ಆ್ಯಪ್ನಗರ

ಬಸ್‌ಗೆ ಚಕ್ರಕ್ಕೆ ಸಿಲುಕಿ ಬಲಿಯಾದ ಒಂದೇ ಕುಟುಂಬದ 7 ಜನ

ಪವಿತ್ರ ಯಾತ್ರೆಗೆ ತೆರಳಿದ್ದ ಕುಟುಂಬ ಮರಳಲೇ ಇಲ್ಲ. ಮಾರ್ಗ ಮಧ್ಯೆಯೇ ಶವವಾಗಿ ಹೋದರು 7 ಜನ...

TIMESOFINDIA.COM 11 Oct 2019, 2:01 pm
ಬುಲಂದ್‌ಶಹರ್: ರಸ್ತೆ ಬದಿ ಮಲಗಿದ್ದ ಒಂದೇ ಕುಟುಂಬದ 7 ಜನ ಬಸ್ ಚಕ್ರಕ್ಕೆ ಸಿಲುಕಿ ದುರ್ಮರಣವನ್ನಪ್ಪಿದ ದಾರುಣ ಘಟನೆ ಉತ್ತರ ಪ್ರದೇಶದಲ್ಲಿ ಶುಕ್ರವಾರ ನಸುಕಿನ ಜಾವ ನಡೆದಿದೆ.
Vijaya Karnataka Web up-bus-mows-down-pilgrims-sleeping-on-road-7-dead


ಮೃತರಲ್ಲಿ ನಾಲ್ಕು ಮಂದಿ ಮಹಿಳೆಯರಿದ್ದರೆ, ಮೂವರು ಮಕ್ಕಳಾಗಿದ್ದಾರೆ.

ಸುಳ್ಯದಲ್ಲಿ ಭೀಕರ ಅಪಘಾತ: ಕೊಡಗಿನ ಒಂದೇ ಕುಟುಂಬದ ನಾಲ್ವರು ದುರ್ಮರಣ

ವರದಿಗಳ ಪ್ರಕಾರ ಬಲಿಪಶುಗಳು ಹಥ್ರಾಸ್ ಮೂಲದವರಾಗಿದ್ದು, ನರೌರಾ ಘಾಟ್ ಯಾತ್ರೆಗೆ ಹೋಗಿ ಮರಳುತ್ತಿದ್ದರು ಗಂಗಾ ನದಿಯಲ್ಲಿ ಪವಿತ್ರ ಸ್ನಾನ ಮುಗಿಸಿ ಬರುತ್ತಿದ್ದ ಅವರು ಬುಲಂದ್‌ಶಹರ್‌ನ ರಸ್ತೆಯೊಂದರ ಪಕ್ಕ ಮಲಗಿದ್ದರು.

ವೈಷ್ಣೋ ದೇವಿಗೆ ಹೋಗಿ ಮರಳುತ್ತಿದ್ದ ಖಾಸಗಿ ಬಸ್ ಒಂದು ಅವರ ಮೇಲೆ ಹರಿದಿದ್ದು, ಎಲ್ಲರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಘಟನೆಯ ಬಳಿಕ ಬಸ್ ಚಾಲಕ ತಲೆಮರೆಸಿಕೊಂಡಿದ್ದಾನೆ, ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ