ಆ್ಯಪ್ನಗರ

'ಭಾರತ್‌ ಮಾತಾ ಕೀ ಜೈ' ಎನ್ನದವರ ತಲೆತೆಗೆಯಬಹುದು ಆದರೆ...ರಾಮ್‌ದೇವ್‌

'ಭಾರತ್‌ ಮಾತಾ ಕೀ ಜೈ'ಎನ್ನದವರ ತಲೆಗಳನ್ನು ತೆಗೆಯಬಹುದಿತ್ತು. ಆದರೆ, ಸಂವಿಧಾನವನ್ನು ಗೌರವಿಸುವುದರಿಂದ ಹಾಗೆ ಮಾಡಲಾಗದು ಎಂದಿದ್ದಾರೆರಾಮದೇವ್‌.

ಏಜೆನ್ಸೀಸ್ 4 Apr 2016, 11:29 am
ರೋಹ್ಟಕ್‌: 'ಭಾರತ್‌ ಮಾತಾ ಕೀ ಜೈ'ಎನ್ನದವರ ತಲೆಗಳನ್ನು ತೆಗೆಯಬಹುದಿತ್ತು, ಆದರೆ, ಸಂವಿಧಾನವನ್ನು ಗೌರವಿಸುವುದರಿಂದ ಹಾಗೆ ಮಾಡಲಾಗದು ಎಂದು ಯೋಗ ಗುರು ಬಾಬಾ ರಾಮದೇವ್‌ ಹೇಳಿದ್ದಾರೆ.
Vijaya Karnataka Web but for constitution ramdev would cut off heads of those who dont say bharat mata ki jai
'ಭಾರತ್‌ ಮಾತಾ ಕೀ ಜೈ' ಎನ್ನದವರ ತಲೆತೆಗೆಯಬಹುದು ಆದರೆ...ರಾಮ್‌ದೇವ್‌


'ನನ್ನ ತಲೆ ಕಡಿದು ಹಾಕಿದರೂ 'ಭಾರತ್‌ ಮಾತಾ ಕೀ ಜೈ' ಎನ್ನುವುದಿಲ್ಲ ಎಂದು ಹೇಳುವವರಿಗೆ ಒಂದು ವಿಷಯ ಹೇಳಬಯಸುತ್ತೇನೆ. ಸಂವಿಧಾನ ಹಾಗೂ ಕಾನೂನನ್ನು ಗೌರವಿಸುತ್ತೇನೆ. ಇಲ್ಲದಿದ್ದರೆ, ನೂರಾರು ತಲೆಗಳನ್ನು ಉರುಳಿಸಬಹುದಿತ್ತು,'ಎಂದು ರಾಮ್‌ ದೇವ್‌ ಹೇಳಿದ್ದಾರೆ.

'ಇಂಥ ಮಾತುಗಳನ್ನು ಆಡಲು ಜನರಿಗೆ ನಾಚಿಕೆ ಆಗಬೇಕು. ಮೊದಲು ಅವರ ತಾಯ್ನಾಡನ್ನು ಗೌರವಿಸುವುದನ್ನು ಕಲಿಯಲಿ,'ಎಂದು ರಾಮ್‌ದೇವ್‌ ಅಬ್ಬರಿಸಿದ್ದಾರೆ.

ತಪ್ಪು ಗ್ರಹಿಕೆ: ಫಡ್ನವಿಸ್‌:

ರಾಷ್ಟ್ರೀಯತೆ ಕುರಿತ ಚರ್ಚೆ ಕಾವೇರಿರುವ ಸಂದರ್ಭದಲ್ಲೇ, 'ಭಾರತ್‌ ಮಾತಾ ಕೀ ಜೈ' ಎನ್ನದವರಿಗೆ ಈ ದೇಶದಲ್ಲಿ ಇರುವ ಹಕ್ಕಿಲ್ಲ. ಇಲ್ಲಿ ಇರಲು ಬಯಸುವವರು ಘೋಷಣೆ ಕೂಗಲು ತಕಾರರು ತೆಗೆಯಬಾರದು,' ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್‌ ಹೇಳಿದ್ದರು. ಈ ಬಗ್ಗೆ ಕಾಂಗ್ರೆಸ್‌ ಕಿಡಿ ಕಾರಿದ ನಂತರ ಸೋಮವಾರ ಈ ಬಗ್ಗೆ ಸ್ಪಷ್ಟನೆ ನೀಡಿರುವ ಫಡ್ನವಿಸ್‌, ನನ್ನ ಹೇಳಿಕೆಯನ್ನು ತಪ್ಪಾಗಿ ಗ್ರಹಿಸಲಾಗಿದೆ ಎಂದಿದ್ದಾರೆ.

ವಿವಾದದ ಆರಂಭ:

ಜೆಎನ್‌ಯು ವಿವಾದದ ನಂತರ ವಿಶ್ವವಿದ್ಯಾಲಯಗಳಲ್ಲಿ ದೇಶಭಕ್ತಿ ಬೆಳೆಯಬೇಕು, ಭಾರತ್‌ ಮಾತಾ ಕೀ ಜೈ ಎಂಬ ಘೋಷಣೆ ಮೊಳಗಬೇಕು ಎಂದು ಆರೆಸ್ಸೆಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಹೇಳಿಕೆ ನೀಡಿದ್ದರು. ಅದರ ಬೆನ್ನಿಗೇ, ಎಐಎಂಐಎಂ ನಾಯಕ ಅಸಾದುದ್ದೀನ್‌ ಓವೈಸಿ, 'ನಾನು ಘೋಷಣೆ ಕೂಗುವುದಿಲ್ಲ. ನೀವೇನು ಮಾಡುತ್ತೀರಿ, ಕುತ್ತಿಗೆ ಸೀಳಿದರೂ ನಾನು 'ಭಾರತ್‌ ಮಾತಾ ಕೀ ಜೈ' ಎನ್ನಲಾರೆ,'ಎಂದಿದ್ದರು. ಆ ನಂತರ ಘೋಷಣೆ ಕುರಿತ ವಿವಾದ ದೊಡ್ಡದಾಗುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ