ಆ್ಯಪ್ನಗರ

ನ್ಯಾಯಕ್ಕಾಗಿ ಅಲೆಯುತ್ತಿರುವ ಆಧುನಿಕ ಶ್ರವಣ ಕುಮಾರ

ಆದಿವಾಸಿ ಜನಾಂಗದ ವಿದ್ಯಾವಂತ ಯುವಕನೋರ್ವ ಯಾರೋ ಮಾಡಿದ ತಪ್ಪಿಗೆ ತನ್ನ ತಂದೆ-ತಾಯಿಯನ್ನು ಹೆಗಲ ಮೇಲೆ ಹೊತ್ತುಕೊಂಡು ನ್ಯಾಯ ಕೇಳಲು ತಿರುಗಾಡುತ್ತಿದ್ದಾನೆ.

Indiatimes 1 Sep 2017, 6:00 pm
ಓಡಿಶಾ: ತನ್ನ ಅಂಧ ಪೋಷಕರನ್ನು ಪುಣ್ಯಕ್ಷೇತ್ರಗಳ ದರುಶನಕ್ಕೆ ಮರದ ಬುಟ್ಟಿಯಲ್ಲಿ ಹೊತ್ತ ಶ್ರವಣ ಕುಮಾರನ ಕಥೆ ನಿಮಗೆ ತಿಳಿದೇ ಇದೆ. ಅದೇ ಮಾದರಿಯಲ್ಲಿ ಆದಿವಾಸಿ ಜನಾಂಗದ ವಿದ್ಯಾವಂತ ಯುವಕನೋರ್ವ ಯಾರೋ ಮಾಡಿದ ತಪ್ಪಿಗೆ ತನ್ನ ತಂದೆ-ತಾಯಿಯನ್ನು ಹೆಗಲ ಮೇಲೆ ಹೊತ್ತುಕೊಂಡು ನ್ಯಾಯ ಕೇಳಲು ತಿರುಗಾಡುತ್ತಿದ್ದಾನೆ.
Vijaya Karnataka Web carrying his parents his shoulders odisha man walks 40 km to seek justice in fake case
ನ್ಯಾಯಕ್ಕಾಗಿ ಅಲೆಯುತ್ತಿರುವ ಆಧುನಿಕ ಶ್ರವಣ ಕುಮಾರ

#WATCH: Tribal man in Odisha's Mayurbhanj travels 40 kms on foot carrying his parents seeking justice in an alleged fake case against him. pic.twitter.com/ULn6KGLLba — ANI (@ANI) September 1, 2017 ಒಡಿಶಾದ ಮಯೂರ್‌‌ಭಂಜ್‌ ಜಿಲ್ಲೆಯ ಮೊರೋದಾ ಗ್ರಾಮದ ಕಾರ್ತಿಕ್ ಸಿಂಗ್‌ ಎಂಬಾತ ತನ್ನ ವೃದ್ಧ ತಂದೆ-ತಾಯಿಯನ್ನು ಹೆಗಲಲ್ಲಿ ಹೊತ್ತುಕೊಂಡು ತಿರುಗುತ್ತಿರುವ ವೀಡಿಯೋ ಸದ್ಯ ವೈರಲ್‌ ಆಗಿದೆ.

2009ರಲ್ಲಿ ಕಾರ್ತಿಕ್‍ಸಿಂಗ್ ವಿರುದ್ಧ ಮೊರೋದಾ ಠಾಣೆ ಪೊಲೀಸರು ಸುಳ್ಳು ಮೊಕದ್ದಮೆ ದಾಖಲಿಸಿ 18 ದಿನಗಳ ಕಾಲ ಜೈಲಿಗೆ ಕಳುಹಿಸಿದ್ದರು. ಈ ಘಟನೆ ನಂತರ ಗ್ರಾಮಸ್ಥರು ಆತ ಮತ್ತು ಆತನ ವೃದ್ಧ ತಂದೆ-ತಾಯಿಗಳಿಗೆ ಸಮಾಜದಿಂದ ಬಹಿಷ್ಕಾರ ಹಾಕಿದ್ದರು.

ವಿದ್ಯಾವಂತನಾದ ಕಾರ್ತಿಕ್‍ಸಿಂಗ್‍ಗೆ ಗ್ರಾಮದಲ್ಲಿ ಯಾವುದೇ ಕೆಲಸ, ಅನ್ನ-ನೀರು, ಆಶ್ರಯ ಲಭಿಸಿರಲಿಲ್ಲ, ಈವರೆಗೆ ಕಾರ್ತಿಕ್‌ ಸಿಂಗ್‌ ತನ್ನ ತಂದೆ-ತಾಯಿಯನ್ನು ಹೆಗಲ ಮೇಲೆ ಹೊತ್ತುಕೊಂಡು 40 ಕಿ.ಮೀ ನಡೆದಿದ್ದಾನೆ. ತಾನು ವಿದ್ಯಾವಂತನಾಗಿದ್ದು, ಸಾಮಾಜಿಕ ಬಹಿಷ್ಕಾರದ ಆಧಾರದ ಮೇಲೆ ತನಗೆ ಉದ್ಯೋಗ ನೀಡುವಂತೆ ಜಿಲ್ಲಾಧಿಕಾರಿಗಳ ಮೊರೆ ಹೋಗಿದ್ದಾರೆ.

ಈ ಘಟನೆ ನಂತರ ಈತನ ಪರ ವಕಾಲತು ವಹಿಸಲು ಕೆಲವು ವಕೀಲರು ಮತ್ತು ಸಾಮಾಜಿಕ ಕಾರ್ಯಕರ್ತರು ಮುಂದೆ ಬಂದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ