಸಲಾಗಿತ್ತು.

Agencies 11 Aug 2020, 6:15 pm
ಬಿಹಾರ: ಪ್ರವಾಹ ಉಂಟಾದಾಗ ಒಂದೊಮ್ಮೆ ಜಾಗ ಖಾಲಿ ಮಾಡಿ ನಮ್ಮ ಪ್ರಾಣ ಉಳಿಸಿಕೊಳ್ಳೋಣ ಅಂತಾ ಜನರು ಆ ಪ್ರದೇಶದಿಂದ ಇನ್ನೊಂದು ಕಡೆಗೆ ಸ್ಥಳಾಂತರ ಆಗೋದನ್ನು ನೋಡಿದ್ದೀವಿ. ಆದರೆ ಇಲ್ಲೊಂದು ಕಡೆ ಮಾತ್ರ ಮನೆ ಮಠಗಳಿಗೆ ನೀರು ನುಗ್ಗಿ ತಗ್ಗು ಪ್ರದೇಶಗಳೆಲ್ಲ ಪ್ರವಾಹದಿಂದ ಜಲಾವೃತವಾಗಿದ್ದರೂ ಕೂಡ ಆ ಗ್ರಾಮದ ಜನರು ಮದುವೆಯೊಂದನ್ನು ಮೆರವಣಿಗೆ ಮೂಲಕ ಅದ್ಧೂರಿಯಾಗಿ ಮಾಡಿ ಮುಗಿಸಿದ್ದಾರೆ.
Vijaya Karnataka Web Bihar


ಬಿಹಾರದ ಮುಜಾಫುರ್‌ ನಗರದ ಹಳ್ಳಿಯೊಂದರಲ್ಲಿ ಕೊರೊನಾ ನೀತಿ ಸಂಹಿತೆಯ ಮಧ್ಯೆಯೂ ಈ ವಿವಾಹ ನಡೆದಿದ್ದು, ಇದಿಗ ಮದುವೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇಲ್ಲಿನ ಮೊಹಮ್ಮದ್ ಹಸನ್ ರಝಾ ಮತ್ತು ಮಜ್ದಾ ಖತೂನ್ ಅವರ ವಿವಾಹವನ್ನು ಈ ಹಿಂದೆ ನಿರ್ಣಯಿಸಲಾಗಿತ್ತು. ಆದರೆ ಕೊರೊನಾ ಸಾಂಕ್ರಾಮಿಕ ರೋಗದಿಂದ ಲಾಕ್‌ಡೌನ್ ಉಂಟಾದ ಪರಿಣಾಮ ಮದುವೆಯನ್ನು ಮುಂದೂಡಲಾಗಿತ್ತು. ಅದರಂತೆ ಎರಡೂ ಕಡೆಯವರು ಸೇರಿ ಇತ್ತೀಚೆಗೆ ಮತ್ತೊಮ್ಮೆ ಮದುವೆಗೆ ದಿನ ನಿಗದಿ ಪಡಿಸಿದ್ದರು.

2005ರ ವೇಳೆಗೆ ತಂದೆ ಬದುಕಿರಲಿ, ಸತ್ತಿರಲಿ; ಆಸ್ತಿ ಮೇಲೆ ಮಗಳಿಗೂ ಸಮಾನ ಹಕ್ಕಿದೆ - ಸುಪ್ರೀಂ

ಆದರೆ ಎರಡನೇ ಸಲ ದಿನಾಂಕ ನಿಗದಿ ಪಡಿಸಿದಾಗಲೂ ಮದುವೆಗೆ ಬಿಹಾರದಲ್ಲಿ ಉಂಟಾಗಿರುವ ಪ್ರವಾಹ ಅಡ್ಡಿಯಾಗಿದ್ದು, ಆದರೆ ಎರಡನೇ ಸಲ ಮಾತ್ರ ಮತ್ತೆ ಮದುವೆಯನ್ನು ಮುಂದೂಡಲು ವರನ ಕಡೆಯವರು ಒಪ್ಪಿರಲಿಲ್ಲ. ಹೀಗಾಗಿ ಜಲಾವೃತಗೊಂಡಿರುವ ಗ್ರಾಮದಲ್ಲಿ ಮೊದಲೇ ನಿಶ್ಚಯಿಸಿದ ದಿನದಲ್ಲೇ ಮದುವೆ ಕಾರ್ಯಕ್ರಮವನ್ನು ಮಾಡಲು ನಿರ್ಧರಿಸಿದ್ದಾರೆ.

ಹೀಗಾಗಿ ಮುಸ್ಸಾಪುರ್‌ ಗ್ರಾಮದ ತಾಜ್‌ಪುರ್ ಪೊಲೀಸ್ ಠಾಣೆಯ ಬಳಿಯಿಂದ ಮುಜಾಫರ್‌ನಗರದ ಸಾಕ್ರಾ ಗ್ರಾಮದಲ್ಲಿರುವ ಭಟಾಂಡಿ ತನಕ ಮದುವೆ ಮೆರವಣಿಗೆ ನಡೆಸಿದ್ದು, ಮೊಣಕಾಲಿನ ತನಕ ನಿಂತಿದ್ದ ಪ್ರವಾಹದ ನೀರಿನಲ್ಲೇ ವಧು ವರರು ಸೇರಿ ನೂರಾರು ಜನರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದಾರೆ.ಇಲ್ಲಿನ ಮೊಹಮ್ಮದ್‌ಪುರ್‌ದಲ್ಲಿರುವ ತಿರ್ಹುತ್‌ ಕಾಲುವೆ ಭಾರೀ ಮಳೆಗೆ ಒಡೆದಿದ್ದರಿಂದ ತಗ್ಗು ಪ್ರದೇಶವಾಗಿರುವ ಭಟಾಂಡಿ ಗ್ರಾಮವನ್ನು ಪ್ರವಾಹದ ನೀರು ಸುತ್ತುವರೆದಿದೆ.

ಇಡುಕ್ಕಿ ಭೂಕುಸಿತ: ಸಾವಿನ ಸಂಖ್ಯೆ 52ಕ್ಕೆ ಏರಿಕೆ, ಕಣ್ಮರೆಯಾದವರಿಗಾಗಿ ಮುಂದುವರಿದ ಶೋಧ

ವರನ ಕಡೆಯವರು ವಧುವಿನ ಮನೆಗೆ ಬರುತ್ತಿದ್ದಂತೆ ಗ್ರಾಮವನ್ನು ಪ್ರವಾಹದ ನೀರು ಸುತ್ತುವರಿದಿರುವುದನ್ನು ಕಂಡು ಗಾಬರಿಗೊಳಗಾಗಿದ್ದಾರೆ. ನಂತರ ತಾವು ಬಂದಿದ್ದ ಕಾರ್‌ನ್ನು ಅಲ್ಲೇ ನಿಲ್ಲಿಸಿ ಸ್ಥಳೀಯರ ಸಹಾಯದಿಂದ ದೋಣಿಯ ಮೂಲಕ ವರ ಮತ್ತು ಆತನ ಕಡೆಯವರನ್ನು ವಧುವಿನ ಮನೆಗೆ ತಲುಪಿಸಿದ್ದಾರೆ. ವಿವಾಹವೇನೋ ಸರಾಗವಾಗಿ ನೆರವೇರಿದೆ. ಆದರೆ ಮೆರವಣಿಗೆಯಲ್ಲಿ ಭಾಗವಹಿಸಿದರಲ್ಲಿ ಅನೇಕರು ಮಾಸ್ಕ್‌ ಕೂಡ ಬಳಸದೆ ಕೊರೊನಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪವೂ ವ್ಯಕ್ತವಾಗಿದೆ.

ಕಾಶ್ಮೀರ: ಬಿಜೆಪಿಗರ ಸರಣಿ ಹತ್ಯೆ, ಭಯಗೊಂಡವರಿಂದ ರಾಜೀನಾಮೆ, ಭದ್ರತೆಯ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ