ಆ್ಯಪ್ನಗರ

ಸ್ಮೃತಿ ಇರಾನಿಗೆ 'ಬಾಯ್' ಎಂದ ಕನ್ಹಯ್ಯ

ಸ್ಮೃತಿ ಇರಾನಿ ಅವರಿಗೆ ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷ ಕನ್ಹಯ್ಯ ಕುಮಾರ್ 'ಬಾಯ್' ಎಂದು ಹೇಳಿದ್ದಾರೆ.

ಟೈಮ್ಸ್ ಆಫ್ ಇಂಡಿಯಾ 6 Jul 2016, 6:26 pm
ಹೊಸದಿಲ್ಲಿ: ಮಾನವ ಸಂಪನ್ಮೂಲ ಸಚಿವಾಲಯದಿಂದ ಸ್ಮೃತಿ ಇರಾನಿ ಅವರನ್ನು ತೆರವುಗೊಳಿಸಿರುವ ಕ್ರಮವನ್ನು ಸ್ವಾಗತಿಸಿರುವ ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷ ಕನ್ಹಯ್ಯ ಕುಮಾರ್ ಇರಾನಿ ಅವರಿಗೆ 'ಬಾಯ್' ಎಂದು ಹೇಳಿದ್ದಾರೆ.
Vijaya Karnataka Web bye bye smriti irani says kanhaiya
ಸ್ಮೃತಿ ಇರಾನಿಗೆ 'ಬಾಯ್' ಎಂದ ಕನ್ಹಯ್ಯ


ಆದರೆ ಹೈದರಾಬಾದ್‌ ವಿವಿಯಲ್ಲಿ ನಡೆದ ದಲಿತ ವಿದ್ಯಾರ್ಥಿ ರೋಹಿತ್ ವೇಮುಲ ಅವರ ಆತ್ಮಹತ್ಯೆಗೆ ಇದು ಶಿಕ್ಷೆಯಲ್ಲ ಎಂದು ಹೇಳಿದ್ದಾರೆ. ಇರಾನಿ ಅವರನ್ನು ಜವಳಿ ಸಚಿವಾಲಯಕ್ಕೆ ವರ್ಗಾಯಿಸಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕನ್ಹಯ್ಯ ಹೀಗೆ ಪ್ರತಿಕ್ರಿಯಿಸಿದ್ದಾರೆ. ರೋಹಿತ್ ಅವರ ಸಾವಿಗೆ ನ್ಯಾಯ ಬೇಕೆಂದು ಕಾಯುತ್ತಿದ್ದು, ಸಂಪುಟ ಪುನರ್‌ ರಚನೆ ಕಾರಣರಾದವರಿಗೆ ಶಿಕ್ಷೆ ಅಲ್ಲ ಎಂದು ಅವರು ಹೇಳಿದ್ದಾರೆ.

ಕಿರುಕುಳ ನೀಡಿ ವೇಮುಲ ಅವರನ್ನು ಆತ್ಮಹತ್ಯೆ ಮಾಡುವಂತೆ ಪ್ರೇರೇಪಿಸಿದ ಮತ್ತೊಬ್ಬ ಸಚಿವ ಬಂಡಾರು ದತ್ತಾತ್ರೇಯ ಅವರನ್ನು ಜೈಲಿಗೆ ಹಾಕಬೇಕು ಎಂದು ಕನ್ಹಯ್ಯ ಆಗ್ರಹಿಸಿದರು.

ಜನವರಿ 14ರಂದು ಹೈದರಾಬಾದ್ ವಿವಿ ಹಾಸ್ಟೆಲ್‌ನಲ್ಲಿ ವೇಮುಲ ಆತ್ಮಹತ್ಯೆ ಮಾಡಿಕೊಂಡಿದ್ದು, ಸಚಿವರಾದ ಇರಾನಿ ಮತ್ತು ಬಮಡಾರು ಇದಕ್ಕೆ ಕಾರಣ ಎಂದು ವ್ಯಾಪಕ ಪ್ರತಿಭಟನೆ ವ್ಯಕ್ತವಾಗಿತ್ತು.

ಜವಾಹರ್ ಲಾಲ್ ನೆಹರೂ ವಿವಿ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಉಗ್ರ ಅಫ್ಘಲ್ ಗುರು ಪರ ಘೋಷಣೆ ಕೂಗಿರುವ ಆರೋಪದಡಿ ಕನ್ಹಯ್ಯ ಅವರನ್ನು ಬಂಧಿಸಲಾಗಿತ್ತು. ಇದು ಕೂಡ ವ್ಯಾಪಕ ಪ್ರತಿಭಟನೆಗೆ ಕಾರಣವಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ