ಆ್ಯಪ್ನಗರ

ಕೊರೊನಾದ ಮಧ್ಯೆ ಹೆಚ್ಚುತ್ತಿದೆ ಬಾಂಗ್ಲಾ-ಭಾರತ ಗಡಿಯಲ್ಲಿ ಮಾನವ ಕಳ್ಳಸಾಗಣೆ; ಎಚ್ಚರಿಸಿದ ಬಿಎಸ್‌ಎಫ್‌

ಬಾಂಗ್ಲಾದೇಶದ ಗಡಿಯಲ್ಲಿ ಮಾನವ ಕಳ್ಳ ಸಾಗಣೆ ನಡೆಯುತ್ತಿದೆ ಎಂದು ಗಡಿ ಭದ್ರತಾ ಪಡೆಗಳು ಎಚ್ಚರಿಕೆ ನೀಡಿವೆ. ಬಾಂಗ್ಲಾದೇಶದ ಪ್ರಜೆಗಳನ್ನ ಭಾರತದ ಪ್ರಮುಖ ನಗರಗಳಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಇಂತಹ ದುಷ್ಕೃತ್ಯ ಎಸಗಲಾಗುತ್ತಿದೆ ಎಂದು ತಿಳಿದುಬಂದಿದೆ.

Vijaya Karnataka Web 6 Jul 2020, 1:52 pm
ಕೋಲ್ಕೊತಾ: ಕೊರೊನಾದಿಂದಾಗಿ ದೇಶದ ಪ್ರಮುಖ ನಗರಗಳಿಗೆ ಬಾಂಗ್ಲಾದೇಶದ ಪ್ರಜೆಗಳನ್ನು ಕಳ್ಳ ಸಾಗಣೆ ಮಾಡುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ ಎಂದು ಗಡಿ ಭದ್ರತಾ ಪಡೆ ತಿಳಿಸಿದೆ. ಈ ಸಂಬಂಧ ಗಡಿ ಭದ್ರತಾ ಪಡೆ (ಬಿಎಸ್‌ಎಫ್‌) ತನ್ನ ಎಲ್ಲ ಗಡಿ ಠಾಣೆಗಳಿಗೆ ಸಂದೇಶ ರವಾನಿಸಿದ್ದು, ಕಟ್ಟೆಚ್ಚರ ವಹಿಸುವಂತೆ ಸೂಚಿಸಲಾಗಿದೆ.
Vijaya Karnataka Web 48138968


''ಬಾಂಗ್ಲಾದೇಶದಲ್ಲಿ ಬಡವರು ಮತ್ತು ನಿರ್ಗತಿಕರಿಗೆ ಜೀವನ ಸಾಗಿಸುವುದು ಕಷ್ಟವಾಗುತ್ತಿದೆ. ಉದ್ಯೋಗಾವಕಾಶಗಳು ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಅವರಿಗೆ ಗುವಾಹಟಿ, ಕೋಲ್ಕೊತಾ ಮತ್ತು ಈಶಾನ್ಯ ಭಾರತದ ಪಟ್ಟಣಗಳಲ್ಲಿ ಕೆಲಸ ಕೊಡಿಸುವ ಆಮಿಷ ತೋರಿಸಲಾಗುತ್ತಿದೆ. ಕಳ್ಳಸಾಗಣೆ ಜಾಲಗಳು ತುಂಬ ಸಕ್ರಿಯವಾಗಿದ್ದು ಅವರಿಂದ ಬಡವರ ಸಾಗಾಟ ತೀವ್ರವಾಗ ತೊಡಗಿದೆ.ಮುಂಬಯಿ, ದಿಲ್ಲಿಗೂ ಅನೇಕರನ್ನು ಸಾಗಿಸಲಾಗುತ್ತಿದೆ,'' ಎಂದು ಬಿಎಸ್‌ಎಫ್‌ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ .ಈ ಬಗ್ಗೆ ಬಾರ್ಡರ್‌ ಗಾರ್ಡ್‌ ಬಾಂಗ್ಲಾದೇಶ (ಬಿಜಿಬಿ) ಅಧಿಕಾರಿಗಳಿಗೂ ಮಾಹಿತಿ ನೀಡಿ, ಕಳ್ಳಸಾಗಣೆ ಮೇಲೆ ನಿಗಾ ಇರಿಸಲು ಸೂಚಿಸಲಾಗಿದೆ.

2 ವಾರದಲ್ಲಿ 5 ಮಂದಿ ವಶಕ್ಕೆ!
ಇದಕ್ಕೆ ಪೂರಕವಾಗಿ ಪಶ್ಚಿಮ ಬಂಗಾಳದ ಉತ್ತರದ 24 ಪರಗಣ ಜಿಲ್ಲೆಯ ಪೆತ್ರಾಪೋಲೆ ಗಡಿಭಾಗದಲ್ಲಿ ಕಳೆದ ಎರಡು ವಾರಗಳಲ್ಲಿ ಐದು ಮಂದಿ ಬಾಂಗ್ಲಾದೇಶ ಪ್ರಜೆಗಳನ್ನು ಬಿಎಸ್‌ಎಫ್‌ ವಶಕ್ಕೆ ಪಡೆದಿದೆ. ಸರಕು ಸಾಗಣೆ ರೈಲಿನಲ್ಲಿ ಮೆಣಸಿನ ಚೀಲಗಳ ನಡುವೆ ಇವರು ಅಡಗಿದ್ದರು. ಎಲ್ಲರೂ 12 ರಿಂದ 25 ವರ್ಷದ ಯುವಕರು ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ. ಕೊರೊನಾ ಪ್ರಸರಣ ಆರಂಭವಾದ ಪಶ್ಚಿಮ ಬಂಗಾಳದಲ್ಲಿನ 913 ಕಿ.ಮೀ ಉದ್ದನೆಯ ಇಂಡೋ-ಬಾಂಗ್ಲಾಗಡಿಯಲ್ಲಿ ಮಾದಕವಸ್ತುಗಳು ಮತ್ತು ಜಾನುವಾರುಗಳ ಕಳ್ಳಸಾಗಣೆ, ಅಕ್ರಮವಾಗಿ ಗಡಿ ನುಸುಳುವುದು ಮತ್ತು ಮಾನವ ಕಳ್ಳಸಾಗಣೆ ಪ್ರಕರಣಗಳು ಹಲವು ಸ್ಥಳಗಳಲ್ಲಿ ವರದಿಯಾಗಿವೆ.
ಕೊರೊನಾ ಬೆನ್ನಲ್ಲಿಯೇ ಚೀನಾದಲ್ಲಿ ಬಬೂನಿಕ್‌ ಪ್ಲೇಗ್‌ ಭೀತಿ..! ಮೈ ಮರೆತರೆ ಜಗತ್ತನ್ನೇ ಆಕ್ರಮಿಸಲಿದೆ ಸಾಂಕ್ರಾಮಿಕ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ