ಆ್ಯಪ್ನಗರ

ಪಾಕ್ ಪುಂಡಾಟಕ್ಕೆ ಬಿಎಸ್ಎಫ್ ಯೋಧ ಸೇರಿ ನಾಲ್ವರ ಸಾವು

ಜಮ್ಮು ಮತ್ತು ಕಾಶ್ಮೀರದ ಕೆಲ ಗ್ರಾಮಗಳು ಹಾಗೂ ಗಡಿ ಹೊರ ಠಾಣೆಯ ಮೇಲೆ ಪಾಕಿಸ್ತಾನ ಸೇನೆ ಭಾರಿ ಶೆಲ್ ದಾಳಿ ನಡೆಸಿದ ಪರಿಣಾಮ ಓರ್ವ ಬಿಎಸ್‌ಎಫ್ ಯೋಧ ಸೇರಿದಂತೆ ನಾಲ್ವರು ಮೃತಪಟ್ಟಿದ್ದು, 12ಕ್ಕೂ ಹೆಚ್ಚು ನಾಗರಿಕರು ಗಾಯಗೊಂಡಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿವೆ.

TIMESOFINDIA.COM 18 May 2018, 3:49 pm
ಜಮ್ಮು: ಜಮ್ಮು ಮತ್ತು ಕಾಶ್ಮೀರದ ಕೆಲ ಗ್ರಾಮ ಹಾಗೂ ಗಡಿ ಪ್ರದೇಶದಲ್ಲಿನ ಹೊರ ಠಾಣೆಗಳ ಮೇಲೆ ಪಾಕಿಸ್ತಾನ ಸೇನೆ ಭಾರಿ ಶೆಲ್ ದಾಳಿ ನಡೆಸಿದ ಪರಿಣಾಮ ಓರ್ವ ಬಿಎಸ್‌ಎಫ್ ಯೋಧ ಸೇರಿದಂತೆ ನಾಲ್ವರು ಮೃತಪಟ್ಟು, 12ಕ್ಕೂ ಹೆಚ್ಚು ನಾಗರಿಕರು ಗಾಯಗೊಂಡಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿವೆ.
Vijaya Karnataka Web bsff


ಕಳೆದ ಮೂರು ದಿನಗಳಿಂದ ಪಾಕ್ ಸೇನೆ ಅಂತಾರಾಷ್ಟ್ರೀಯ ಗಡಿರೇಖೆ ಬಳಿ ಶೆಲ್ ದಾಳಿ ನಡೆಸುತ್ತಿದೆ. ಶನಿವಾರ ಪ್ರಧಾನಿ ನರೇಂದ್ರ ಮೋದಿಯವರು ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಲಿದ್ದಾರೆ ಎಂಬುದು ಇಲ್ಲಿ ಗಮನಾರ್ಹ.

ಆರ್‌.ಎಸ್‌.ಪುರ್, ಬಿಷ್ನಾ ಮತ್ತು ಅರ್ನಿಯಾ ಸೆಕ್ಟರ್‌ ಬಳಿ ಭಾರತೀಯ ಸೇನೆಯನ್ನು ಗುರಿಯಾಗಿಸಿಕೊಂಡು ಶೆಲ್ ಹಾಗೂ ಅಪ್ರಚೋದಿತ ಗುಂಡಿನ ದಾಳಿ ನಡೆಸಲಾಗುತ್ತಿದೆ. ಪಾಕ್ ಪುಂಡಾಟಕ್ಕೆ ಭಾರತೀಯ ಸೇನೆ ತಕ್ಕ ಪ್ರತ್ಯುತ್ತರ ನೀಡುತ್ತಿದೆ ಎಂದು ಪಿಟಿಐ ವರದಿ ಮಾಡಿದೆ.

ಘಟನೆಯಲ್ಲಿ 192ನೇ ಬಟಾಲಿಯನ್‌ನ ಸೀತಾರಾಮ್ ಉಪಾಧ್ಯಾಯ (28) ಎಂಬ ಬಿಎಸ್‌ಎಫ್ ಯೋಧ ಹುತಾತ್ಮರಾಗಿದ್ದು ಪತ್ನಿ, 3 ವರ್ಷದ ಪುತ್ರ ಮತ್ತು 1 ವರ್ಷದ ಮಗುವನ್ನು ಅಗಲಿದ್ದಾರೆ. ಸೀತಾರಾಮ್ ಉಪಾಧ್ಯಾಯ ಜಾರ್ಖಂಡ್ ಮೂಲದವರಾಗಿದ್ದು 2011ರಲ್ಲಿ ಸೇನೆಗೆ ಸೇರಿದ್ದರು ಎಂದು ತಿಳಿದುಬಂದಿದೆ.

ರಮ್ಜಾನ್‌ ಕದನ ವಿರಾಮವಿದ್ದರೂ ಪತಿಯನ್ನು ಕೊಂದ ಪಾಕ್‌: ಹುತಾತ್ಮ ಯೋಧನ ಪತ್ನಿ ಅಳಲು

ರಮ್ಜಾನ್ ಸಂದರ್ಭದಲ್ಲಿ ಪಾಕ್ ಭಯೋತ್ಪಾದಕರ ವಿರುದ್ಧ ಯಾವುದೇ ರೀತಿಯ ಕಾರ್ಯಾಚರಣೆ ನಡೆಸದಂತೆ ಯೋಧರಿಗೆ ಭಾರತ ಸೂಚನೆ ನೀಡಿದೆ. ಗಡಿಯಲ್ಲಿ ಕದನ ವಿರಾಮ ಘೋಷಣೆಯಾಗಿದ್ದರೂ ಪಾಪಿ ಪಾಕಿಸ್ತಾನದ ಉಗ್ರ ಅಟ್ಟಹಾಸಕ್ಕೆ ನನ್ನ ಪತಿ ಬಲಿಯಾಗಿದ್ದಾರೆ ಎಂದು ಹುತಾತ್ಮ ವೀರ ಯೋಧ ಸೀತಾರಾಮ್ ಉಪಾಧ್ಯಾಯ ಪತ್ನಿ ಕಂಬನಿ ಮಿಡಿದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ