ಆ್ಯಪ್ನಗರ

ತೇಲುವ ಬೋಟ್‌ನಲ್ಲಿ ಉತ್ತರಾಖಂಡ ಸಚಿವ ಸಂಪುಟ ಸಭೆ

ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಉತ್ತರಾಖಂಡ ಸಂಪುಟ ಇದೇ ಮೊದಲ ಬಾರಿಗೆ ಬುಧವಾರ ಬೋಟ್‌ನಲ್ಲಿ ಸಂಪುಟ ಸಭೆ ನಡೆಸಿದೆ.

Vijaya Karnataka Web 16 May 2018, 6:45 pm
ಡೆಹ್ರಾಡೂನ್: ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಉತ್ತರಾಖಂಡ ಸಂಪುಟ ಇದೇ ಮೊದಲ ಬಾರಿಗೆ ಬುಧವಾರ ತೇಲುವಟ್‌ನಲ್ಲಿ ಸಂಪುಟ ಸಭೆ ನಡೆಸಿದೆ.
Vijaya Karnataka Web tehri-lake


ತೇರಿ ಸರೋವರದಲ್ಲಿ ಸುಂದರ ತಾಣವಿದ್ದು, ಅಲ್ಲಿ ಸಂಪುಟ ಸಭೆಯನ್ನು ನಡೆಸಿದರೆ, ಅದರಿಂದ ಹೆಚ್ಚಿನ ಪ್ರವಾಸಿಗರನ್ನು ಸೆಳೆಯಬಹುದು ಎನ್ನುವುದು ಸರಕಾರ ಮತ್ತು ಪ್ರವಾಸೋದ್ಯಮ ಇಲಾಖೆಯ ಯೋಚನೆಯಾಗಿದೆ.


ತೇರಿ ಸರೋವರದಲ್ಲಿ ತೇಲುವ ರೆಸ್ಟೋರೆಂಟ್ ಮತ್ತು ಬೋಟ್ ಹೌಸ್‌ಗಳಿದ್ದು, ವಿವಿಧ ಸವಲತ್ತುಗಳನ್ನು ಪ್ರವಾಸಿಗರಿಗೆ ಒದಗಿಸಲಾಗುತ್ತದೆ. ಮೇ ತಿಂಗಳ ಕೊನೆಗೆ ತೇರಿ ಮಹೋತ್ಸವ ಕೂಡ ನಡೆಯಲಿದೆ. ಆ ಸಂದರ್ಭದಲ್ಲಿ ಹೆಚ್ಚು ಸಂಖ್ಯೆಯ ಜನರನ್ನು ಸೆಳೆಯಲು ಸಂಪುಟ ಸಭೆ ನೆರವಾಗಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ