ಆ್ಯಪ್ನಗರ

ಉ.ಪ್ರದೇಶ ಗೋವುಗಳಿಗೆ ರೇಡಿಯಂ ಬೆಲ್ಟ್‌: ಅಪಘಾತ ತಡೆ, ಪ್ರಾಣಿಗಳ ರಕ್ಷಣೆಗೆ ಪೊಲೀಸರ ಪ್ಲ್ಯಾನ್‌

ಪ್ರತಿಫಲನಕಾರಿ ರೇಡಿಯಂ ಬೆಲ್ಟ್‌ಗಳನ್ನು ಹಾಕಿದರೆ ಇಬ್ಬನಿಯ ಮುಂಜಾನೆಗಳಲ್ಲಿ ದೂರದಿಂದಲೇ ಪ್ರಾಣಿಗಳ ಇರುವಿಕೆ ಗೊತ್ತಾಗುತ್ತದೆ.

Vijaya Karnataka 5 Nov 2018, 10:25 am
ಲಖನೌ: ಉತ್ತರ ಪ್ರದೇಶದಲ್ಲಿ ಚಳಿಗಾಲದಲ್ಲಿ ಇಬ್ಬನಿಯಿಂದಾಗಿ ಹೆಚ್ಚುವ ಅಪಘಾತಗಳನ್ನು ನಿಯಂತ್ರಿಸಲು ಪೊಲೀಸರು ಹೊಸ ಐಡಿಯಾ ಮಾಡಿದ್ದಾರೆ. ಸಾಮಾನ್ಯವಾಗಿ ರಸ್ತೆಯಲ್ಲಿ ಪ್ರಾಣಿಗಳ ಓಡಾಟ ಸರಿಯಾಗಿ ಕಾಣಿಸದೆ ಹೆಚ್ಚು ಅವಘಡಗಳು ಸಂಭವಿಸುವುದರಿಂದ ಗೋವುಗಳ ಕುತ್ತಿಗೆ ಮತ್ತು ಕೋಡಿಗೆ ರೇಡಿಯಂ ಬೆಲ್ಟ್‌ಗಳನ್ನು ಹಾಕುವ ಅಭಿಯಾನ ಆರಂಭಿಸಿದ್ದಾರೆ. ಇದರಿಂದ ಅವಘಾತ ತಪ್ಪಿಸುವುದರ ಜತೆಗೆ ಪ್ರಾಣಿಗಳ ರಕ್ಷಣೆಯೂ ಆಗಲಿದೆ.
Vijaya Karnataka Web Redium


ಪ್ರತಿಫಲನಕಾರಿ ರೇಡಿಯಂ ಬೆಲ್ಟ್‌ಗಳನ್ನು ಹಾಕಿದರೆ ಇಬ್ಬನಿಯ ಮುಂಜಾನೆಗಳಲ್ಲಿ ದೂರದಿಂದಲೇ ಪ್ರಾಣಿಗಳ ಇರುವಿಕೆ ಗೊತ್ತಾಗುತ್ತದೆ ಎಂಬ ಕಾರಣಕ್ಕಾಗಿ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಎಸ್‌ಪಿ ಧರಮ್‌ವೀರ್‌ ಸಿಂಗ್‌ ಹೇಳಿದ್ದಾರೆ.

ಉತ್ತರ ಪ್ರದೇಶದಲ್ಲಿ ದನಗಳು ಅಪಘಾತಕ್ಕೀಡಾಗಿ ಸತ್ತರೂ ಚಾಲಕರು ಗೋರಕ್ಷಕರ ದಾಂಧಲೆ ಎದುರಿಸಬೇಕಾಗುತ್ತದೆ. ಇದರಿಂದ ಚಾಲಕರು ಮನುಷ್ಯರ ಪ್ರಾಣ ಒತ್ತೆ ಇಟ್ಟಾದರೂ ಪ್ರಾಣಿಗಳಿಗೆ ಡಿಕ್ಕಿಯಾಗದಂತೆ ನೋಡಿಕೊಳ್ಳಬೇಕಾಗಿದೆ. ಕೆಲವು ಸಂದರ್ಭಗಳಲ್ಲಿ ಹತ್ತಿರಕ್ಕೆ ಬಂದಾಗ ದನಗಳನ್ನು ರಕ್ಷಿಸಲು ಹೋಗಿ ಅಪಘಾತ ಸಂಭವಿಸುವುದೂ ಉಂಟು. ಕಳೆದ ವರ್ಷ ಬಲರಾಮ್‌ಪುರದಲ್ಲಿ ದನವೊಂದನ್ನು ರಕ್ಷಿಸಲು ಹೋಗಿ ಮಹಿಳೆಯೊಬ್ಬರು ಪ್ರಾಣ ಕಳೆದುಕೊಂಡಿದ್ದರು. ಇತರ ನಾಲ್ವರಿಗೆ ಗಾಯವಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ