ಆ್ಯಪ್ನಗರ

ಭವಿಷ್ಯದ ರಾಜಕಾರಣಿಗಳಿಗೆ ವೃತ್ತಿ ತರಬೇತಿ ಸಂಸ್ಥೆ

ದೇಶದ ಅತಿದೊಡ್ಡ ರಾಜ್ಯ ಉತ್ತರ ಪ್ರದೇಶದ ರಾಜಕಾರಣ ಮಾರಾಮಾರಿಗೆ, ಕೋಮುಗಲಭೆಗೆ ಕುಖ್ಯಾತಿ. ಬಿಹಾರದಂತೆ ಇಲ್ಲೂ ಗೂಂಡಾಗಿರಿ ಹೆಚ್ಚಿದೆ.

TIMESOFINDIA.COM 11 Oct 2018, 2:09 pm
ಲಖನೌ: ದೇಶದ ಅತಿದೊಡ್ಡ ರಾಜ್ಯ ಉತ್ತರ ಪ್ರದೇಶದ ರಾಜಕಾರಣ ಮಾರಾಮಾರಿಗೆ, ಕೋಮುಗಲಭೆಗೆ ಕುಖ್ಯಾತಿ. ಬಿಹಾರದಂತೆ ಇಲ್ಲೂ ಗೂಂಡಾಗಿರಿ ಹೆಚ್ಚಿದೆ.
Vijaya Karnataka Web yogi


ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರಕಾರ ಯುಪಿಯ ರಾಜಕಾರಣದಲ್ಲಿ ಬದಲಾವಣೆ ತರುವ ಉದ್ದೇಶದೊಂದಿಗೆ ಭವಿಷ್ಯದ ರಾಜಕಾರಣಿಗಳಿಗೆ ವೃತ್ತಿಪರ ತರಬೇತಿ ನೀಡಲು ಸಂಸ್ಥೆಯೊಂದನ್ನು ಸ್ಥಾಪಿಸಲು ಮುಂದಾಗಿದೆ. 198 ಕೋಟಿ ರೂ. ಮೊತ್ತದಲ್ಲಿ ಗಾಜಿಯಾಬಾದ್‌ನಲ್ಲಿ 'ರಾಜಕಾರಣಿ ತರಬೇತಿ ಸಂಸ್ಥೆ' ಸ್ಥಾಪಿಸಲು ಪ್ರಸ್ತಾವನೆಗೆ ಉತ್ತರ ಪ್ರದೇಶ ಸಚಿವ ಸಂಪುಟ ಸಭೆ ಬುಧವಾರ ಅನುಮೋದನೆ ನೀಡಿದೆ. ಪ್ರಾರಂಭದಲ್ಲಿ 50 ಕೋಟಿ ರೂ. ಹಣ ವಿನಿಯೋಗವಾಗಲಿದೆ.

* ರಾಜಕಾರಣ ಪ್ರವೇಶಿಸುವರಿಗೆ ಪ್ರಾಯೋಗಿಕ ತರಬೇತಿ, ಕಾನೂನು ಅರಿವು, ಸಾರ್ವಜನಿಕ ಜೀವನದಲ್ಲಿ ವರ್ತನೆ ಬಗ್ಗೆ ತಿಳುವಳಿಕೆ.

ಪ್ರಸಿದ್ಧ ರಾಜಕಾರಣಿಗಳಿಂದ, ರಾಯಭಾರಿಗಳಿಂದ ಉಪನ್ಯಾಸ ಕಾರ್ಯಕ್ರಮ ಅಯೋಜನೆ.

ಮುಂದಿನ ಎರಡು ವರ್ಷದಲ್ಲಿ ಜಾರಿ. ಪಠ್ಯಕ್ರಮ ರೂಪಿಸಲು ಸಮಿತಿ ರಚನೆಯಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ