ಆ್ಯಪ್ನಗರ

ಕಾಶ್ಮೀರ ವಿಚಾರದಲ್ಲಿ ಮೋದಿ ಸರ್ಕಾರಕ್ಕೆ ಕುಟುಕಿದ್ದ ಬ್ರಿಟನ್ ಸಂಸದೆ ಭಾರತ ಪ್ರವೇಶಕ್ಕೆ ಬ್ರೇಕ್..!

ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370ನೇ ವಿಧಿಯನ್ನು ಕೇಂದ್ರ ಸರಕಾರ ಆಗಸ್ಟ್‌ 5ರಂದು ರದ್ದುಪಡಿಸಿ, ಕಣಿವೆಯಲ್ಲಿ ಕಠಿಣ ನಿರ್ಬಂಧಗಳನ್ನು ಹೇರಿದ್ದನ್ನು ಖಂಡಿಸಿ ಡೆಬ್ಬಿ ಅವರು ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಲೇಖನ ಬರೆದಿದ್ದರು.

TIMESOFINDIA.COM 17 Feb 2020, 8:52 pm
ಹೊಸ ದಿಲ್ಲಿ: ಜಮ್ಮು-ಕಾಶ್ಮೀರ ವಿಚಾರದಲ್ಲಿ ಕೇಂದ್ರ ಸರಕಾರ ಕೈಗೊಂಡಿರುವ ದಿಟ್ಟ ಕ್ರಮಗಳ ಕಟು ಟೀಕಾಕಾರರಾಗಿರುವ ಬ್ರಿಟನ್‌ ಸಂಸದೆ ಡೆಬ್ಬಿ ಅಬ್ರಹಾಮ್ಸ್‌ ಅವರನ್ನು ದೇಶ ಪ್ರವೇಶಿಸದಂತೆ ದಿಲ್ಲಿ ವಿಮಾನ ನಿಲ್ದಾಣದಲ್ಲಿಯೇ ನಿರ್ಬಂಧಿಸಿದ ಘಟನೆ ಸೋಮವಾರ ನಡೆದಿದೆ.
Vijaya Karnataka Web britain mp
ಕಾಶ್ಮೀರ ವಿಚಾರದಲ್ಲಿ ಮೋದಿ ಸರ್ಕಾರಕ್ಕೆ ಕುಟುಕಿದ್ದ ಬ್ರಿಟನ್ ಸಂಸದೆ ಭಾರತ ಪ್ರವೇಶಕ್ಕೆ ಬ್ರೇಕ್..!


ಅಕ್ಟೋಬರ್‌ವರೆಗೂ ಸಿಂಧುವಾಗಿರುವ ಇ-ವೀಸಾದಡಿ ದುಬೈನಿಂದ ಬೆಳಗ್ಗೆ 8.50ಕ್ಕೆ ಹೊರಟು ದಿಲ್ಲಿ ಏರ್‌ಪೋರ್ಟ್‌ಗೆ ಬಂದಿಳಿದ ಡೆಬ್ಬಿ ಅಬ್ರಹಾಮ್ಸ್‌ ಅವರಿಗೆ ‘ನಿಮ್ಮ ವೀಸಾವನ್ನು ತಿರಸ್ಕರಿಸಲಾಗಿದೆ’ ಎಂದು ವಲಸೆ ಅಧಿಕಾರಿಗಳು ಮಾಹಿತಿ ನೀಡಿದರಲ್ಲದೇ ಗಡಿಪಾರು ಘಟಕದಲ್ಲಿಇರಿಸಿದರು. ಎರಡು ದಿನಗಳ ಭಾರತ ಪ್ರವಾಸಕ್ಕೆ ಆಗಮಿಸಿದ್ದ ಅವರು ಜಮ್ಮು-ಕಾಶ್ಮೀರಕ್ಕೆ ಭೇಟಿ ನೀಡುವ ಉದ್ದೇಶ ಹೊಂದಿದ್ದರು. ಅವರು ಕಾಶ್ಮೀರ ಕುರಿತ ಸರ್ವಪಕ್ಷ ಸಂಸದೀಯ ತಂಡದ ಮುಖ್ಯಸ್ಥೆಯೂ ಹೌದು.

ಈ ಘಟನೆ ಬೆನ್ನಲ್ಲೇ ಡೆಬ್ಬಿ ಹೇಳಿಕೆಯೊಂದನ್ನು ಬಿಡುಗಡೆ ಮಾಡಿ, ನಿಲ್ದಾಣದ ವಲಸೆ ವಿಭಾಗದ ಅಧಿಕಾರಿಗಳು ತಮ್ಮನ್ನು ಕ್ರಿಮಿನಲ್‌ನಂತೆ ನೋಡಿ ಒರಟಾಗಿ ವರ್ತಿಸಿದರು ಎಂದು ಆಪಾದಿಸಿದ್ದಾರೆ. ಆದರೆ ಈ ಆರೋಪಗಳನ್ನು ಅಲ್ಲಗಳೆದಿರುವ ಸರಕಾರದ ಮೂಲಗಳು, ಅವರ ಬಳಿ ಸಿಂಧುವಾಗಿದ್ದ ವೀಸಾ ಇರಲಿಲ್ಲ. ಈ ಕುರಿತು ಅವರಿಗೆ ಮಾಹಿತಿ ನೀಡಲಾಗಿತ್ತು ಎಂದು ಹೇಳಿವೆ. ಆದ್ರೆ, ವಿದೇಶಾಂಗ ವ್ಯವಹಾರಗಳ ಸಚಿವಾಲಯದಿಂದ ಯಾವುದೇ ಸ್ಪಷ್ಟನೆ ಹೊರಬಿದ್ದಿಲ್ಲ.

ಏನವರ ಆರೋಪ: ‘ಎಲ್ಲರ ಜತೆ ಸರತಿಯಲ್ಲಿ ನಿಂತು ಭಾವಚಿತ್ರ ಇರುವ ನನ್ನ ಇ-ವೀಸಾ ಸೇರಿ ಎಲ್ಲ ದಾಖಲೆಗಳನ್ನು ಹಾಜರುಪಡಿಸಿದೆ. ನಂತರ ಅಧಿಕಾರಿ ಅದಕ್ಕೆ ಒಪ್ಪಿಗೆ ಸೂಚಿಸುವ ರೀತಿಯಲ್ಲಿ ತಲೆಯಾಡಿಸುತ್ತಲೇ ನಿಮ್ಮ ವೀಸಾವನ್ನು ತಿರಸ್ಕರಿಸಲಾಗಿದೆ ಎಂದು ಹೇಳಿ, ನನ್ನ ಪಾಸ್‌ಪೋರ್ಟ್‌ ತೆಗೆದುಕೊಂಡು ಹೋಗಿ 10 ನಿಮಿಷವಾದರೂ ಸುಳಿಯಲಿಲ್ಲ. ಬಳಿಕ ಬಂದ ಅವರು, ನನ್ನೊಂದಿಗೆ ಒರಟಾಗಿ ಹಾಗೂ ಆಕ್ರಮಣಕಾರಿ ರೀತಿಯಲ್ಲಿ ವರ್ತಿಸುತ್ತಲೇ ‘ನನ್ನೊಂದಿಗೆ ಬನ್ನಿ’ ಎಂದು ಜೋರಾಗಿ ಹೇಳಿದರು. ಹೀಗೆಲ್ಲಾಒರಟಾಗಿ ಮಾತನಾಡಬೇಡಿ ಎಂದು ಆಕ್ಷೇಪಿಸಿದಾಗ, ತಕ್ಷಣವೇ ಗಡಿಪಾರು ಘಟಕಕ್ಕೆ ಕರೆದೊಯ್ದುರು. ಏಕೆ ಹೀಗೆ ಮಾಡುತ್ತಿದ್ದಾರೆ? ಎಲ್ಲಿಎಡವಟ್ಟಾಗಿದೆ? ಎಂದು ಆತಂಕದಿಂದಲೇ ಸಂಬಂಧಿಕರೊಬ್ಬರಿಗೆ ಕರೆ ಮಾಡಿದೆ. ಬಳಿಕ ಬ್ರಿಟನ್‌ ರಾಯಭಾರ ಕಚೇರಿಗೆ ನಡೆದ ಘಟನೆಯ ಮಾಹಿತಿ ರವಾನೆಯಾಯಿತು’ ಎಂದು ಡೆಬ್ಬಿ ಹೇಳಿದ್ದಾರೆ.

ಜಮ್ಮು ಕಾಶ್ಮೀರ ವಸ್ತು ಸ್ಥಿತಿ ಅಧ್ಯಯನಕ್ಕೆ ಎರಡನೇ ಐರೋಪ್ಯ ತಂಡ

ತಮ್ಮ ಇ-ವೀಸಾ ಸಿಂಧುವಾಗಿಲ್ಲ ಎಂದಾದರೆ, ‘ಬಂದಿಳಿದೊಡನೆ ವೀಸಾ’ (ವೀಸಾ ಆನ್‌ ಅರೈವಲ್‌) ನೀಡಿ ಎಂದು ಹೇಳಿದರೂ ಸೂಕ್ತ ಸ್ಪಂದನೆ ದೊರೆಯಲಿಲ್ಲ ಎಂದು ದೂರಿರುವ ಅವರು, ‘ನನ್ನನ್ನು ಅಪರಾಧಿಯಂತೆ ನೋಡಿದ ಈ ಘಟನೆಯಿಂದ ಅತೀವ ನೋವಾಗಿದೆ. ಈಗಲಾದರೂ ಕೇಂದ್ರ ಸರಕಾರ ನನ್ನನ್ನು ಕುಟುಂಬ ಸ್ನೇಹಿತರ ಭೇಟಿಗೆ ಅವಕಾಶ ಮಾಡಿಕೊಡಬಹುದೆಂಬ ನಿರೀಕ್ಷೆ ಇದೆ’ ಎಂದು ಹೇಳಿದ್ದಾರೆ.

ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370ನೇ ವಿಧಿಯನ್ನು ಕೇಂದ್ರ ಸರಕಾರ ಆಗಸ್ಟ್‌ 5ರಂದು ರದ್ದುಪಡಿಸಿ, ಕಣಿವೆಯಲ್ಲಿ ಕಠಿಣ ನಿರ್ಬಂಧಗಳನ್ನು ಹೇರಿದ್ದನ್ನು ಖಂಡಿಸಿ ಡೆಬ್ಬಿ ಅವರು ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಲೇಖನ ಬರೆದಿದ್ದರು. ಅಲ್ಲದೆ ಬ್ರಿಟನ್‌ನಲ್ಲಿರುವ ರಾಯಭಾರ ಕಚೇರಿಗೆ ಪತ್ರವೊಂದನ್ನೂ ಬರೆದಿದ್ದರು.

370ನೇ ವಿಧಿ ರದ್ದತಿ ಬಳಿಕ ವಿದೇಶಿ ಪ್ರತಿನಿಧಿಗಳ 2ನೇ ತಂಡ ಜಮ್ಮು-ಕಾಶ್ಮೀರಕ್ಕೆ ಆಗಮನ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ