ಆ್ಯಪ್ನಗರ

ಬಂಧಿತ ಪಾಕ್‌ ಪ್ರಜೆ 24 ಗಂಟೆಯಲ್ಲೇ ಬಿಡುಗಡೆ

​ಶುಕ್ರವಾರ ಸಾಂಬಾ ಜಿಲ್ಲೆಯ ರಾಮಗಢ ಸೆಕ್ಟರ್‌ನಲ್ಲಿ ಮೊಹಮದ್‌ ಅಶ್ರಫ್‌ (60) ಎಂಬ ಪಾಕ್‌ ಪ್ರಜೆ ಭಾರತದ ಗಡಿಯೊಳಗೆ ಪ್ರವೇಶಿಸಿದ್ದರು. ಕೂಡಲೇ ಬಿಎಸ್‌ಎಫ್‌ ಯೋಧರು ಅವರನ್ನು ಬಂಧಿಸಿದ್ದರು.

Vijaya Karnataka Web 10 Mar 2019, 7:40 am
ಶ್ರೀನಗರ: ಜಮ್ಮು-ಕಾಶ್ಮೀರದ ಅಂತಾರಾಷ್ಟ್ರೀಯ ಗಡಿಯ ಬಳಿ, ಭಾರತ ಪ್ರವೇಶಿಸಿದ್ದ ಪಾಕಿಸ್ತಾನದ ಪ್ರಜೆಯೊಬ್ಬರನ್ನು ಸದ್ಭಾವನೆಯ ಸಂಕೇತವಾಗಿ ಭಾರತೀಯ ಗಡಿ ಭದ್ರತಾ (ಬಿಎಸ್‌ಎಫ್‌) ಪಡೆ ಒಂದೇ ದಿನದಲ್ಲಿ ಪಾಕಿಸ್ತಾನಕ್ಕೆ ಹಸ್ತಾಂತರಿಸಿದೆ.
Vijaya Karnataka Web Ind Pak


ಶುಕ್ರವಾರ ಸಾಂಬಾ ಜಿಲ್ಲೆಯ ರಾಮಗಢ ಸೆಕ್ಟರ್‌ನಲ್ಲಿ ಮೊಹಮದ್‌ ಅಶ್ರಫ್‌ (60) ಎಂಬ ಪಾಕ್‌ ಪ್ರಜೆ ಭಾರತದ ಗಡಿಯೊಳಗೆ ಪ್ರವೇಶಿಸಿದ್ದರು. ಕೂಡಲೇ ಬಿಎಸ್‌ಎಫ್‌ ಯೋಧರು ಅವರನ್ನು ಬಂಧಿಸಿದ್ದರು.

ಬಂಧಿತರಿಂದ 12 ಸಾವಿರ ರೂ. ಪಾಕ್‌ ಹಣವನ್ನು ವಶಪಡಿಸಿಕೊಳ್ಳಲಾಗಿತ್ತು. ಶನಿವಾರ ಮಧ್ಯಾಹ್ನ 3.30ರ ವೇಳೆಗೆ ಅಶ್ರಫ್‌ ಅವರನ್ನು ಪಾಕ್‌ ರೇಂಜರ್‌ಗಳಿಗೆ ಹಸ್ತಾಂತರಿಸಲಾಗಿದೆ.

ಭಾರತೀಯ ಪಡೆಗಳ ಮಾನವೀಯತೆಯನ್ನು ಪಾಕ್‌ ರೇಂಜರ್‌ಗಳು ಶ್ಲಾಘಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಪುಲ್ವಾಮಾ ದಾಳಿ ಹಾಗೂ ವಿಂಗ್‌ ಕಮಾಂಡರ್‌ ಅಭಿನಂದನ್‌ ಬಂಧನ ಪ್ರಕರಣದ ಬಳಿಕ ಈ ಬೆಳವಣಿಗೆ ಗಮನ ಸೆಳೆದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ