[ನವ್ ಭಾರತ್ ಟೈಮ್ಸ್ನಲ್ಲಿ 21 ಆಗಸ್ಟ್ 2018ರಂದು ಪ್ರಕಟವಾದ ಸುದ್ದಿ]
ಚೆನ್ನೈ: ಊಟದ ಪ್ಯಾಕಿಂಗ್ಗಾಗಿ ಪ್ಲಾಸ್ಟಿಕ್ ಡಬ್ಬಗಳನ್ನು ಬಳಸದಂತೆ ಜನರಿಗೆ ಪ್ರೇರಣೆ ನೀಡಲು ಮುಂದಾಗಿರುವ ತಮಿಳುನಾಡಿನ ಕೆಲ ಹೋಟೆಲ್ಗಳು ನೀವೇ ಪಾತ್ರೆ ತಂದರೆ ಆಹಾರದಲ್ಲಿ ರಿಯಾಯತಿ ನೀಡಲಾಗುವುದು ಎಂದು ಘೋಷಿಸಿವೆ.
2019, ಜನವರಿ 1 ರಿಂದ ಪ್ಲಾಸ್ಟಿಕ್ ನಿಷೇಧ ಮಾಡುವುದಾಗಿ ರಾಜ್ಯ ಸರಕಾರ ಘೋಷಿಸಿರುವ ಹಿನ್ನೆಲೆಯಲ್ಲಿ ಹೋಟೆಲ್ ಉದ್ಯೋಗಿಗಳು ಈ ವಿನೂತನ ನಡೆಯನ್ನಿಟ್ಟಿದ್ದಾರೆ.
ನಮ್ಮ ಈ ಆಫರ್ ಊಟದ ಪಾರ್ಸಲ್ ಕೊಂಡು ಹೋಗಲು ತಮ್ಮದೇ ಪಾತ್ರೆ ತರಲು ಗ್ರಾಹಕರಿಗೆ ಈ ಪ್ರೇರಣೆ ನೀಡಲಿದೆ. 10,000 ಕ್ಕೂ ಹೆಚ್ಚು ಸದಸ್ಯರನ್ನು ಹೊಂದಿರುವ ತಮಿಳುನಾಡು ಹೋಟೆಲ್ ಅಸೋಸಿಯೇಷನ್ ಪಾತ್ರೆ ತಂದವರಿಗೆ ಈಗಾಗಲೇ ಬಿಲ್ನಲ್ಲಿ 5% ರಿಯಾಯತಿಯನ್ನು ಘೋಷಿಸಿದೆ, ಎಂದು ಅಸೋಸಿಯೇಷನ್ ಅಧ್ಯಕ್ಷ ಎಮ್ ರವಿ ತಿಳಿಸಿದ್ದಾರೆ.
ಹೋಟೆಲ್ ಉದ್ಯಮಿಗಳ ಈ ಪರಿಸರ ಸ್ನೇಹಿ ನಡೆ ಎಲ್ಲರಿಂದಲೂ ಶ್ಲಾಘನೆಗೆ ಪಾತ್ರವಾಗಿದೆ.
ಚೆನ್ನೈ: ಊಟದ ಪ್ಯಾಕಿಂಗ್ಗಾಗಿ ಪ್ಲಾಸ್ಟಿಕ್ ಡಬ್ಬಗಳನ್ನು ಬಳಸದಂತೆ ಜನರಿಗೆ ಪ್ರೇರಣೆ ನೀಡಲು ಮುಂದಾಗಿರುವ ತಮಿಳುನಾಡಿನ ಕೆಲ ಹೋಟೆಲ್ಗಳು ನೀವೇ ಪಾತ್ರೆ ತಂದರೆ ಆಹಾರದಲ್ಲಿ ರಿಯಾಯತಿ ನೀಡಲಾಗುವುದು ಎಂದು ಘೋಷಿಸಿವೆ.
2019, ಜನವರಿ 1 ರಿಂದ ಪ್ಲಾಸ್ಟಿಕ್ ನಿಷೇಧ ಮಾಡುವುದಾಗಿ ರಾಜ್ಯ ಸರಕಾರ ಘೋಷಿಸಿರುವ ಹಿನ್ನೆಲೆಯಲ್ಲಿ ಹೋಟೆಲ್ ಉದ್ಯೋಗಿಗಳು ಈ ವಿನೂತನ ನಡೆಯನ್ನಿಟ್ಟಿದ್ದಾರೆ.
ನಮ್ಮ ಈ ಆಫರ್ ಊಟದ ಪಾರ್ಸಲ್ ಕೊಂಡು ಹೋಗಲು ತಮ್ಮದೇ ಪಾತ್ರೆ ತರಲು ಗ್ರಾಹಕರಿಗೆ ಈ ಪ್ರೇರಣೆ ನೀಡಲಿದೆ. 10,000 ಕ್ಕೂ ಹೆಚ್ಚು ಸದಸ್ಯರನ್ನು ಹೊಂದಿರುವ ತಮಿಳುನಾಡು ಹೋಟೆಲ್ ಅಸೋಸಿಯೇಷನ್ ಪಾತ್ರೆ ತಂದವರಿಗೆ ಈಗಾಗಲೇ ಬಿಲ್ನಲ್ಲಿ 5% ರಿಯಾಯತಿಯನ್ನು ಘೋಷಿಸಿದೆ, ಎಂದು ಅಸೋಸಿಯೇಷನ್ ಅಧ್ಯಕ್ಷ ಎಮ್ ರವಿ ತಿಳಿಸಿದ್ದಾರೆ.
ಹೋಟೆಲ್ ಉದ್ಯಮಿಗಳ ಈ ಪರಿಸರ ಸ್ನೇಹಿ ನಡೆ ಎಲ್ಲರಿಂದಲೂ ಶ್ಲಾಘನೆಗೆ ಪಾತ್ರವಾಗಿದೆ.