ಆ್ಯಪ್ನಗರ

ತೂರಾಡುತ್ತ ಮದುವೆ ಮಂಟಪಕ್ಕೆ ಬಂದ ವರ, ಕುಡುಕ ಗಂಡನ್ನ ಒಲ್ಲೆ ಎಂದ ವಧು

ಕಂಠಪೂರ್ತಿ ಕುಡಿದು ತೂರಾಡುತ್ತಿದ್ದ ವರನನ್ನು ಮದುವೆಯಾಗಲು ನಿರಾಕರಿಸುವ ಮೂಲಕ ಯುವತಿಯೋರ್ವಳು ದಿಟ್ಟ ನಿಲುವನ್ನು ಪ್ರದರ್ಶಿಸಿದ್ದಾಳೆ. ಉತ್ತರ ಪ್ರದೇಶದ ಹರ್ದೋಯಿಯ ಬದೌಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಸಂಗ ನಡೆದಿದೆ.

Navbharat Times 20 Jun 2018, 1:16 pm
ಹರ್ದೋಯಿ: ಕಂಠಪೂರ್ತಿ ಕುಡಿದು ತೂರಾಡುತ್ತಿದ್ದ ವರನನ್ನು ಮದುವೆಯಾಗಲು ನಿರಾಕರಿಸುವ ಮೂಲಕ ಯುವತಿಯೋರ್ವಳು ದಿಟ್ಟ ನಿಲುವನ್ನು ಪ್ರದರ್ಶಿಸಿದ್ದಾಳೆ. ಉತ್ತರ ಪ್ರದೇಶದ ಹರ್ದೋಯಿಯ ಬದೌಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಸಂಗ ನಡೆದಿದೆ.
Vijaya Karnataka Web Marriage


ಮಂಟಪದಲ್ಲಿ ವರನೊಡನೆ ಕುಳಿತಿದ್ದ ವಧುವಿಗೆ, ಮದುಮಗ ಮತ್ತು ಆತನ ತಂದೆ ಕುಡಿದ ಮತ್ತಿನಲ್ಲಿರುವುದು ಬೆಳಕಿಗೆ ಬಂದಿದೆ. ತಕ್ಷಣ ಎದ್ದು ನಿಂತ ಆಕೆ ಇಂಥ ದುರಭ್ಯಾಸಕ್ಕೆ ಅಂಟಿಕೊಂಡಿರುವನನ್ನು ನಾನು ಕಟ್ಟಿಕೊಳ್ಳಲಾರೆ ಎಂದಿದ್ದಾಳೆ. ಆಗ ಎರಡು ಕಡೆಯವರ ನಡುವೆ ಗಲಾಟೆಯಾಗಿದೆ. ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು ಯಾರೇನೇ ಹೇಳಿದರೂ ಯುವತಿ ಮಾತ್ರ ತನ್ನ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ.

ಎರಡು ಕಡೆಯವರನ್ನು ಶಾಂತಗೊಳಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ವಧು ಮತ್ತು ವರನ ಕಡೆಯವರು ತಮ್ಮ ತಮ್ಮ ಮನೆಗೆ ಮರಳಿದ್ದಾರೆ.

ಸುತ್ತಮುತ್ತಲಿನ ಪ್ರದೇಶಗಳಲ್ಲಿ ಈ ವಿಷಯ ಚರ್ಚೆಯಾಗುತ್ತಿದ್ದು, ಯುವತಿಯ ನಿರ್ಧಾರಕ್ಕೆ ಎಲ್ಲೆಡೆಯಿಂದ ಪ್ರಶಂಸೆ ಹರಿದು ಬರುತ್ತಿದೆ.

ಮೂಲ ವರದಿ: https://navbharattimes.indiatimes.com/state/uttar-pradesh/others/seeing-drunk-groom-girl-refused-to-marry-on-last-moment/articleshow/64652432.cms

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ