ಆ್ಯಪ್ನಗರ

ಕರ್ನಾಟಕದ ಗತಿಯಾದೀತು?: ಬೆದರಿಕೆ ಹಾಕಿ ಮಂತ್ರಿ ಸ್ಥಾನಕ್ಕೆ ಆಗ್ರಹಿಸಿದ ಬಿಎಸ್‌ಪಿ ಶಾಸಕಿ

ಕಮಲನಾಥ್ ಸರಕಾರ ಸದೃಢವಾಗಿರಬೇಕೆಂದರೆ ಪ್ರತಿಯೊಬ್ಬರನ್ನು ಸಂತೋಷ ಪಡಿಸಬೇಕಾದ ಜರೂರತ್ತಿದೆ. ಅವರು ನಮಗೆ ಮಂತ್ರಿ ಪದವಿ ನೀಡಲೇಬೇಕು ಎಂದು ಶಾಸಕಿ ಆಗ್ರಹಿಸಿದ್ದಾರೆ.

Navbharat Times 23 Jan 2019, 3:38 pm
ಭೋಪಾಲ್: ತಮಗೂ ಸಚಿವ ಸ್ಥಾನ ಬೇಕು ಎಂದು ಕಾಂಗ್ರೆಸ್ ನೇತೃತ್ವದ ಮಧ್ಯ ಪ್ರದೇಶ ಸರಕಾರಕ್ಕೆ ಬೇಡಿಕೆ ಇಟ್ಟಿರುವ ಬಹುಜನ ಸಮಾಜ ಶಾಸಕಿಯೊಬ್ಬರು, ತಪ್ಪಿದರೆ ಕರ್ನಾಟಕದಲ್ಲಿ ಎದುರಾದಂತಹ ಪರಿಸ್ಥಿತಿ ಎದುರಾದೀತು, ಜೋಕೆ ಎಂದು ಪರೋಕ್ಷ ಎಚ್ಚರಿಕೆ ರವಾನಿಸಿದ್ದಾರೆ.
Vijaya Karnataka Web ಕಮಲ್‌ನಾಥ್, ರಮಾಬಾಯಿ


ರಾಜ್ಯದ ಸಹೋದರಿ (बहन जी मायावती) ಮಾಯಾವತಿ ಅವರ ಸಮರ್ಥನೆಯಿಂದಾಗಿ ಇಲ್ಲಿ ಸರಕಾರ ನಡೆಯುತ್ತಿದೆ. ನಮ್ಮ ಪಕ್ಷದ ಶಾಸಕರಿಗೆ ಮಂತ್ರಿ ಸ್ಥಾನ ನೀಡಬೇಕು. ಕಮಲನಾಥ್ ಸರಕಾರದಲ್ಲಿ ನಮ್ಮ ಕಡೆಯಿಂದ ಇಬ್ಬರಿಗೆ ಸಚಿವ ಪದವಿ ಬೇಕು. ನನಗೆ ಸಚಿವ ಸ್ಥಾನ ಸಿಗದಿದ್ದರೆ ನನ್ನ ವಿರೋಧ ಅಷ್ಟೇ ಅಲ್ಲ, ಪಕ್ಷದ ಇತರರ ವಿರೋಧವನ್ನು ಸಹ ಎದುರಿಸಬೇಕಾಗುತ್ತದೆ. ಕರ್ನಾಟಕದಲ್ಲೇನಾಗುತ್ತಿದೆ ಎಂದು ನೋಡುತ್ತಿದ್ದೇವೆ. ಅಲ್ಲಿ ಸೃಷ್ಟಿಯಾಗಿರುವ ಪರಿಸ್ಥಿತಿ ಇಲ್ಲೂ ಆಗಬಾರದು ಎಂಬುದು ನನ್ನ ಬಯಕೆ. ಅದಕ್ಕೆ ಆಸ್ಪದ ನೀಡಬೇಡಿ ಎಂದು ಪತರಿಯಾ ಕ್ಷೇತ್ರದ ಶಾಸಕಿ ರಮಾಬಾಯಿ ಅಹಿರ್ವಾರ್ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

ಪ್ರತಿಯೊಬ್ಬರನ್ನು ಖುಷಿ ಪಡಿಯುವ ಜರೂರತ್ತು


ಕಮಲನಾಥ್ ಸರಕಾರ ಸದೃಢವಾಗಿರಬೇಕೆಂದರೆ ಪ್ರತಿಯೊಬ್ಬರನ್ನು ಸಂತೋಷ ಪಡಿಸಬೇಕಾದ ಜರೂರತ್ತಿದೆ. ಅವರು ನಮಗೆ ಮಂತ್ರಿ ಪದವಿ ನೀಡಲೇಬೇಕು ಎಂದು ಶಾಸಕಿ ಆಗ್ರಹಿಸಿದ್ದಾರೆ.

ಕರ್ನಾಟಕದಲ್ಲಿ ಕೈ ಸಂಘರ್ಷ

ಕರ್ನಾಟಕದಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಅಧಿಕಾರವನ್ನುಳಿಸಿಕೊಳ್ಳಲು ನಿರಂತರ ಸಂಘರ್ಷ ಮಾಡುತ್ತಲೇ ಬಂದಿದೆ. ಸಚಿವ ಸ್ಥಾನ ಸಿಗಲಿಲ್ಲವೆಂದು ಶಾಸಕರು ಮುನಿಸು, ಪಕ್ಷ ತೊರೆಯುವ ಬೆದರಿಕೆ ಹಾಕುವುದು , ಪಕ್ಷಾಂತರ ಮಾಡುವ ಪ್ರಯತ್ನ- ಸರಕಾರ ಅಸ್ತಿತ್ವಕ್ಕೆ ಬಂದಾಗಿನಿಂದ ನಿರಂತರವಾಗಿ ಜಾರಿಯಲ್ಲಿದೆ. ಸರಕಾರದ ಭಾಗವಾಗಿರುವ ಕಾಂಗ್ರೆಸ್ ಅಧಿಕಾರ ಕಾಯ್ದುಕೊಳ್ಳಲು ಹೋರಾಡುತ್ತಲೇ ಇದೆ.

ಮಧ್ಯಪ್ರದೇಶದಲ್ಲಿ ವಿಧಾನಸಭೆಯ ಬಲಾಬಲ- 230
ಕಾಂಗ್ರೆಸ್- 114
ಬಿಜೆಪಿ- 109
ಬಿಎಸ್‌ಪಿ- 2
ಎಸ್‌ಪಿ- 1
ಪಕ್ಷೇತರ-4

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ