ಆ್ಯಪ್ನಗರ

ಕಾಶಿಯ ವಿವಾದಕ್ಕಿಂತ 2024ಕ್ಕೆ ರಾಮ ಮಂದಿರ ಪೂರ್ಣವೇ ಮುಖ್ಯ: ವಿಎಚ್‌ಪಿ

ರಾಮ ಮಂದಿರ ನಿರ್ಮಾಣಕ್ಕಾಗಿ ಈಗಾಗಲೇ ದೇಶಾದ್ಯಂತ ದೇಣಿಗೆ ಸಂಗ್ರಹಿಸಿದ್ದೇವೆ. ಅದರಂತೆ ನಿರ್ಮಾಣ ಬೇಗನೇ ಪೂರ್ಣ ಮಾಡುತ್ತೇವೆ. ಕಾಶಿ ಹಾಗೂ ಮಥುರಾದ ವಿವಾದಗಳ ಕುರಿತು ಸದ್ಯಕ್ಕೆ ನಾವು ಗಮನ ನೀಡುವುದಿಲ್ಲ

Vijaya Karnataka Web 10 Apr 2021, 11:26 pm
ಹೊಸದಿಲ್ಲಿ: ''ಪೂರ್ವ ಸಂಕಲ್ಪದಂತೆ 2024ರೊಳಗೆ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಪೂರ್ಣಗೊಳಿಸುವುದೇ ನಮ್ಮ ಸದ್ಯದ ಗುರಿಯಾಗಿದೆ. ಭವ್ಯ ಮಂದಿರದ ಗರ್ಭಗೃಹದಲ್ಲಿ ರಾಮಲಲ್ಲಾನನ್ನು ಪ್ರತಿಷ್ಠಾಪಿಸುವುದು ಮುಖ್ಯವಾಗಿದೆ. ಅಲ್ಲಿಯವರೆಗೆ ಇತರ ವಿಚಾರಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡುವುದಿಲ್ಲ'' ಎಂದು ವಿಶ್ವ ಹಿಂದೂ ಪರಿಷತ್‌ (ವಿಎಚ್‌ಪಿ) ಕಾರ್ಯಾಧ್ಯಕ್ಷ ಅಲೋಕ್‌ ಕುಮಾರ್‌ ಹೇಳಿದ್ದಾರೆ.
Vijaya Karnataka Web ರಾಮಮಂದಿರ
ರಾಮಮಂದಿರ


ಈ ಮೂಲಕ ಕಾಶಿ ವಿಶ್ವನಾಥ ದೇವಾಲಯ ಹಾಗೂ ಗ್ಯಾನವಾಪಿ ಮಸೀದಿ ಸಂಕೀರ್ಣದ ಕುರಿತು ವಿಎಚ್‌ಪಿಯ ನಿಲುವು ಏನು ಎನ್ನುವುದನ್ನು ಪರೋಕ್ಷವಾಗಿ ತಿಳಿಸಿದ್ದಾರೆ.

''ರಾಮ ಮಂದಿರ ನಿರ್ಮಾಣಕ್ಕಾಗಿ ಈಗಾಗಲೇ ದೇಶಾದ್ಯಂತ ದೇಣಿಗೆ ಸಂಗ್ರಹಿಸಿದ್ದೇವೆ. ಅದರಂತೆ ನಿರ್ಮಾಣ ಬೇಗನೇ ಪೂರ್ಣ ಮಾಡುತ್ತೇವೆ. ಕಾಶಿ ಹಾಗೂ ಮಥುರಾದ ವಿವಾದಗಳ ಕುರಿತು ಸದ್ಯಕ್ಕೆ ನಾವು ಗಮನ ನೀಡುವುದಿಲ್ಲ'' ಎಂದು ಹೇಳಿದ್ದಾರೆ.

ಗ್ಯಾನವಾಪಿ ಮಸೀದಿಯು ಕಾಶಿಯ ಪ್ರಸಿದ್ಧ ಶ್ರೀ ವಿಶ್ವೇಶ್ವರ ಮಂದಿರದ ಭಾಗವೇ ಆಗಿದೆ ಎಂದು ವಿಜಯ್‌ ಶಂಕರ್‌ ರಸ್ತೋಗಿ ಎನ್ನುವವರು 2019ರಲ್ಲಿ ಕೋರ್ಟ್‌ ಮೆಟ್ಟಿಲೇರಿದ್ದಾರೆ. ಆ ಸಂಬಂಧ ಪ್ರಾಚ್ಯವಸ್ತು ಇಲಾಖೆ ಮೂಲಕ ಉತ್ಖನನ ನಡೆಸಲು ನ್ಯಾಯಾಲಯ ಇತ್ತೀಚೆಗೆ ಅನುಮತಿ ನೀಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ