ಆ್ಯಪ್ನಗರ

ಕುದುರೆ ಸಾರೋಟಿನಲ್ಲಿ ವಿವಾಹ ಮಂಟಪಕ್ಕೆ ಬಂದ ವಧು

ತಲತಲಾಂತರದಿಂದ ನಡೆದುಕೊಂಡು ಬಂದ ಸಂಪ್ರದಾಯಗಳಿಗೆ ಬ್ರೇಕ್ ಹಾಕಿ ಮಹಿಳಾ ಸಬಲೀಕರಣದ ಬಗ್ಗೆ ಬಲವಾದ ಸಂದೇಶ ರವಾನಿಸುವ ಉದ್ದೇಶದಿಂದ ಬೇಹ್ರೂರ್ ಪಟ್ಟಣದ ವಧು ಸಾರೋಟದಲ್ಲಿ ಮದುವೆ ಸಮಾರಂಭಕ್ಕೆ ಆಗಮಿಸಿದ್ದಾರೆ.

ಟೈಮ್ಸ್ ಆಫ್ ಇಂಡಿಯಾ 21 Apr 2017, 4:29 pm
ಅಲ್ವಾರ್‌: ತಲತಲಾಂತರದಿಂದ ನಡೆದುಕೊಂಡು ಬಂದ ಸಂಪ್ರದಾಯಗಳಿಗೆ ಬ್ರೇಕ್ ಹಾಕಿ ಮಹಿಳಾ ಸಬಲೀಕರಣದ ಬಗ್ಗೆ ಬಲವಾದ ಸಂದೇಶ ರವಾನಿಸುವ ಉದ್ದೇಶದಿಂದ ಬೇಹ್ರೂರ್ ಪಟ್ಟಣದ ವಧು ಸಾರೋಟದಲ್ಲಿ ಮದುವೆ ಸಮಾರಂಭಕ್ಕೆ ಆಗಮಿಸಿದ್ದರು.
Vijaya Karnataka Web bride leads baraat makes a power statement
ಕುದುರೆ ಸಾರೋಟಿನಲ್ಲಿ ವಿವಾಹ ಮಂಟಪಕ್ಕೆ ಬಂದ ವಧು


ವಧುವಿನ ಅಲಂಕಾರದ ಉಡುಪಿನಲ್ಲಿಇಂಗ್ಲಿಷ್ ಸಾಹಿತ್ಯ ವಿಭಾಗದ ವಿದ್ಯಾರ್ಥಿ ಜಿಯಾ ಶರ್ಮಾ (25) ಅವರು ಕುದುರೆಯನ್ನೇರಿ ತಮ್ಮ ಮದುವೆ ಮೆರವಣಿಗೆಯಲ್ಲಿ ಪಾಲ್ಗೊಂಡರು. ವರನ ಕಡೆಯವರು ವಧುವಿಗೆ ಆತ್ಮೀಯ ಸ್ವಾಗತ ಕೋರಿದರು. ಈ ವಿಶೇಷವಾದ ಮದುವೆ ಮೆರವಣಿಗೆಯಲ್ಲಿ ವಧುವಿನ ಸ್ನೇಹಿತೆಯರು ನೃತ್ಯ ಮಾಡುತ್ತ ಸಂಭ್ರಮಿಸಿದರು.

ರಸ್ತೆಯ ಎರಡು ಬದಿ ಹಾಗೂ ಮನೆಯ ಮಹಡಿಯ ಮೇಲೆ ನಿಂತು ಜನರು ಈ ವಿಶೇಷ ಮದುವೆ ಮೆರವಣಿಗೆಯ ದೃಶ್ಯಗಳನ್ನು ಕಣ್ತುಂಬಿಕೊಂಡರು.

ತನ್ನ ಕುಟುಂಬ ಯಾವುದೇ ತರಹದ ವರದಕ್ಷಿಣೆ ನೀಡದೇ ವಿವಾಹ ಸಮಾರಂಭ ನಡೆಸಿಕೊಟ್ಟಿದೆ ಎಂದು ಜಿಯಾ ಶರ್ಮಾ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

'ಇಂತಹ ವಿವಾಹಗಳು ಸಮಾಜಕ್ಕೆ ಉತ್ತಮ ಸಂದೇಶ ರವಾನಿಸುತ್ತವೆ. ರಾಜಸ್ತಾನದ ಜನತೆ ಹೆಣ್ಣು ಮಗುವನ್ನು ಸ್ವೀಕರಿಸಲು ಹಿಂದೇಟು ಹಾಕುತ್ತಿದ್ದಾರೆ. ಈ ರೀತಿಯ ಸಾಮಾಜಿಕ ಸಂದೇಶ ನೀಡುವ ವಿವಾಹ ಸಮಾರಂಭಗಳಿಂದ ಗಂಡು ಮತ್ತು ಹೆಣ್ಣಿನ ನಡುವೆ ಯಾವುದೇ ವ್ಯತ್ಯಾಸ ಇಲ್ಲ ಎನ್ನುವುದನ್ನು ಮನವರಿಕೆ ಮಾಡಿಕೊಡುತ್ತದೆ' ಎಂದು ವರನ ತಂದೆ ಗಿರಾಜ್ ಶರ್ಮಾ ಅಭಿಪ್ರಾಯಪಟ್ಟಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ