ಆ್ಯಪ್ನಗರ

ಅತ್ಯಾಚಾರಿಗೆ ಕಾಂಡೋಮ್ ನೀಡಿ! ಚಿತ್ರ ನಿರ್ದೇಶಕನ ಟ್ವೀಟ್

ಅತ್ಯಾಚಾರಿಗೆ ಕಾಂಡೋಮ್‌ ನೀಡಿ, ಹಿಂಸಾಚಾರ ರಹಿತ ಘಟ­ನೆಗೆ ಸಹಕರಿಸಿ ಎಂದು ತಮಿಳು­ನಾಡಿನ ಚಿತ್ರ ನಿರ್ದೇಶಕರೊ­ಬ್ಬರು ತಮ್ಮ ಸಾಮಾಜಿಕ ಜಾಲ­ತಾಣ ಖಾತೆಯಲ್ಲಿ ಪೋಸ್ಟ್‌ ಮಾಡಿ ವಿವಾದಕ್ಕೆ ನಾಂದಿ ಹಾಡಿದ್ದಾರೆ.

Vijaya Karnataka Web 5 Dec 2019, 9:27 am
ಹೊಸದಿಲ್ಲಿ: ಅತ್ಯಾಚಾರಕ್ಕೆ ಗುರಿಯಾಗು­ತ್ತಿ­ದ್ದೀರಾ? ಅತ್ಯಾಚಾರಿಗೆ ಕಾಂಡೋಮ್‌ ನೀಡಿ, ಹಿಂಸಾಚಾರ ರಹಿತ ಘಟ­ ನೆಗೆ ಸಹಕರಿಸಿ ಎಂದು ತಮಿಳು­ನಾಡು ಮೂಲದ ಚಿತ್ರ ನಿರ್ದೇಶಕರೊ­ಬ್ಬರು ತಮ್ಮ ಸಾಮಾಜಿಕ ಜಾಲ­ತಾಣ ಖಾತೆಯಲ್ಲಿ ಪೋಸ್ಟ್‌ ಮಾಡಿ, ನಂತರ ವ್ಯಾಪಕ ಆಕ್ರೋ­ಶಕ್ಕೆ ಮಣಿದು ಪೋಸ್ಟ್‌ ಡಿಲೀಟ್‌ ಮಾಡಿದ ಘಟನೆ ನಡೆದಿದೆ.
Vijaya Karnataka Web daniel shravan controversy


ತಮ್ಮನ್ನು ನಿರ್ದೇಶಕ ಎಂದು ಕರೆದುಕೊಂಡಿರುವ ಡೇನಿಯಲ್‌ ಶ್ರವಣ್‌ ಎಂಬಾತ ಫೇಸ್‌ಬುಕ್‌ ಖಾತೆಯಲ್ಲಿ ಹಾಕಿದ್ದ ಪೋಸ್ಟ್‌ ಮಹಿಳೆಯರ ಆಕ್ರೋಶಕ್ಕೆ ಗುರಿಯಾಗಿದೆ.

ರೇಪ್‌ ಎನ್ನುವುದು ಗಂಭೀರ ವಿಚಾರ ವಲ್ಲ. ಆದರೆ ಹತ್ಯೆಗೆ ಕ್ಷಮೆಯಿಲ್ಲ ಎಂಬ ಶೀರ್ಷಿಕೆ ಅಡಿಯಲ್ಲಿ ಡೇನಿಯಲ್‌ ಪೋಸ್ಟ್‌ ಹಾಕಿದ್ದರು. ರೇಪ್‌ ಎನ್ನುವುದು ತಿದ್ದಬಹುದಾದ ಶಿಕ್ಷೆಯಾಗಿದೆ. ಕೋರ್ಟ್‌, ಸರಕಾರಗಳು ಅತ್ಯಾಚಾರಿಗಳಿಗೆ ಕ್ಷಮೆ ನೀಡಿದರೆ ಅವರಿಗೆ ಮತ್ತೆ ಹತ್ಯೆ ಮಾಡುವ ಆಲೋಚನೆ ಬರುವುದಿಲ್ಲ. ಆತಂಕದಲ್ಲಿ100ಕ್ಕೆ ಕರೆ­ಮಾಡುವ ಬದಲು ನಿಮ್ಮೊಂದಿಗೆ ಕಾಂಡೋಮ್‌ ಒಯ್ಯಿರಿ ಎಂದು ಡೇನಿ­ಯಲ್‌ ಪೋಸ್ಟ್‌ನಲ್ಲಿಸಲಹೆ ನೀಡಿದ್ದರು.



ಈ ಪೋಸ್ಟ್‌ನ ಚಿತ್ರವನ್ನು ಟ್ವಿಟರ್‌ನಲ್ಲಿ ಹಾಕಿದ ಜನಪ್ರಿಯ ನಟಿ ಚಿನ್ಮಯಿ ಶ್ರೀಪಾದ, ಡೇನಿಯಲ್‌ನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅನೇಕ ನಟ, ನಟಿಯರು ಸೇರಿ ಟ್ವೀಟಿಗರು ಆಕ್ರೋಶ ವ್ಯಕ್ತಪಡಿಸಿ ಡೇನಿಯಲ್‌ಗೆ ಮಾನಸಿಕ ಚಿಕಿತ್ಸೆ ಅವಶ್ಯಕತೆ ಇದೆ ಎಂದಿದ್ದಾರೆ.


ಕಳೆದವಾರ ಹೈದರಾಬಾದ್ ನಲ್ಲಿ ಪಶುವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಹಿನ್ನೆಲೆ ದೇಶಾದ್ಯಂತ ವ್ಯಾಪಕ ಟೀಕೆ ಪ್ರತಿಭಟನೆಗಳು ನಡೆಯುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ