ಆ್ಯಪ್ನಗರ

'ನನ್ನ ಮೆದುಳು ಸ್ಥಿರವಾಗಿದೆ'... ವೈದ್ಯಕೀಯ ಪರೀಕ್ಷೆ ನಿರಾಕರಿಸಿದ ನ್ಯಾ.ಕರ್ಣನ್

ವೈದ್ಯಕೀಯ ಪರೀಕ್ಷೆಗೆ ಒಳಪಡುವಂತೆ ಸುಪ್ರೀಂಕೋರ್ಟ್ ನೀಡಿದ ಆದೇಶವನ್ನು ನ್ಯಾ. ಸಿ ಎಸ್ ಕರ್ಣನ್ ದಿಕ್ಕರಿಸಿದ್ದಾರೆ.

ಟೈಮ್ಸ್ ಆಫ್ ಇಂಡಿಯಾ 4 May 2017, 4:10 pm
ಕೋಲ್ಕತಾ: ವೈದ್ಯಕೀಯ ಪರೀಕ್ಷೆಗೆ ಒಳಪಡುವಂತೆ ಸುಪ್ರೀಂಕೋರ್ಟ್ ನೀಡಿದ ಆದೇಶವನ್ನು ದಿಕ್ಕರಿಸಿರುವ ನ್ಯಾಯಾಧೀಶ ಸಿ ಎಸ್ ಕರ್ಣನ್ ಅವರು, 'ನನ್ನ ಮೆದುಳು ಸ್ಥಿರವಾಗಿದೆ. ನನಗೆ ಯಾವುದೇ ವೈದ್ಯಕೀಯ ಪರೀಕ್ಷೆ ಅಗತ್ಯ ಇಲ್ಲ' ಎಂದು ಹೇಳಿದ್ದಾರೆ.
Vijaya Karnataka Web calcutta high courts justice karnan declines to undergo medical examination
'ನನ್ನ ಮೆದುಳು ಸ್ಥಿರವಾಗಿದೆ'... ವೈದ್ಯಕೀಯ ಪರೀಕ್ಷೆ ನಿರಾಕರಿಸಿದ ನ್ಯಾ.ಕರ್ಣನ್


ವೈದ್ಯಕೀಯ ತಪಾಸಣೆ ನಿರಾಕರಿಸಿದ ಬಳಿಕ ವೈದ್ಯರಿಗೆ ಪತ್ರ ಬರೆದಿರುವ ಕರ್ಣನ್ ಅವರು, 'ನನ್ನ ಮೆದುಳು ಸ್ಥಿರವಾಗಿದೆ. ನನಗೆ ಯಾವುದೇ ವೈದ್ಯಕೀಯ ಪರೀಕ್ಷೆ ಅಗತ್ಯ ಇಲ್ಲ. ಹೀಗಾಗಿ ವೈದ್ಯಕೀಯ ಪರೀಕ್ಷೆ ನಿರಾಕರಿಸಿದ್ದೇನೆ' ಎಂದಿದ್ದಾರೆ.

ಉನ್ನತ ನ್ಯಾಯಾಧೀಶರು ಹೊರಡಿಸಿರುವ ಆದೇಶ ನನ್ನ ಮೇಲೆ ಎಸಗಿರುವ ದೌರ್ಜನ್ಯವಾಗಿದೆ. ಅದು ಅವರು ನನಗೆ ಮಾಡಿದ ಅವಮಾನ ಎಂದು ದೂರಿದ್ದಾರೆ.

ವೈದ್ಯಕೀಯ ಪರೀಕ್ಷೆ ನಡೆಸಲು ಗಾರ್ಡಿಯನ್ಸ್ ಒಪ್ಪಿಗೆ ಅಗತ್ಯವಿದೆ. ಆದರೆ, ನನ್ನ ಕುಟುಂಬ ಸದಸ್ಯರು ಇಲ್ಲಿ ವಾಸವಾಗಿಲ್ಲ. ಆದರಿಂದ ಯಾವುದೇ ವೈದ್ಯಕೀಯ ಪರೀಕ್ಷೆ ನಡೆಸಲು ಸಾಧ್ಯವಿಲ್ಲ ಎಂದು ಸಿ ಎಸ್ ಕರ್ಣನ್ ಸ್ಪಷ್ಟಪಡಿಸಿದ್ದಾರೆ.

ನ್ಯಾಯಾಂಗ ನಿಂದನೆ ಆರೋಪ ಎದುರಿಸುತ್ತಿರುವ ನ್ಯಾಯಾಧೀಶ್ ಕರ್ಣನ್ ಅವರ ಮಾನಸಿಕ ಸ್ಥಿತಿಯನ್ನು ಮೇ 4ರಂದು ಪರೀಕ್ಷೆ ನಡೆಸುವಂತೆ ಸುಪ್ರೀಂಕೋರ್ಟ್ ಆದೇಶ ನೀಡಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ