ಆ್ಯಪ್ನಗರ

ಯೋಧನ ವೀಡಿಯೊ: ವರದಿ ಕೋರಿದ ಪ್ರಧಾನಿ ಕಚೇರಿ

ಬಿಎಸ್‌ಎಫ್‌ ಯೋಧರಿಗೆ ಕಳಪೆ ಆಹಾರ ನೀಡುತ್ತಿರುವುದಾಗಿ ಆರೋಪಿಸಿ ಯೋಧ ತೇಜ್‌ ಬಹದ್ದೂರ್‌ ಬಿಡುಗಡೆಗೊಳಿಸಿರುವ ವೀಡಿಯೊಗೆ ಸಂಬಂಧಿಸಿ ವರದಿ ನೀಡುವಂತೆ ಪಿಎಂಒ ಗೃಹ ಸಚಿವಾಲಯಕ್ಕೆ ಸೂಚಿಸಿದೆ.

ಟೈಮ್ಸ್ ಆಫ್ ಇಂಡಿಯಾ 12 Jan 2017, 3:36 pm
ಹೊಸದಿಲ್ಲಿ: ಗಡಿ ಪ್ರದೇಶಗಳಲ್ಲಿ ಬಿಎಸ್‌ಎಫ್‌ ಯೋಧರಿಗೆ ಕಳಪೆ ಆಹಾರ ನೀಡುತ್ತಿರುವುದಾಗಿ ಆರೋಪಿಸಿ ಯೋಧ ತೇಜ್‌ ಬಹದ್ದೂರ್‌ ಯಾದವ್‌ ಬಿಡುಗಡೆಗೊಳಿಸಿರುವ ವೀಡಿಯೊಗೆ ಸಂಬಂಧಿಸಿದಂತೆ ವರದಿ ನೀಡುವಂತೆ ಪ್ರಧಾನಿ ಕಾರ್ಯಾಲಯವು ಗೃಹ ಸಚಿವಾಲಯಕ್ಕೆ ಸೂಚಿಸಿದೆ.
Vijaya Karnataka Web bsf jawan food video pmo seeks report from home ministry
ಯೋಧನ ವೀಡಿಯೊ: ವರದಿ ಕೋರಿದ ಪ್ರಧಾನಿ ಕಚೇರಿ


ಯೋಧ ಯಾದವ್‌ ಅವರು ಬಿಡುಗಡೆಗೊಳಿಸಿರುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಮೂರು ದಿನಗಳಲ್ಲಿ 90 ಲಕ್ಷ ಮಂದಿ ವೀಕ್ಷಿಸಿದ್ದಾರೆ. 4.4 ಲಕ್ಷ ಶೇರ್‌ ಆಗಿದೆ.

ಆರೋಪವನ್ನು ವಾಪಸ್‌ ಪಡೆದುಕೊಂಡು ಕ್ಷಮೆ ಯಾಚಿಸುವಂತೆ ಪತಿಯ ಮೇಲೆ ಒತ್ತಡ ಹೇರಲಾಗುತ್ತಿದೆ ಎಂದು ಯೋಧ ಯಾದವ್‌ ಅವರ ಪತ್ನಿ ಶರ್ಮಿಳಾ ಹೇಳಿದ್ದಾರೆ. ಒಂದು ವೇಳೆ ಯಾದವ್ ಮತಿ ಭ್ರಾಂತನಾಗಿದ್ದರೆ ಅವರಿಗೆ ಬಂದೂಕು ನೀಡಿರುವುದು ಏಕೆ, ಮಹತ್ವದ ಗಡಿ ರಕ್ಷಣೆಯ ಕೆಲಸಕ್ಕೆ ಅವರನ್ನು ಬಿಎಸ್‌ಎಫ್‌ಗೆ ಏಕೆ ನಿಯೋಜಿಸಲಾಗಿದೆ ಎಂದು ಬುಧವಾರ ಶರ್ಮಿಳಾ ಪ್ರಶ್ನಿಸಿದ್ದರು. ಯಾದವ್ ಅವರು ಯಾವುದೇ ತಪ್ಪು ಮಾಡಿಲ್ಲ. ಸತ್ಯವನ್ನು ಹೊರಗೆಳೆಯುವ ಪ್ರಯತ್ನ ನಡೆಸಿದ್ದಾರೆ. ಅನ್ಯಾಯವನ್ನು ಸಹಿಸದಿರುವುದು ಪತಿಯ ಸ್ವಭಾವ. ಆದರೆ, ಸೇವಾ ಅವಧಿಯುದ್ದಕ್ಕೂ ಇದನ್ನೇ ಸಹಿಸಿಕೊಂಡು ಬಂದಿದ್ದಾರೆ ಎಂದು ಶರ್ಮಿಳಾ ಹೇಳಿದ್ದರು.

ಯಾದವ್‌ ಅವರಿಗೆ ಬಿಎಸ್‌ಎಫ್‌ ಸೇರುವ ಮೊದಲು ವೃತ್ತಿ ತರಬೇತಿ ಪೂರ್ಣಗೊಳಿಸಿದ ವೇಳೆ ಗೋಲ್ಡ್‌ ಮೆಡಲ್‌ ಸಿಕ್ಕಿದೆ. ಸೇವಾವಧಿಯ 20 ವರ್ಷಗಳಲ್ಲಿ 14 ಪ್ರಶಸ್ತಿಗಳು ಬಂದಿವೆ ಎಂದೂ ಶರ್ಮಿಳಾ ತಿಳಿಸಿದ್ದಾರೆ.

ಗೃಹ ಸಚಿವಾಲಯವು ಯಾದವ್‌ ಅವರ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆಗೆ ಆದೇಶಿಸಿದೆ. ಈ ಬಗ್ಗೆ ಗೃಹ ಸಚಿವಾಲಯ ತನಿಖೆಗೆ ಆದೇಶಿಸಿದ್ದು, ಯೋಧ ಕರ್ತವ್ಯನಿರತನಾಗಿದ್ದಾಗ ತನ್ನ ಜತೆಗೆ ಮೊಬೈಲ್‌ ಇಟ್ಟುಕೊಂಡಿದ್ದು ಏಕೆ ಎಂಬ ಬಗ್ಗೆಯೂ ತನಿಖೆ ನಡೆಯಲಿದೆ.

2010ರಲ್ಲಿ ಅಶಿಸ್ತಿನ ಕಾರಣಕ್ಕಾಗಿ ಈ ಯೋಧನನ್ನು ಕೋರ್ಟ್‌ ಮಾರ್ಷಲ್‌ಗೆ ಗುರಿಪಡಿಸಲಾಗಿತ್ತು. ಆದರೆ, ಕುಟುಂಬಕ್ಕೆ ತೊಂದರೆಯಾಗದಿರಲಿ ಎಂದು ವಜಾಗೊಳಿಸಿರಲಿಲ್ಲ. 4 ವರ್ಷಗಳಿಂದ ಯೋಧನ ವರ್ತನೆಯಲ್ಲಿ ಸಮಸ್ಯೆಗಳಿದ್ದವು. ಮೇಲಾಧಿಕಾರಿಗಳ ಮೇಲೆ ಕೈ ಮಾಡುವುದು, ಕುಡಿದು ಕರ್ತವ್ಯಕ್ಕೆ ಹಾಜರಾಗುವುದು ಸೇರಿದಂತೆ ಹಲವು ಪ್ರಕರಣಗಳಲ್ಲಿ ಈತ ದುರ್ವರ್ತನೆ ತೋರಿದ್ದಾನೆ. ಈ ಎಲ್ಲಾ ಕಾರಣಗಳಿಗಾಗಿ ಈತನಿಗೆ ಬಡ್ತಿ ಸಿಕ್ಕಿರಲಿಲ್ಲ. ಹೀಗಾಗಿ ಭ್ರಮನಿರಸನ ಆಗಿರಬಹುದು ಎಂದು ಹೇಳಲಾಗಿದೆ. ಸ್ವಯಂ ನಿವೃತ್ತಿ ಕೋರಿ ಯೋಧ ಯಾದವ್ ಸಲ್ಲಿಸಿದ್ದ ಅರ್ಜಿಯನ್ನು ಬಿಎಸ್‌ಎಫ್‌ ಅಂಗೀಕರಿಸಿದೆ.

BSF jawan food video, pmo seeks report from home ministry: The Prime Minister's Office (PMO) on Thursday sought a report from the home ministry about BSF jawan Tej Bahadur Yadav's allegation that poor-quality food being served to paramilitary troops at border areas.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ