ಆ್ಯಪ್ನಗರ

ಬೈಯಪ್ಪನಹಳ್ಳಿ ರೈಲು ನಿಲ್ದಾಣಕ್ಕೆ ಹೊಸ ವಿನ್ಯಾಸ: ಅಂತಾರಾಷ್ಟ್ರೀಯ ಸ್ಪರ್ಧೆ

ಬೆಂಗಳೂರಿನ ಬೈಯಪ್ಪನ ಹಳ್ಳಿ, ಮಹಾರಾಷ್ಟ್ರದ ನಾಗಪುರ, ಮಧ್ಯಪ್ರದೇಶದ ಗ್ವಾಲಿಯರ್‌ ರೈಲು ನಿಲ್ದಾಣಗಳಿಗೆ ಹೊಸ ರೂಪ ನೀಡಲು ನಿರ್ಧರಿಸಿರುವ ರೈಲ್ವೆ ಇಲಾಖೆ

Vijaya Karnataka 19 Nov 2017, 9:38 am

ಹೊಸದಿಲ್ಲಿ: ಬೆಂಗಳೂರಿನ ಬೈಯಪ್ಪನ ಹಳ್ಳಿ, ಮಹಾರಾಷ್ಟ್ರದ ನಾಗಪುರ, ಮಧ್ಯಪ್ರದೇಶದ ಗ್ವಾಲಿಯರ್‌ ರೈಲು ನಿಲ್ದಾಣಗಳಿಗೆ ಹೊಸ ರೂಪ ನೀಡಲು ನಿರ್ಧರಿಸಿರುವ ರೈಲ್ವೆ ಇಲಾಖೆ, ಅಂತಾರಾಷ್ಟ್ರೀಯ ವಿನ್ಯಾಸ ಸ್ಪರ್ಧೆಯನ್ನು ಏರ್ಪಡಿಸಿದೆ.

Vijaya Karnataka Web byappanahalli railway station to get new look
ಬೈಯಪ್ಪನಹಳ್ಳಿ ರೈಲು ನಿಲ್ದಾಣಕ್ಕೆ ಹೊಸ ವಿನ್ಯಾಸ: ಅಂತಾರಾಷ್ಟ್ರೀಯ ಸ್ಪರ್ಧೆ


ಭಾರತೀಯ ರೈಲ್ವೆ ನಿಲ್ದಾಣಗಳ ಅಭಿವೃದ್ಧಿ ನಿಗಮ ಲಿಮಿಟೆಡ್‌ (ಐಆರ್‌ಎಸ್‌ಡಿಸಿ) ಹೊಸ ನಿಲ್ದಾಣಗಳ ಅಭಿವೃದ್ಧಿ ಮತ್ತು ಈಗಾಗಲೇ ಇರುವ ಸ್ಟೇಷನ್‌ಗಳಿಗೆ ಹೊಸ ರೂಪ ನೀಡಲು ಮುಂದಾಗಿದೆ. ಅಂತಾರಾಷ್ಟ್ರೀಯ ಗುಣಮಟ್ಟಕ್ಕೆ ಅನುಸಾರವಾಗಿ ಇವುಗಳ ಅಭಿವೃದ್ಧಿ ಮಾಡಬೇಕಾಗಿರುವುದರಿಂದ ಹೊಸ ವಿನ್ಯಾಸಗಳಿಗೆ ಅಂತಾರಾಷ್ಟ್ರೀಯ ಸ್ಪರ್ಧೆಯನ್ನು ಆಯೋಜಿಸಲಾಗಿದೆ.

''ಸಾಮಾನ್ಯವಾಗಿ ವಾಸ್ತುಶಿಲ್ಪಿಗಳನ್ನು ಗೊತ್ತುಪಡಿಸಿ ಮೂರು ವಿನ್ಯಾಸಗಳನ್ನು ನೀಡಿ ಕೆಲಸ ಆರಂಭಿಸುವಂತೆ ಸೂಚಿಸಲಾಗುತ್ತದೆ. ಆದರೆ, ಇದೀಗ ಸ್ಪರ್ಧೆಯ ಮೂಲಕ ಹೊಸ ಹೊಸ ಚಿಂತನೆ, ವಿನ್ಯಾಸಗಳು ದೊರೆಯಲಿದ್ದು, ಅವುಗಳಲ್ಲಿ ಅತ್ಯುತ್ತಮವಾದುದನ್ನು ಆರಿಸಲು ಅವಕಾಶ ಸಿಗುತ್ತದೆ,'' ಎಂದು ಐಆರ್‌ಸ್‌ಡಿಸಿಯ ಆಡಳಿತ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್‌.ಕೆ. ಲೋಹಿಯಾ ತಿಳಿಸಿದ್ದಾರೆ.

ನಾಗಪುರ, ಗ್ವಾಲಿಯರ್‌, ಬೈಯಪ್ಪನ ಹಳ್ಳಿಯ ನಿಲ್ದಾಣಗಳ ಹೊಸ ವಿನ್ಯಾಸಗಳಿಗೆ ಆಯೋಜಿಸಿರುವ ಸ್ಪರ್ಧೆಯು ದೇಶ ಮತ್ತು ವಿದೇಶದ ವಾಸ್ತುಶಿಲ್ಪಿಗಳು ಮತ್ತು ವಿದ್ಯಾರ್ಥಿಗಳಿಗೆ ಮುಕ್ತವಾಗಿರುತ್ತದೆ. ಜಗತ್ತಿನ ಯಾವುದೇ ಭಾಗದಿಂದ ಪ್ರವೇಶಗಳನ್ನು ಕಳುಹಿಸಬಹುದು. ವಿದೇಶದಲ್ಲಿರುವವರು ಭಾರತೀಯ ದೂತಾವಾಸಗಳ ಸಹಾಯ ಪಡೆಯಬಹುದು ಎಂದು ಹೇಳಿದರು.

ವಿದ್ಯಾರ್ಥಿಗಳ ಅತ್ಯುತ್ತಮ ವಿನ್ಯಾಸ ಕಲ್ಪನೆಗೆ ಒಂದೇ ಹಂತದಲ್ಲಿ ಬಹುಮಾನ ಘೋಷಿಸಲಾಗುತ್ತದೆ. ವಾಸ್ತುಶಿಲ್ಪಿಗಳಿಗೆ ಎರಡು ಹಂತದ ಸ್ಪರ್ಧೆ ಇರುತ್ತದೆ. ಎರಡನೇ ಹಂತಕ್ಕೆ ಆಯ್ಕೆಯಾದ ತಂತ್ರಜ್ಞರು ಅದನ್ನು ಇನ್ನಷ್ಟು ವಿಸ್ತೃತವಾಗಿ ವಿವರಿಸಬೇಕಾಗಿರುತ್ತದೆ.

Byappanahalli Railway station to get new look

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ