ಆ್ಯಪ್ನಗರ

ಸಹೋದರಿಗೆ ದಯಾಮರಣ ಕೋರಿ ಮೋದಿಗೆ ಪತ್ರ

ತಂದೆಯ ಪಿಂಚಣಿ ಹಣ ಬಾರದೆ ಕಂಗಾಲಾಗಿರುವ ಕುಟುಂಬದಲ್ಲಿ ಸೋದರನೊಬ್ಬ ವಿಶೇಷಚೇತನ ಸಹೋದರಿಗೆ ​ದಯಾಮರಣ ಕೋರಿ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.

TIMESOFINDIA.COM 21 May 2018, 11:43 am
ಉದಯ್‌ಪುರ: ತಂದೆಯ ಪಿಂಚಣಿ ಹಣ ಬಾರದೆ ಕಂಗಾಲಾಗಿರುವ ಕುಟುಂಬದಲ್ಲಿ ಸೋದರನೊಬ್ಬ ವಿಶೇಷಚೇತನ ಸಹೋದರಿಗೆ ದಯಾಮರಣ ಕೋರಿ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.
Vijaya Karnataka Web sunitha


ಚಿತ್ತೋರ್‌ಗರ್‌ನ ಪ್ರತಾಪ್‌ನಗರದಲ್ಲಿನ ಸುಧೀರ್‌ ಮಿಶ್ರಾ ಅವರ 45 ವರ್ಷದ ಸಹೋದರಿ ಸುನಿತಾ ಮಾನಸಿಕ ಹಾಗೂ ದೈಹಿಕವಾಗಿ ಅಸ್ವಸ್ಥರಾಗಿದ್ದಾರೆ. ಅವರ ಪ್ರತಿಯೊಂದು ದೈನಂದಿನ ಕೆಲಸಗಳಿಗೂ ಒಬ್ಬರ ಸಹಾಯ ಅತ್ಯಗತ್ಯ. ತಂದೆ ವಿದ್ಯಾಪತಿ ಮಿಶ್ರಾ ಅವರು ಸರಕಾರಿ ಶಾಲೆಯಲ್ಲಿ ಅಧ್ಯಾಪಕರಾಗಿ ನಿವೃತ್ತರಾಗಿದ್ದರು. ಪಿಂಚಣಿ ಹಣದಲ್ಲಿ ಸುನಿತಾರ ಆರೈಕೆ ಮಾಡುತ್ತಿದ್ದ ವಿದ್ಯಾಪತಿ ಮಿಶ್ರಾ 2014ರಲ್ಲಿ ನಿಧನ ಹೊಂದಿದ್ದಾರೆ. ಆ ಬಳಿಕ ಸುಧೀರ್‌ ಮಿಶ್ರಾ ದಂಪತಿ ಕೆಲಸಕ್ಕೆ ರಾಜೀನಾಮೆ ನೀಡಿ ಸುನಿತಾ ಅವರ ಆರೈಕೆಯಲ್ಲಿ ತೊಡಗಿದ್ದಾರೆ.

ಸುನಿತಾ ತಂದೆಯ ಪಿಂಚಣಿ ಪಡೆಯಲು ಅಶಕ್ತರಾಗಿರುವ ಹಿನ್ನೆಲೆಯಲ್ಲಿ ಪಿಂಚಣಿ ಹಣವನ್ನು ಸುಧೀಂದ್ರ ಪಡೆಯಲು 2015ರಿಂದ ತಡಕಾಡುತ್ತಿದ್ದಾರೆ. ಸದ್ಯಕ್ಕೆ ಸ್ವಂತ ಮನೆಯ ಒಂದು ಭಾಗದಿಂದ ಬಾಡಿಗೆ ಸಂಪಾದಿಸಿ ಜೀವನ ಸಾಗಿಸುತ್ತಿದ್ದು, ಸುನಿತಾರ ವೈದ್ಯಕೀಯ ವೆಚ್ಚ ಹೊಂದಿಸಲು ಕಷ್ಟಪಡುವಂತಾಗಿದೆ. ಪಿಂಚಣಿ ಕಚೇರಿಯಲ್ಲಿ ಆಗುತ್ತಿರುವ ವಿಳಂಬದಿಂದ ಕುಟುಂಬ ಪರಿತಪಿಸುವಂತಾಗಿದೆ. ಈ ಹಿನ್ನೆಲೆಯಲ್ಲಿ ಸುನಿತಾಗೆ ದಯಾಮರಣ ನೀಡುವಂತೆ ಸೋದರ ಮನವಿ ಮಾಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ