ಆ್ಯಪ್ನಗರ

ಬ್ರಿಟನ್‌ನಿಂದ ಹಿಂದಿರುಗಿದ ರಾಮ, ಸೀತೆ, ಲಕ್ಷ್ಮಣ; ಕಳುವಾಗಿದ್ದ ಪ್ರತಿಮೆ 40 ವರ್ಷದ ಬಳಿಕ ವಾಪಸ್‌!

​​ತಮಿಳುನಾಡಿನ ನಾಗಪಟ್ಟಣಂ ಜಿಲ್ಲೆಯ ಅನಂತಮಂಗಲಂನ ರಾಜಗೋಪಾಲಸ್ವಾಮಿ ದೇವಸ್ಥಾನದಿಂದ 1978ರಲ್ಲಿ ರಾಮ, ಸೀತಾ ಮತ್ತು ಲಕ್ಷ್ಮಣರ ವಿಗ್ರಹಗಳು ಕಳುವಾಗಿದ್ದವು. ಈ ವಿಗ್ರಹಗಳು ಅಂತಾರಾಷ್ಟ್ರೀಯ ಸ್ಮಗ್ಲರ್‌ಗಳ ಮೂಲಕ ಲಂಡನ್‌ನಲ್ಲಿ ತಲುಪಿದ್ದ ವಿಷಯವನ್ನು ಅರಿತ ಭಾರತವು ಇದನ್ನು ಹಿಂಪಡೆಯಲು ಸಾಕಷ್ಟು ಪ್ರಯತ್ನ ಪಟ್ಟಿತ್ತು.

Agencies 17 Sep 2020, 7:22 am
ಲಂಡನ್‌: ವಿಜಯನಗರ ಸಾಮ್ರಾಜ್ಯಕ್ಕೆ ಸೇರಿದ್ದ ತಮಿಳುನಾಡಿನ ಇತಿಹಾಸ ಪ್ರಸಿದ್ಧ ದೇವಸ್ಥಾನದಿಂದ ಸುಮಾರು 40 ವರ್ಷದ ಹಿಂದೆ ಕಳುವಾಗಿದ್ದ ರಾಮ, ಲಕ್ಷ್ಮಣ ಮತ್ತು ಸೀತಾ ದೇವಿಯ ಕಂಚಿನ ವಿಗ್ರಹಗಳನ್ನು ಬ್ರಿಟನ್‌ ಬುಧವಾರ ಭಾರತಕ್ಕೆ ಮರಳಿಸಿದೆ. ಲಂಡನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ಅಲ್ಲಿನ ಪೊಲೀಸ್‌ ಪಡೆ ಇದನ್ನು ಹಸ್ತಾಂತರಿಸಿದೆ ಎಂದು ಕೇಂದ್ರ ಪ್ರವಾಸೋದ್ಯಮ ಸಚಿವಾಲಯದ ಹೇಳಿಕೆ ತಿಳಿಸಿದೆ.
Vijaya Karnataka Web ram laxamn


ತಮಿಳುನಾಡಿನ ನಾಗಪಟ್ಟಣಂ ಜಿಲ್ಲೆಯ ಅನಂತಮಂಗಲಂನ ರಾಜಗೋಪಾಲಸ್ವಾಮಿ ದೇವಸ್ಥಾನದಿಂದ 1978ರಲ್ಲಿ ರಾಮ, ಸೀತಾ ಮತ್ತು ಲಕ್ಷ್ಮಣರ ವಿಗ್ರಹಗಳು ಕಳುವಾಗಿದ್ದವು. ಈ ವಿಗ್ರಹಗಳು ಅಂತಾರಾಷ್ಟ್ರೀಯ ಸ್ಮಗ್ಲರ್‌ಗಳ ಮೂಲಕ ಲಂಡನ್‌ನಲ್ಲಿ ತಲುಪಿದ್ದ ವಿಷಯವನ್ನು ಅರಿತ ಭಾರತವು ಇದನ್ನು ಹಿಂಪಡೆಯಲು ಸಾಕಷ್ಟು ಪ್ರಯತ್ನ ಪಟ್ಟಿತ್ತು.

ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಪ್ರಹ್ಲಾದ್‌ ಪಟೇಲ್‌ ಪಾಲ್ಗೊಂಡಿದ್ದ ವರ್ಚುವ್ಯಲ್‌ ಸಭೆಯಲ್ಲಿ ವಿಗ್ರಹಗಳನ್ನು ಲಂಡನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ಅಲ್ಲಿನ ಪೊಲೀಸ್‌ ಪಡೆ ಹಸ್ತಾಂತರಿಸಿದೆ. ವಿಗ್ರಹಗಳನ್ನು ಮರಳಿ ಪಡೆಯಲು ಶ್ರಮಿಸಿದ ತಮಿಳುನಾಡು ಸರಕಾರ, ಭಾರತೀಯ ಪುರಾತತ್ವ ಇಲಾಖೆ, ಬ್ರಿಟನ್‌ ಪೊಲೀಸ್‌ ಪಡೆ ಹಾಗೂ ರಾಜತಾಂತ್ರಿಕ ಅಧಿಕಾರಿ ವರ್ಗಕ್ಕೆ ಸಚಿವರು ಮೆಚ್ಚಗೆ ವ್ಯಕ್ತಪಡಿಸಿದ್ದಾರೆ.

ದಿಲ್ಲಿ ಗಲಭೆ: ಪೊಲೀಸರಿಂದ 17,500 ಪುಟಗಳ ಚಾರ್ಜ್‌ಶೀಟ್‌ ಸಲ್ಲಿಕೆ, 15 ಮಂದಿ ವಿರುದ್ಧ ಗಂಭೀರ ಆರೋಪ

ಸ್ವಾತಂತ್ರ್ಯನಂತರ 2013ರವರೆಗೂ ಕಳುವಾಗಿದ್ದ ಇಂತಹ 13 ಪ್ರಾಚೀನ ಕಲಾಕೃತಿಗಳು ವಿದೇಶಗಳಿಂದ ತರಲಾಗಿತ್ತು. ಆದರೆ 2014ರ ಬಳಿಕ ಮೋದಿ ಸರಕಾರದ ಪ್ರಯತ್ನಗಳಿಂದ 40ಕ್ಕೂ ಹೆಚ್ಚು ಪ್ರಾಚೀನ ಕಲಾಕೃತಿಗಳನ್ನು ವಿದೇಶಗಳಿಂದ ತರಲಾಗಿದೆ ಎಂದು ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ