ಆ್ಯಪ್ನಗರ

ಸಂಪುಟ ಪುನಾರಚನೆ ? ಸೆಲ್ಫ್‌ ಅಪ್ರೈಸಲ್‌ಗೆ ಪ್ರಧಾನಿ ಸೂಚನೆ

ಸ್ವ ಮೌಲ್ಯ ನಿರ್ಣಯದ ವರದಿ ಸಲ್ಲಿಸುವಂತೆ ಎಲ್ಲ ಸಚಿವರಿಗೆ ಪ್ರಧಾನಿ ನರೇಂದ್ರ ಮೋದಿ ಸೂಚಿಸಿದ್ದಾರೆ.

ಏಜೆನ್ಸೀಸ್ 23 Jun 2016, 11:49 am
ಹೊಸದಿಲ್ಲಿ: ಕೇಂದ್ರ ಸಂಪುಟ ಪುನಾರಚನೆ ಮಾತು ಕೇಳಿ ಬಂದಿರುವ ಮಧ್ಯೆ, ಜೂನ್‌ 30ರಂದು ನಿಗದಿ ಆಗಿರುವ ಸಭೆಯಲ್ಲಿ 'ಸ್ವ ಮೌಲ್ಯ ನಿರ್ಣಯ'ದ ವರದಿ ಸಲ್ಲಿಸುವಂತೆ ಎಲ್ಲ ಸಚಿವರಿಗೆ ಪ್ರಧಾನಿ ನರೇಂದ್ರ ಮೋದಿ ಸೂಚಿಸಿದ್ದಾರೆ.
Vijaya Karnataka Web cabinet rejig pm calls meet for self appraisals
ಸಂಪುಟ ಪುನಾರಚನೆ ? ಸೆಲ್ಫ್‌ ಅಪ್ರೈಸಲ್‌ಗೆ ಪ್ರಧಾನಿ ಸೂಚನೆ


'ಬಿಜೆಪಿ ಸರಕಾರ ತನ್ನ ಎರಡನೇ ಬಜೆಟ್‌ ಮಂಡಿಸಿದ ನಂತರದಿಂದೀಚೆಗೆ ಮಾಡಿರುವ ಸಾಧನೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿಗೆ ಸಚಿವರು ವರದಿ ಸಲ್ಲಿಸಬೇಕಿದೆ. ಮುಂಗಾರು ಅಧಿವೇಶನ ಆರಂಭಕ್ಕೂ ಮುನ್ನ ಸಚಿವ ಸಂಪುಟ ಪುನಾರಚನೆ ಆಗಬಹುದು ಎಂಬ ಮಾತು ಕೇಳಿ ಬಂದಿರುವ ನಡುವೆ ಈ ಸಭೆ ಕರೆಯಲಾಗಿದೆ,' ಎಂದು ಉನ್ನತ ಮೂಲಗಳು ತಿಳಿಸಿವೆ.

'ಜೂನ್‌ 30ರ ಸಭೆ ನಂತರ ಸಚಿವರ ಸಾಧನೆ ವರದಿಯನ್ನು ಪರಿಗಣಿಸಿ ಸಂಪುಟ ಪುನಾರಚನೆ ಪ್ರಕ್ರಿಯೆ ನಡೆಯಬಹುದು,'ಎಂದು ಮೂಲಗಳು ತಿಳಿಸಿವೆ.

ಸಂಪುಟ ಸಚಿವರ ಸಾಧನೆಯನ್ನು ಪ್ರಧಾನಿ ಕಾಲಕಾಲಕ್ಕೆ ಪರಿಶೀಲನೆ ನಡೆಸುತ್ತಿದ್ದು, ಉತ್ತರ ಪ್ರದೇಶ ಹಾಗೂ ಪಂಜಾಬ್‌ ವಿಧಾನಸಭೆ ಚುನಾವಣೆಗೆ ಮುನ್ನ ಸರಕಾರದ ಪ್ರಮುಖ ಯೋಜನೆಗಳು ತ್ವರಿತಗತಿಯಲ್ಲಿ ಅನುಷ್ಠಾನಗೊಳಿಸುವುದು ಸರಕಾರದ ಉದ್ದೇಶ.

'ಅತ್ಯತ್ತಮ ಶ್ರೇಯಾಂಕಕ್ಕಾಗಿ ಸಚಿವರು ಹಾಗೂ ಇಲಾಖೆಗಳ ನಡುವೆ ಬಿರುಸಿನ ಪೈಪೋಟಿ ಏರ್ಪಟ್ಟಿದೆ,' ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ