ಆ್ಯಪ್ನಗರ

ಅಜಾಂ ಖಾನ್‌ ಹೇಳಿಕೆಗೆ ಮಾಯಾವತಿ, ಸುಮಿತ್ರಾ ಮಹಾಜನ್‌ ಖಂಡನೆ

ಅಜಾಂ ಖಾನ್‌ ಲೋಕಸಭೆಯಲ್ಲಿ ನಡೆಸಿದ ಹೇಳಿಕೆ ಇದೀಗ ಭಾರಿ ಸುದ್ದಿ ಮಾಡಿದ್ದು, ಮಾಜಿ ಸ್ಪೀಕರ್‌ ಸುಮಿತ್ರಾ ಮಹಾಜನ್ ಸೇರಿ ಅನೇಕ ಮಂದಿ ಖಂಡಿಸಿದ್ದಾರೆ. ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ವಾಗ್ದಾಳಿ ನಡೆಸಿದ್ದಾರೆ.

Times Now 26 Jul 2019, 4:22 pm
ಲಖನೌ: ಲೋಕಸಭೆಯಲ್ಲಿ ಸ್ಪೀಕರ್‌ ಸ್ಥಾನದಲ್ಲಿದ್ದ ಸಂಸದೆ ರಮಾ ದೇವಿ ಮೇಲೆ ಆಕ್ಷೇಪಾರ್ಹ ಹೇಳಿಕೆ ನೀಡಿದ ಎಸ್‌ಪಿ ಸಂಸದ ಅಜಾಂ ಖಾನ್‌ ವಿರುದ್ಧ ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಗುಡುಗಿದ್ದಾರೆ.
Vijaya Karnataka Web azam jhan


ಅಜಾಂ ಖಾನ್‌ ಕೇವಲ ರಮಾದೇವಿಯ ಕ್ಷಮೆಯಾಚಿಸದೇ, ಇಡೀ ಮಹಿಳೆಯರ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.

ಸ್ಪೀಕರ್‌ ಓಂ ಬಿರ್ಲಾ ಅವರ ಅನುಪಸ್ಥಿತಿಯಲ್ಲಿ ಕಲಾಪ ನಡೆಸುತ್ತಿದ್ದ ರಮಾ ದೇವಿ ಅವರನ್ನು ಉದ್ದೇಶಿಸಿದ ಅಜಾಂ ಖಾನ್‌ ಮಾಡಿರುವ ಕಾಮೆಂಟ್‌ ಮಹಿಳೆಯರಿಗೆ ಮಾಡಿದ ಅವಮಾನ. ಕೇವಲ ಲೋಕಸಭೆಯಲ್ಲಿ ಕ್ಷಮೆಯಾಚಿಸಿದರೆ ಸಾಲದು. ಬದಲಾಗಿ ಎಲ್ಲ ಮಹಿಳೆಯರಿಗೆ ಅವರು ಮಾಡಿರುವ ಅವಮಾನ ಇದಾಗಿದ್ದು, ಸೂಕ್ತ ರೀತಿಯಲ್ಲಿ ಕ್ಷಮೆಯಾಚಿಸಬೇಕು ಎಂದು ಮಯಾವತಿ ಟ್ವಿಟರ್‌ ಮೂಲಕ ಆಗ್ರಹಿಸಿದ್ದಾರೆ.


ಅಷ್ಟೇ ಅಲ್ಲದೆ, ಮಾಜಿ ಸ್ಪೀಕರ್‌ ಸುಮಿತ್ರಾ ಮಹಾಜನ್‌, ಸದನದಲ್ಲಿ ಹೇಗೆ ಮಾತನಾಡಬೇಕು, ಹೇಗೆ ನಡೆದುಕೊಳ್ಳಬೇಕೆಂಬುದು ಎಲ್ಲ ಸಂಸದರಿಗೆ ಅರಿವಿರುವುದು ಮುಖ್ಯ. ಒಂದು ವೇಳೆ ಇದಕ್ಕೆ ತಪ್ಪಿದ್ದೇ ಆದಲ್ಲಿ, ಸಂಸದರಾಗಿ ಉಳಿಯಲು ಅಥವಾ ಲೋಕಸಭೆಗೆ ಆಗಮಿಸಲು ತಾನು ಸರಿಯಾದ ವ್ಯಕ್ತಿಯೇ ಎಂದು ಅವರೇ ನಿರ್ಧರಿಸಬೇಕು. ನಾನು ತಪ್ಪು ಒಪ್ಪುಗಳ ಬಗ್ಗೆ ಮಾತನಾಡುತ್ತಿಲ್ಲ. ಲೋಕಸಭೆಗೆ ಅದರದ್ದೇ ಆದ ಗೌರವ, ಪ್ರತಿಷ್ಠೆಯಿದ್ದು, ಇದಕ್ಕೆ ಧಕ್ಕೆ ತರುವಂತೆ ನಡೆದುಕೊಳ್ಳುವುದು ಎಷ್ಟು ಸರಿ ಎಂಬುದನ್ನು ತಿಳಿದುಕೊಳ್ಳಬೇಕು ಎಂದು ಹೇಳಿದ್ದಾರೆ.

ತಾನು ಯಾವುದೇ ರೀತಿಯ ಅಸಂವಿಧಾನಿಕ ಪದಗಳನ್ನು ಬಳಸಿಲ್ಲ. ಈ ವಿಚಾರದಲ್ಲಿ ಬಿಜೆಪಿ ಸುಖಾ ಸುಮ್ಮನೆ ಗದ್ದಲ ಎಬ್ಬಿಸುತ್ತಿದೆ. ಅತಿ ಹೆಚ್ಚು ಮಂದಿ ಸಂಸದರು ಇದ್ದಾರೆಂದು, ಉಳಿದವರನ್ನು ಮಾತನಾಡಲು ಬಿಡದ ರೀತಿಯಲ್ಲಿ ನಡೆದುಕೊಳ್ಳುತ್ತಿದೆ ಎಂದು ಸಮರ್ಥಿಸಿಕೊಂಡಿದ್ದಾರೆ. ಆದರೆ ಎನ್‌ಸಿಪಿ ಸಂಸದರೋರ್ವರು ಅಜಾಂ ಖಾನ್‌ ಅವರನ್ನು ಸಮರ್ಥಿಸಿಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ