ಆ್ಯಪ್ನಗರ

ವೀರಪುತ್ರನಿಗಾಗಿ ಕಾಯುತ್ತಿದೆ ಭಾರತ: ಅಭಿನಂದನ್ ವಾಪಸ್ ಕರೆತರಲು ಅಭಿಯಾನ

ಅಭಿನಂದನ್‌ ಅವರನ್ನು ವಾಪಸ್‌ ಕರೆತರಲು ಮೋದಿಯವರು ಮಾತುಕತೆ ನಡೆಸಬೇಕು ಎಂಬ ಅಭಿಪ್ರಾಯವೂ ನೆಟ್ಟಿಗರಿಂದ ವ್ಯಕ್ತವಾಗಿದೆ.

Vijaya Karnataka 28 Feb 2019, 7:49 am
ಹೊಸದಿಲ್ಲಿ: ಪಾಕ್‌ ವಶದಲ್ಲಿರುವ ಅಭಿನಂದನ್‌ ವರ್ಧಮಾನ್‌ ಅವರನ್ನು ವಾಪಸ್‌ ಕರೆತರುವಂತೆ ಆಗ್ರಹಿಸಿ ಆನ್‌ಲೈನ್‌ ಅಭಿಯಾನ ಆರಂಭವಾಗಿದೆ.
Vijaya Karnataka Web abhinav2


ಅಭಿನಂದನ್‌ ಅವರನ್ನು ವಾಪಸ್‌ ಕರೆತರಲು ಮೋದಿಯವರು ಮಾತುಕತೆ ನಡೆಸಬೇಕು ಎಂಬ ಅಭಿಪ್ರಾಯವೂ ನೆಟ್ಟಿಗರಿಂದ ವ್ಯಕ್ತವಾಗಿದೆ.

ಈ ಮಧ್ಯೆ, ಅಭಿನಂದನ್‌ ಸುರಕ್ಷಿತವಾಗಿ ವಾಪಸ್‌ ಬರಲೆಂದು ಪ್ರಾರ್ಥಿಸುವುದಾಗಿ ಕೆಲವರು ಹೇಳಿದ್ದಾರೆ.

ಕುಟುಂಬ ಸದಸ್ಯರಲ್ಲಿ ಆತಂಕ: ಪಾಕ್‌ನಲ್ಲಿ ಅಭಿನಂದನ್‌ ಅವರ ಬಂಧನದ ಸುದ್ದಿಯು ಚೆನ್ನೈನಲ್ಲಿ ನೆಲೆಸಿರುವ ಕುಟುಂಬದ ಪಾಲಿಗೆ ಬರಸಿಡಿಲು ಬಡಿದಂತಾಗಿದೆ. ತಮ್ಮ ಮಗನನ್ನು ಕೂಡಲೇ ಕರೆತರಬೇಕೆಂದು ಪೋಷಕರು ಮತ್ತು ಸಂಬಂಧಿಕರು ಒತ್ತಾಯಿಸಿದ್ದಾರೆ.

ರಕ್ತಸಿಕ್ತ ಫೋಟೊ ಬಗ್ಗೆ ಆಕ್ಷೇಪ

ಪಾಕಿಸ್ತಾನದಲ್ಲಿ ಬಂಧಿಯಾಗಿರುವ ವಾಯುಪಡೆ ವಿಂಗ್‌ ಕಮಾಂಡರ್‌ ಅಭಿನಂದನ್‌ ಅವರ ಜತೆ ಪಾಕ್‌ ಅಮಾನವೀಯವಾಗಿ ನಡೆದುಕೊಂಡಿರುವುದನ್ನು ಭಾರತ ತೀವ್ರವಾಗಿ ಖಂಡಿಸಿದೆ.

ಇದೇ ವೇಳೆ ಥಳಿತದಿಂದ ಗಾಯಗೊಂಡ ಅಭಿನಂದನ್‌ ಅವರನ್ನು ಅಸಭ್ಯ ರೀತಿಯಲ್ಲಿ ತೋರಿಸಿರುವ ಬಗ್ಗೆಯೂ ಭಾರತ ಆಕ್ಷೇಪ ವ್ಯಕ್ತಪಡಿಸಿದೆ.

''ಬಂಧಿತ ಸಿಬ್ಬಂದಿಯ ಗುರುತನ್ನು ಚಿತ್ರಸಮೇತ ಬಹಿರಂಗಪಡಿಸುವುದು ಅಂತಾರಾಷ್ಟ್ರೀಯ ಕಾನೂನು ಮತ್ತು ಜಿನೇವಾ ಒಪ್ಪಂದದ ಉಲ್ಲಂಘನೆ. ಅಂಥದ್ದರಲ್ಲಿ ರಕ್ತಸ್ರಾವದಿಂದ ಬಳಲುತ್ತಿರುವ ಅಭಿನಂದನ್‌ ಅವರಿಗೆ ಪ್ರಥಮ ಚಿಕಿತ್ಸೆಯನ್ನೂ ನೀಡಿದೆ ಫೋಟೊ ಹರಿಬಿಟ್ಟಿರುವುದು ಅಂತಾರಾಷ್ಟ್ರೀಯ ನಿಯಮಗಳ ಉಲ್ಲಂಘನೆ. ಇದಕ್ಕೆ ಭಾರತ ತೀವ್ರವಾಗಿ ಆಕ್ಷೇಪಿಸುತ್ತದೆ,'' ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ