ಆ್ಯಪ್ನಗರ

ರಾಷ್ಟ್ರ ತೊರೆಯುತ್ತಿರುವ ಬಾಂಗ್ಲಾ ಅಕ್ರಮ ವಲಸಿಗರ ಸಂಖ್ಯೆ ಹೆಚ್ಚಿದೆ: ಬಿಎಸ್‌ಎಫ್‌

ಪೌರತ್ವ ತಿದ್ದುಪಡಿ ಕಾಯಿದೆ (ಸಿಎಎ) ಅನುಷ್ಠಾನಕ್ಕೆ ತಂದ ಪರಿಣಾಮ ಬಂಗಾಳ ಗಡಿಯಲ್ಲಿ ಭಾರತವನ್ನು ತೊರೆದು ಬಾಂಗ್ಲಾದೇಶಕ್ಕೆ ಮರಳುತ್ತಿರುವ ಅಕ್ರಮ ವಲಸಿಗರ ಸಂಖ್ಯೆ ಹೆಚ್ಚಾಗಿದೆ. ರಾಷ್ಟ್ರದೊಳಗೆ ನುಸುಳುವ ಅಕ್ರಮ ವಲಸಿಗರ ಸಂಖ್ಯೆಯೂ ಕಡಿಮೆಯಾಗಿದೆ ಎಂದು ಬಿಎಸ್‌ಎಫ್‌ ಅಧಿಕಾರಿಗಳು ತಿಳಿಸಿದ್ದಾರೆ.

TOI.in 25 Jan 2020, 5:51 pm
ಕೋಲ್ಕತಾ: ಪೌರತ್ವ ತಿದ್ದುಪಡಿ ಕಾಯಿದೆ ಅನುಷ್ಠಾನಕ್ಕೆ ತಂದ ಬಳಿಕ ಬಾಂಗ್ಲಾದೇಶದ ಅಕ್ರಮ ನುಸುಳುಕೋರರು ರಾಷ್ಟ್ರವನ್ನು ತೊರೆದು ಗಡಿಯಿಂದ ನುಸುಳಿ ಹೊರಗೆ ಹೋಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಗಡಿ ಭದ್ರತಾ ಪಡೆ ಹೇಳಿದ್ದು, ಆದರೆ 'ನಿಖರವಾಗಿ ಹೇಳಲು ಸಾಧ್ಯವಿಲ್ಲ' ಎಂದು ತಿಳಿಸಿದೆ.
Vijaya Karnataka Web BSF


''ದಕ್ಷಿಣ ಬಂಗಾಳದ ಗಡಿಯಲ್ಲಿ ಸುಮಾರು 913 ಕಿ.ಮೀ. ದೂರದಲ್ಲಿ ಬಂಧಿಸಲ್ಪಟ್ಟ 268 ಬಾಂಗ್ಲಾದೇಶದ ನಾಗರಿಕರಲ್ಲಿ ಶೇ.90ರಷ್ಟು ಮಂದಿ ಭಾರತವನ್ನು ತೊರೆದು ಬಾಂಗ್ಲಾದೇಶಕ್ಕೆ ಮರಳುತ್ತಿದ್ದರು'' ಎಂದು ಬಿಎಸ್‌ಎಫ್‌ ಇನ್ಸ್‌ಪೆಕ್ಟರ್‌ ಜೆನರಲ್‌ ವೈಬಿ ಖುರಾನಿಯಾ ಕೋಲ್ಕತಾದಲ್ಲಿ ಶನಿವಾರ ತಿಳಿಸಿದರು. "ಬಂಧಿತ ಹೆಚ್ಚಿನವರು ಅಂತಾರಾಷ್ಟ್ರೀಯ ಗಡಿ ಗೋಜದಂಗಾದ ಉತ್ತರ 24 ಪರಗಣ ಬಳಕೆ ಮಾಡಿದ್ದರು'' ಎಂದು ವೈಬಿ ಖುರಾನಿಯಾ ಹೇಳಿದರು.

ಬಾಂಗ್ಲಾ ಗಡಿಯಲ್ಲಿ ಕಂಡು ಬರುತ್ತಿರುವ ಈ ಬೆಳವಣಿಗೆಗೂ ಕೇಂದ್ರ ಸರಕಾರ ಅನುಷ್ಠಾನಕ್ಕೆ ತಂದ ಬಹು ವಿವಾದಿತ ಪೌರತ್ವ ತಿದ್ದುಪಡಿ ಕಾಯಿದೆಯಗೂ ಸಂಬಂಧವಿದೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಖುರಾನಿಯಾ, ''ಗಡಿಯಲ್ಲಿ ಹೆಚ್ಚು ಕಟ್ಟೆಚ್ಚರ ವಹಿಸಿರುವ ಕಾರಣ ಬಾಂಗ್ಲಾ ಅಕ್ರಮ ನುಸುಳುಕೋರರು ಭಾರತಕ್ಕೆ ಬರಲು ಭಯ ಪಡುತ್ತಿದ್ದಾರೆ ಎಂಬ ವಿಶ್ವಾಸ ಹೊಂದಿದ್ದೇವೆ. ಸರಿಯಾದ ದಾಖಲೆಗಳನ್ನು ಒದಗಿಸಲು ವಿಫಲರಾದ ಅಕ್ರಮ ವಲಸಿಗರು ರಾಷ್ಟ್ರ ತೊರೆಯುತ್ತಿದ್ದ ಸಂದರ್ಭ ಸಿಕ್ಕಿ ಬಿದ್ದಿದ್ದಾರೆ. ಆದರೆ ಸಂದರ್ಭವನ್ನು ನೋಡಿದರೆ ಅವರು ರಾಷ್ಟ್ರವನ್ನು ತೊರೆಯುತ್ತಿದ್ದರೆಂದು ಅನಿಸುತ್ತಿಲ್ಲ'' ಎಂದರು.

ಪೌರತ್ವ ಕಾಯಿದೆ : ಅಪಾಯ ಬಿತ್ತಿ ಬೆಳೆದ ಅರ್ಧಸತ್ಯಗಳು

''2018ರಲ್ಲಿ ಸೂಕ್ತ ದಾಖಲೆಗಳಿಲ್ಲದ 1,677 ಬಾಂಗ್ಲಾದೇಶಿಗರನ್ನು ಬಂಧಿಸಿದ್ದೇವೆ. 2019ರಲ್ಲಿ 2,194 ಮಂದಿಯನ್ನು ಬಂಧಿಸಿದ್ದೇವೆ. ಅದರಲ್ಲಿ ಹೆಚ್ಚಿನವರು ಭಾರತದ ಗಡಿಯಲ್ಲಿ ಬಂಧಿತರಾಗಿದ್ದಾರೆ. 2020ರ ಆರಂಭಿಕ ತಿಂಗಳಲ್ಲೇ 268 ಮಂದಿಯನ್ನು ಬಂಧಿಸಿದ್ದೇವೆ. ಅವರ ಪೈಕಿ ಶೇ.90ರಷ್ಟು ಬಾಂಗ್ಲಾದೇಶಕ್ಕೆ ಮರಳುತ್ತಿದ್ದರು'' ಎಂದು ಖುರಾನಿಯಾ ವಿವರಿಸಿದರು.

ಈ ಎಲ್ಲ ಅಂಕಿಸಂಖ್ಯೆಗಳು ದಕ್ಷಿಣ ಬಂಗಾಳದ ಗಡಿ ಪ್ರದೇಶದ್ದಾಗಿದೆ. ಸಿಎಎ ಅಂಗೀಕಾರಗೊಂಡ ನಂತರ ಬಾಂಗ್ಲಾದ ನುಸುಳುಕೋರರ ಸಂಖ್ಯೆ ಇಳಿಕೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

ಸಿಎಎ: ಕಾಂಗ್ರೆಸ್‌ಗೆ ತಿರುಗುಬಾಣವಾಗುವ ಆತಂಕ ಎಂದ ಸಂತೋಷ್‌

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ