ಆ್ಯಪ್ನಗರ

ಕಳಂಕಿತ ಅಧಿಕಾರಿಗೆ ಸೇತುವೆ ಹೊಣೆ: ಯೋಗಿ ಆದಿತ್ಯನಾಥ್ ಗರಂ

19 ಜನರನ್ನು ಬಲಿ ಪಡೆದ ವಾರಾಣಸಿಯ ರಸ್ತೆ ಮೇಲ್ಸೇತುವೆ ಕುಸಿತ ಪ್ರಕರಣವನ್ನು ಉತ್ತರ ಪ್ರದೇಶ ಸರಕಾರ ಗಂಭೀರವಾಗಿ ಪರಿಗಣಿಸಿದ್ದು, ಉತ್ತರ ಪ್ರದೇಶ ಸೇತುವೆ ನಿರ್ಮಾಣ ನಿಗಮದ ಹಿರಿಯ ...

Vijaya Karnataka Web 17 May 2018, 9:35 am
ಲಖನೌ: 19 ಜನರನ್ನು ಬಲಿ ಪಡೆದ ವಾರಾಣಸಿಯ ರಸ್ತೆ ಮೇಲ್ಸೇತುವೆ ಕುಸಿತ ಪ್ರಕರಣವನ್ನು ಉತ್ತರ ಪ್ರದೇಶ ಸರಕಾರ ಗಂಭೀರವಾಗಿ ಪರಿಗಣಿಸಿದ್ದು, ಉತ್ತರ ಪ್ರದೇಶ ಸೇತುವೆ ನಿರ್ಮಾಣ ನಿಗಮದ ಹಿರಿಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದೆ.
Vijaya Karnataka Web varanasi


ಈ ಹಿಂದೆ ಮಾಜಿ ಸಿಎಂ ಅಖಿಲೇಶ್‌ ಯಾದವ್‌ ನೇತೃತ್ವದ ಸರಕಾರದಲ್ಲಿ ಭ್ರಷ್ಟಾಚಾರ ಆರೋಪಗಳ ಹಿನ್ನೆಲೆಯಲ್ಲಿ ಅಮಾನತುಗೊಂಡಿದ್ದ ರಂಜನ್‌ ಮಿತ್ತಲ್‌ ಬಿಜೆಪಿ ಸರಕಾರ ಬಂದ ಬಳಿಕ ಪುನಃ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಕಗೊಂಡಿದ್ದರು. ಕಳಂಕ ಇದ್ದರೂ ಮರುನೇಮಕ ಆದದ್ದು ಹೇಗೆ ಎಂಬ ಬಗ್ಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ವರದಿ ಕೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

ರಾಜ್ಯದ ರಸ್ತೆಗಳನ್ನು ಗುಂಡಿಮುಕ್ತವಾಗಿಸುವ ಗುರಿಯನ್ನು ಸರಕಾರ ಹಾಕಿಕೊಂಡಿದೆ. ಆದಾಗ್ಯೂ ಲೋಕೋಪಯೋಗಿ ಇಲಾಖೆ ಅದಕ್ಕೆ ಪೂರಕ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿಲ್ಲ. ಉಪ ಮುಖ್ಯಮಂತ್ರಿ ಕೇಶವ ಪ್ರಸಾದ್‌ ಮೌರ್ಯ ಅವರೇ ಲೋಕೋಪಯೋಗಿ ಖಾತೆಯನ್ನು ನಿರ್ವಹಿಸುತ್ತಿದ್ದಾರೆ ಎನ್ನುವುದು ಮಹತ್ವದ ಅಂಶ. ಮೌರ್ಯ ಅವರು ಪಿಡಬ್ಲ್ಯೂಡಿ ಉಸ್ತುವಾರಿ ಹೊತ್ತುಕೊಂಡ ಬಳಿಕ ಮಿತ್ತಲ್‌ ಅವರಿಗೆ ಎಲ್ಲಿಲ್ಲದ ಮನ್ನಣೆ ಕೊಟ್ಟಿದ್ದಲ್ಲದೇ ಸೇತುವೆ ನಿಗಮದ ವ್ಯವಸ್ಥಾಪಕರಾಗಿ ಮರುನೇಮಕ ಮಾಡಿದ್ದರು. ಪ್ರಧಾನಿ ಮೋದಿ ಅವರ ತವರು ಕ್ಷೇತ್ರ ವಾರಾಣಸಿಯ ಮೇಲ್ಸೇತುವೆ ನಿರ್ಮಾಣ ಕಾಮಗಾರಿಗೆ ನಿಗಮವು ಅನನುಭವಿ ವ್ಯವಸ್ಥಾಪಕರಗಳನ್ನೇ ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಿತ್ತು ಎನ್ನುವುದೂ ಬೆಳಕಿಗೆ ಬಂದಿದೆ.

ಯೋಗಿ ಭೇಟಿ:

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಬುಧವಾರ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಫೋರೆನ್ಸಿಕ್‌ ಲ್ಯಾಬ್‌ ತಜ್ಞರೂ ಗುಣಮಟ್ಟ ತಪಾಸಣೆಗಾಗಿಮೇಲ್ಸೇತುವೆ ಕಾಮಗಾರಿಗೆ ಬಳಸುತ್ತಿರುವ ಸಾಮಗ್ರಿಗಳ ಮಾದರಿಗಳನ್ನು ಸಂಗ್ರಹಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ