ಹೊಸದಿಲ್ಲಿ: ಶನಿವಾರ ಮಧ್ಯರಾತ್ರಿ ರಾಷ್ಟ್ರ ರಾಜಧಾನಿಯ ರಸ್ತೆಯೊಂದರಲ್ಲಿ ನಾಯಿ ಬಳಿ ಕ್ಷಮೆ ಕೇಳದ್ದಕ್ಕೆ ವಿಜೇಂದರ್ ರಾಣಾ ಎಂಬಾತನ ಹತ್ಯೆಯಾಗಿದ್ದನ್ನು ನೀವು ಓದಿರುತ್ತೀರ. ಮನೆಯ ಆಧಾರವಾಗಿದ್ದ ಒಬ್ಬನ ಸಾವು, ಇನ್ನೊಬ್ಬ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದುದರಿಂದ ಆಘಾತಕ್ಕೆ ಜಾರಿರುವ ಕುಟುಂಬ ಮತ್ತೊಂದು ಬೆಚ್ಚಿ ಬೀಳಿಸುವ ಸತ್ಯವನ್ನು ಹೊರಹಾಕಿದ್ದು ಮೃತ ವಿಜೇಂದರ್ ಸಹೋದರ ಪ್ರದೀಪ್ ಬರೋಬ್ಬರಿ 20 ವರ್ಷದ ಹಿಂದೆ ಇದೇ ರೀತಿಯಲ್ಲಿ ಕೊಲೆಯಾಗಿದ್ದ ಎಂದಿದೆ.
ಈ ಹಿಂದೆ ನಾವು ರೋಹಿಣಿ ಪ್ರದೇಶದಲ್ಲಿ ವಾಸಿಸುತ್ತಿದ್ದು, ತಾನು ಕೆಲಸ ಮಾಡುವ ಸ್ಥಳದಲ್ಲಿ ನಡೆಯುತ್ತಿದ್ದ ಅಕ್ರಮಗಳನ್ನು ಪ್ರಶ್ನಿಸಿದ್ದ ತಮ್ಮ ಸಹೋದರ ಪ್ರದೀಪ್ 20 ವರ್ಷದ ಹಿಂದೆ ಚೂರಿ ಇರಿತದಿಂದ ಸಾವನ್ನಪ್ಪಿದ್ದ. ಹೀಗಾಗಿ ಆ ಸ್ಥಳವನ್ನು ಬಿಟ್ಟು ಹೊಸ ಜೀವನ ಆರಂಭಿಸುವ ಭರವಸೆಯಿಂದ ನಾವು ಉತ್ತಮ ನಗರಕ್ಕೆ ಬಂದು ವಾಸಿಸಿದ್ದೆವು. ಆದರೆ ದೌರ್ಭಾಗ್ಯ ಇಲ್ಲೂ ನಮ್ಮ ಬೆನ್ನು ಬಿಡಲಿಲ್ಲ. ಶನಿವಾರ ತಮ್ಮ ವಿಜೇಂದರ್ ಕೂಡ ಚೂರಿ ಇರಿತಕ್ಕೆ ಬಲಿಯಾದ. ಮತ್ತೊಬ್ಬ ಸಹೋದರ ಸಾವು- ಬದುಕಿನ ಮಧ್ಯೆ ಹೋರಾಡುವಂತಾಯ್ತು. ನಮ್ಮ ಜತೆಗೆ ಹೀಗಾಗುವಂತಹ ಪಾಪ ನಾವು ಮಾಡಿದ್ದೇವೆ? ಎಂದು ವಿಜೇಂದರ್ ಸಹೋದರಿ ಸುಷ್ಮಾ ಕಣ್ಣೀರಾಗುತ್ತಾಳೆ.
ನಾಯಿಗೆ ಸ್ಸಾರಿ ಹೇಳದ್ದಕ್ಕೆ ಹತ್ಯೆ
ನೈರುತ್ಯ ದೆಹಲಿಯ ಉತ್ತಮ ನಗರದ ಮೋಹನ್ ಗಾರ್ಡನ್ ಪ್ರದೇಶದಲ್ಲಿ ಶನಿವಾರ ಈ ಬೆಚ್ಚಿಬೀಳಿಸುವ ಘಟನೆ ನಡೆದಿದ್ದು ನಾಯಿ ಬಳಿ ಕ್ಷಮೆ ಕೇಳದ್ದಕ್ಕೆ ಇಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿತ್ತು. ಘಟನೆಯಲ್ಲಿ ಕಿರಿಯ ಸಹೋದರ ವಿಜೇಂದರ್ ಸಾವನ್ನಪ್ಪಿದರೆ, ಹಿರಿಯ ಸಹೋದರ ರಾಜೇಶ್ ರಾಣಾ(45) ಆಸ್ಪತ್ರೆ ಪಾಲಾಗಿದ್ದಾರೆ.
ಆರೋಪಿಗಳನ್ನು ಸಹೋದರರಾದ ಅಂಕಿತ್, ಪರಾಸ್ ಮತ್ತು ಅವರ ಮನೆ ಬಾಡಿಗೆದಾರ ದೇವ್ ಚೋಪ್ರಾ ಎಂದು ಗುರುತಿಸಲಾಗಿದೆ.
ಅಷ್ಟಕ್ಕೂ ಆದದ್ದೇನು?
ಅಂಕಿತ್, ಪರಾಸ್ ಮತ್ತು ದೇವ ಮಧ್ಯರಾತ್ರಿ ನಾಯಿ ಟಾಮಿಯನ್ನು ಅಡ್ಡಾಡಿಸಲು ರಸ್ತೆ ಕಡೆ ಬಂದಿದ್ದರು. ಮೂವರು ಅಲ್ಲೇ ನಿಲ್ಲಿಸಲಾಗಿದ್ದ ಸ್ಕೂಟರ್ ಒಂದರ ಮೇಲೆ ಕುಳಿತುಕೊಂಡು ಮಾತನಾಡುತ್ತಿದ್ದರೆ, ಸಾಕು ನಾಯಿ ಟಾಮಿ ಅಲ್ಲೇ ಪಕ್ಕ ಕುಳಿತಿತ್ತು. ಅಷ್ಟರಲ್ಲಿ ಅಲ್ಲಿಗೆ ಬಂದ ವಿಜೇಂದರ್ ವಾಹನ ಟಾಮಿಗೆ ಸ್ವಲ್ಪ ಸವರಿಕೊಂಡು ಹೋಗಿದ್ದು ಭಯಗೊಂಡ ನಾಯಿ ಬೊಗಳುತ್ತಿದ್ದಂತೆ ಮೂವರು ಅಲ್ಲಿಗೋಡಿ ಬಂದಿದ್ದಾರೆ. ಟಾಮಿ ಬಳಿ ಕ್ಷಮೆ ಕೇಳು ಎಂದವರು ವಿಜೇಂದರ್ಗೆ ಒತ್ತಾಯಿಸಿದ್ದಾರೆ. ಕೋಪಗೊಂಡ ವಿಜೇಂದರ್ ನಿಮ್ಮ ನಾಯಿಯನ್ನು ಸರಿಯಾಗಿ ನೋಡಿಕೊಳ್ಳಿ ಎಂದಿದ್ದಾನೆ. ಇದರಿಂದ ಸಿಟ್ಟಿಗೆದ್ದ ಮೂವರು ಆತನ ಮೇಲೆ ಹಲ್ಲೆ ನಡೆಸಲು ಪ್ರಾರಂಭಿಸಿದ್ದಾರೆ.
ತಪ್ಪಿಸಿಕೊಂಡ ವಿಜೇಂದರ್ ಮನೆ ಕಡೆ ಧಾವಿಸಿದ್ದು, ಮನೆ ತಲುಪಲು 50ಮೀಟರ್ ದೂರವಿದ್ದಾಗ ಆತನನ್ನು ಮತ್ತೆ ಎಳೆದುಕೊಂಡು ಬಂದ ಅಂಕಿತ್, ಪರಾಸ್ ಆತನಿಗೆ ಚಾಕು ಮತ್ತು ಸ್ಕ್ರೂಡ್ರೈವರ್ನಿಂದ ಚುಚ್ಚಿದ್ದಾರೆ. ತಮ್ಮನ ಕೂಗು ಕೇಳಿ ಸಹಾಯಕ್ಕೆ ಧಾವಿಸಿದ ಅಣ್ಣ ರಾಜೇಶ್ ಮೇಲೂ ಹಲ್ಲೆ ನಡೆಸಲಾಯಿತು ಎಂದು ತಿಳಿದುಬಂದಿದೆ.
ಈ ಹಿಂದೆ ನಾವು ರೋಹಿಣಿ ಪ್ರದೇಶದಲ್ಲಿ ವಾಸಿಸುತ್ತಿದ್ದು, ತಾನು ಕೆಲಸ ಮಾಡುವ ಸ್ಥಳದಲ್ಲಿ ನಡೆಯುತ್ತಿದ್ದ ಅಕ್ರಮಗಳನ್ನು ಪ್ರಶ್ನಿಸಿದ್ದ ತಮ್ಮ ಸಹೋದರ ಪ್ರದೀಪ್ 20 ವರ್ಷದ ಹಿಂದೆ ಚೂರಿ ಇರಿತದಿಂದ ಸಾವನ್ನಪ್ಪಿದ್ದ. ಹೀಗಾಗಿ ಆ ಸ್ಥಳವನ್ನು ಬಿಟ್ಟು ಹೊಸ ಜೀವನ ಆರಂಭಿಸುವ ಭರವಸೆಯಿಂದ ನಾವು ಉತ್ತಮ ನಗರಕ್ಕೆ ಬಂದು ವಾಸಿಸಿದ್ದೆವು. ಆದರೆ ದೌರ್ಭಾಗ್ಯ ಇಲ್ಲೂ ನಮ್ಮ ಬೆನ್ನು ಬಿಡಲಿಲ್ಲ. ಶನಿವಾರ ತಮ್ಮ ವಿಜೇಂದರ್ ಕೂಡ ಚೂರಿ ಇರಿತಕ್ಕೆ ಬಲಿಯಾದ. ಮತ್ತೊಬ್ಬ ಸಹೋದರ ಸಾವು- ಬದುಕಿನ ಮಧ್ಯೆ ಹೋರಾಡುವಂತಾಯ್ತು. ನಮ್ಮ ಜತೆಗೆ ಹೀಗಾಗುವಂತಹ ಪಾಪ ನಾವು ಮಾಡಿದ್ದೇವೆ? ಎಂದು ವಿಜೇಂದರ್ ಸಹೋದರಿ ಸುಷ್ಮಾ ಕಣ್ಣೀರಾಗುತ್ತಾಳೆ.
ನಾಯಿಗೆ ಸ್ಸಾರಿ ಹೇಳದ್ದಕ್ಕೆ ಹತ್ಯೆ
ನೈರುತ್ಯ ದೆಹಲಿಯ ಉತ್ತಮ ನಗರದ ಮೋಹನ್ ಗಾರ್ಡನ್ ಪ್ರದೇಶದಲ್ಲಿ ಶನಿವಾರ ಈ ಬೆಚ್ಚಿಬೀಳಿಸುವ ಘಟನೆ ನಡೆದಿದ್ದು ನಾಯಿ ಬಳಿ ಕ್ಷಮೆ ಕೇಳದ್ದಕ್ಕೆ ಇಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿತ್ತು. ಘಟನೆಯಲ್ಲಿ ಕಿರಿಯ ಸಹೋದರ ವಿಜೇಂದರ್ ಸಾವನ್ನಪ್ಪಿದರೆ, ಹಿರಿಯ ಸಹೋದರ ರಾಜೇಶ್ ರಾಣಾ(45) ಆಸ್ಪತ್ರೆ ಪಾಲಾಗಿದ್ದಾರೆ.
ಆರೋಪಿಗಳನ್ನು ಸಹೋದರರಾದ ಅಂಕಿತ್, ಪರಾಸ್ ಮತ್ತು ಅವರ ಮನೆ ಬಾಡಿಗೆದಾರ ದೇವ್ ಚೋಪ್ರಾ ಎಂದು ಗುರುತಿಸಲಾಗಿದೆ.
ಅಷ್ಟಕ್ಕೂ ಆದದ್ದೇನು?
ಅಂಕಿತ್, ಪರಾಸ್ ಮತ್ತು ದೇವ ಮಧ್ಯರಾತ್ರಿ ನಾಯಿ ಟಾಮಿಯನ್ನು ಅಡ್ಡಾಡಿಸಲು ರಸ್ತೆ ಕಡೆ ಬಂದಿದ್ದರು. ಮೂವರು ಅಲ್ಲೇ ನಿಲ್ಲಿಸಲಾಗಿದ್ದ ಸ್ಕೂಟರ್ ಒಂದರ ಮೇಲೆ ಕುಳಿತುಕೊಂಡು ಮಾತನಾಡುತ್ತಿದ್ದರೆ, ಸಾಕು ನಾಯಿ ಟಾಮಿ ಅಲ್ಲೇ ಪಕ್ಕ ಕುಳಿತಿತ್ತು. ಅಷ್ಟರಲ್ಲಿ ಅಲ್ಲಿಗೆ ಬಂದ ವಿಜೇಂದರ್ ವಾಹನ ಟಾಮಿಗೆ ಸ್ವಲ್ಪ ಸವರಿಕೊಂಡು ಹೋಗಿದ್ದು ಭಯಗೊಂಡ ನಾಯಿ ಬೊಗಳುತ್ತಿದ್ದಂತೆ ಮೂವರು ಅಲ್ಲಿಗೋಡಿ ಬಂದಿದ್ದಾರೆ. ಟಾಮಿ ಬಳಿ ಕ್ಷಮೆ ಕೇಳು ಎಂದವರು ವಿಜೇಂದರ್ಗೆ ಒತ್ತಾಯಿಸಿದ್ದಾರೆ. ಕೋಪಗೊಂಡ ವಿಜೇಂದರ್ ನಿಮ್ಮ ನಾಯಿಯನ್ನು ಸರಿಯಾಗಿ ನೋಡಿಕೊಳ್ಳಿ ಎಂದಿದ್ದಾನೆ. ಇದರಿಂದ ಸಿಟ್ಟಿಗೆದ್ದ ಮೂವರು ಆತನ ಮೇಲೆ ಹಲ್ಲೆ ನಡೆಸಲು ಪ್ರಾರಂಭಿಸಿದ್ದಾರೆ.
ತಪ್ಪಿಸಿಕೊಂಡ ವಿಜೇಂದರ್ ಮನೆ ಕಡೆ ಧಾವಿಸಿದ್ದು, ಮನೆ ತಲುಪಲು 50ಮೀಟರ್ ದೂರವಿದ್ದಾಗ ಆತನನ್ನು ಮತ್ತೆ ಎಳೆದುಕೊಂಡು ಬಂದ ಅಂಕಿತ್, ಪರಾಸ್ ಆತನಿಗೆ ಚಾಕು ಮತ್ತು ಸ್ಕ್ರೂಡ್ರೈವರ್ನಿಂದ ಚುಚ್ಚಿದ್ದಾರೆ. ತಮ್ಮನ ಕೂಗು ಕೇಳಿ ಸಹಾಯಕ್ಕೆ ಧಾವಿಸಿದ ಅಣ್ಣ ರಾಜೇಶ್ ಮೇಲೂ ಹಲ್ಲೆ ನಡೆಸಲಾಯಿತು ಎಂದು ತಿಳಿದುಬಂದಿದೆ.