ಆ್ಯಪ್ನಗರ

ಆಧಾರ್‌ಗೆ ಶಾಸನಬದ್ಧ ಸ್ಥಾನಮಾನ

ಆಧಾರ್‌ಗೆ ಶಾಸನಬದ್ಧ ಸ್ಥಾನಮಾನ ನೀಡಲು ಸರಕಾರ ನಿರ್ಧರಿಸಿದೆ.

ಏಜೆನ್ಸೀಸ್ 29 Feb 2016, 1:34 pm
ಹೊಸದಿಲ್ಲಿ: ಸಬ್ಸಿಡಿ ಲಾಭವನ್ನು ನೇರವಾಗಿ ಅಗತ್ಯ ಇರುವವರಿಗೆ ತಲುಪಿಸುವ ನಿಟ್ಟಿನಲ್ಲಿ ಆಧಾರ್‌ ಕಾರ್ಡ್‌ಗೆ ಶಾಸನಬದ್ಧ ಸ್ಥಾನಮಾನ ನೀಡಲು ಸರಕಾರ ನಿರ್ಧರಿಸಿದೆ.
Vijaya Karnataka Web budget 2016 govt to give statutory status to aadhaar
ಆಧಾರ್‌ಗೆ ಶಾಸನಬದ್ಧ ಸ್ಥಾನಮಾನ


'ಸರಕಾರದ ಎಲ್ಲ ಯೋಜನೆಗಳ ಫಲಾನುಭವಿಗಳು ಅದರ ಲಾಭ ಪಡೆಯಲು ಆಧಾರ್‌ ಕಡ್ಡಾಯವಾಗಲಿದ್ದು, ಈ ನಿಟ್ಟಿನಲ್ಲಿ ಕಾನೂನು ಜಾರಿಗೂ ಸರಕಾರ ಚಿಂತಿಸಿದೆ,'ಎಂದು ವಿತ್ತ ಸಚಿವ ಅರುಣ್‌ ಜೇಟ್ಲಿ ತಿಳಿಸಿದ್ದಾರೆ.

ಆಧಾರ್‌ ವೇದಿಕೆ ಮೂಲಕ ಸಬ್ಸಿಡಿ ಅಥವಾ ಎಲ್ಲ ಸೇವೆಗಳಿಗೆ ಏಕೀಕೃತ ನಿಧಿಯಿಂದ ಹಣ ಹಂಚಿಕೆ ಆಗಬೇಕು ಎಂಬ ಸಲಹೆಯೂ ಇದೆ

ಈವರೆಗೆ 98 ಕೋಟಿ ಆಧಾರ್‌ ಸಂಖ್ಯೆಗಳನ್ನು ನೀಡಲಾಗಿದ್ದು, ಪ್ರತಿ ದಿನ ಅಂದಾಜು 26 ಲಕ್ಷ ಬಯೋಮೆಟ್ರಿಕ್‌ ಹಾಗೂ 1.5 ಲಕ್ಷ ಇ-ಕೆವೈಸಿ ವಹಿವಾಟು ನಡೆಯುತ್ತಿದೆ.

16.5 ಕೋಟಿ ಡಿಬಿಟಿಎಲ್‌ (ಎಲ್‌ಪಿಜಿ ಸಬ್ಸಿಡಿಯ ನೇರ ನಗದು ವರ್ಗಾವಣೆ) ಖಾತೆ ಪೈಕಿ ಈಗಾಗಲೇ 11.19 ಕೋಟಿ ಡಿಬಿಟಿಎಲ್‌ ಖಾತೆಗಳಿಗೆ ಆಧಾರ್‌ ಸಂಖ್ಯೆ ಜೋಡಣೆ ಆಗಿದೆ. ರಾಷ್ಟ್ರೀಯ ಗುರುತಿನ ಪ್ರಾಧಿಕಾರ ವಿಧೇಯಕ 2010, ರಾಜ್ಯಸಭೆಯ ಅನುಮೋದನೆ ಪಡೆಯಬೇಕಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ