ಆ್ಯಪ್ನಗರ

370 ರದ್ದು: ಮೋದಿ ಸೋಲೊಪ್ಪಿಕೊಂಡಿದ್ದಾರೆಂದ ಪಾಕ್ ಭಯೋತ್ಪಾದಕ ಮಸೂದ್‌

''370ನೇ ವಿಧಿ ರದ್ದುಗೊಳಿಸುವ ಮೂಲಕ ಪ್ರಧಾನಿ ಮೋದಿ ತಮ್ಮ ಕಾಲ ಮೇಲೆ ತಾವೇ ಕೊಡಲಿ ಹಾಕಿಕೊಂಡಿದ್ದಾರೆ...

Vijaya Karnataka 11 Aug 2019, 7:49 am
ಹೊಸದಿಲ್ಲಿ: ''370ನೇ ವಿಧಿ ರದ್ದುಗೊಳಿಸುವ ಮೂಲಕ ಪ್ರಧಾನಿ ಮೋದಿ ತಮ್ಮ ಕಾಲ ಮೇಲೆ ತಾವೇ ಕೊಡಲಿ ಹಾಕಿಕೊಂಡಿದ್ದಾರೆ. ಈ ವಿಧಿಯನ್ನು ಇರಿಸಿಕೊಂಡು ಜಮ್ಮು-ಕಾಶ್ಮೀರವನ್ನು ಮುನ್ನಡೆಸಲಾಗದೆಂದು ಸೋಲೊಪ್ಪಿಕೊಂಡಿದ್ದಾರೆ ಎಂದು ಜೈಷೆ ಮೊಹಮ್ಮದ್‌ ಉಗ್ರ ಸಂಘಟನೆ ಸ್ಥಾಪಕ ಮಸೂದ್‌ ಅಜರ್‌ ಆ.7ರಂದು ಬರೆದಿದ್ದೆನ್ನಲಾದ ಸಂದೇಶವು ಟೆಲಿಗ್ರಾಂ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.
Vijaya Karnataka Web azar


ಹಿಂದೂ ಉದ್ಯಮಿಗಳಾದ ಅಂಬಾನಿ, ಮಿತ್ತಲ್‌, ಜಿಂದಾಲ್‌ ಕಾಶ್ಮೀರದಲ್ಲಿ ಭೂಮಿ ಖರೀದಿಸಿ ಉದ್ಯಮಗಳನ್ನು ಸ್ಥಾಪಿಸಲಿದ್ದು, ಕಾಶ್ಮೀರಿ ಮುಸ್ಲಿಮರು ತಮ್ಮ ಅಸ್ತಿತ್ವ ಕಳೆದುಕೊಳ್ಳಲಿದ್ದಾರೆಂದು ಮೋದಿ ಭಾವಿಸಿದ್ದಾರೆ. ಆದರೆ ಅವರ ಕನಸು ಎಂದಿಗೂ ಈಡೇರದು,'' ಎಂದಿದ್ದಾನೆ.

ವಿಶ್ವಸಂಸ್ಥೆ ಮೊರೆ ಹೋಗಲಿದೆ ಪಾಕ್‌

ಕಾಶ್ಮೀರ ವಿಚಾರ ಕುರಿತು ಭಾರತದ ನಡೆಯನ್ನು ಚೀನಾದ ಬೆಂಬಲದೊಂದಿಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಮೊರೆ ಹೋಗುವುದಾಗಿ ಪಾಕಿಸ್ತಾನ ಹೇಳಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ