ಆ್ಯಪ್ನಗರ

ಇಲ್ಲಿ ನೀವು ಕುಡಿದು ಸಿಕ್ಕಿಬಿದ್ದರೆ, ಊರಿಗೆಲ್ಲ ಮಟನ್ ಪಾರ್ಟಿ ಕೊಡಬೇಕು!

ತಮ್ಮ ಊರಿನ ಪುರುಷರ ಕುಡಿತದ ಚಟ ಬಿಡಿಸಲು ಆ ಊರ ಹಿರಿಯರು ಬಳಸಿದ್ದ ಬಹಳ ಬುದ್ಧಿವಂತಿಕೆಯ ಅಸ್ತ್ರ. ಅಷ್ಟಕ್ಕೂ ಅವರು ಮಾಡಿದ್ದೇನು ಎಂದು ತಿಳಿಯಲು ಮುಂದೆ ಓದಿ.

TIMESOFINDIA.COM 18 Oct 2019, 11:36 am
ಅಹಮದಾಬಾದ್: ಕುಡಿದು ಮನೆಗೆ ಬಂದು ಪತ್ನಿ- ಮಕ್ಕಳಿಗೆ ಹೊಡೆಯುವುದು, ಬಡಿಯುವುದು ಈ ಹಳ್ಳಿಯಲ್ಲಿ ಅನೇಕ ಗಂಡಸರ ಚಾಳಿಯಾಗಿತ್ತು. ಪ್ರತಿದಿನ ಸಂಜೆ ಹೆಚ್ಚಿನ ಮನೆಗಳಲ್ಲಿ ನಡೆಯುತ್ತಿರುವ ಗಲಾಟೆಗಳನ್ನು ನೋಡಿ ಬೇಸತ್ತಿದ್ದ ಹಿರಿಯರು ಇದಕ್ಕೆ ಮುಕ್ತಿ ಕೊಡಲು ದೃಢ ನಿರ್ಧಾರ ಮಾಡಿದರು. ಅವರ ತಂತ್ರ ಫಲಕಾರಿಯಾಗಿತ್ತು. ಮತ್ತೀಗ ಆ ಹಳ್ಳಿ ಕುಡುಕರ ಕಾಟದಿಂದ ಮುಕ್ತವಾಗಿದೆ.
Vijaya Karnataka Web Drink


ಹೌದು, ಗಾಂಧಿ ತವರು ಗುಜರಾತಿನ ಬನಸ್ಕಂತ ಜಿಲ್ಲೆಯ ಅಮೀರ್‌ಗಢ ತಾಲ್ಲೂಕಿನ ಬುಡಕಟ್ಟು ಗ್ರಾಮ ಖತಿಸಿತರಾದ ಪ್ರೇರಣಾದಾಯಕ ಕಥೆ ಇದು. ಮದ್ಯಪಾನ ಹಿಂಸೆ, ಹತ್ಯೆ, ಉಪದ್ರವ, ಬಡತನಗಳಿಗೆ ಕಾರಣವಾಗುತ್ತಿದ್ದನ್ನು ಅರಿತಿದ್ದ ಆ ಊರ ಹಿರಿಯರು ಇದಕ್ಕೆಲ್ಲ ಮುಕ್ತಿ ಕೊಡಲು ನಿರ್ಧರಿಸಿದ್ದರು. 2013, 14ರಲ್ಲಿ ಕುಡಿದ ಮತ್ತಿನಲ್ಲಿ ಆ ಗ್ರಾಮದಲ್ಲಿ ನಡೆದ ಹತ್ಯೆ ಬಳಿಕವಂತೂ ಅವರು ಈ ವಿಷಯವನ್ನು ಮತ್ತಷ್ಟು ಗಂಭೀರವಾಗಿ ತೆಗೆದುಕೊಂಡರು.

ಕುಡಿದು ಯಾರಾದರೂ ಸಿಕ್ಕಿ ಬಿದ್ದರೆ ಅಂತವರಿಗೆ 2,000 ರೂ ದಂಡ, ಕುಡಿದು ಗಲಾಟೆ ಮಾಡುತ್ತಿದ್ದರೆ 5,000, ಅದರ ಜತೆಗೆ ಅವರು ಹಳ್ಳಿಯ ಜನರಿಗೆಲ್ಲ ಬಾತಿಯೊಂದಿಗೆ ( ಸ್ಥಳೀಯ ಆಹಾರ) 'ಬೊಕ್ಡು' ಅಥವಾ ಮಟನ್ ಕರಿಯನ್ನು ಮಾಡಿ ಬಡಿಸಬೇಕು (ಅಂದರೆ ಇದಕ್ಕಾಗುವ ಖರ್ಚು 20,000 ರೂ) ಎಂದು ಗ್ರಾಮದ ಸರಪಂಚ್ ಖಿಮ್ಜಿ ಡುಂಗೈಸಾ ಆದೇಶಿಸಿದರು.

ಕುಡಿತ ಪ್ರಶ್ನಿಸಿದ್ದಕ್ಕೆ ಪತ್ನಿಗೆ ಚಾಕುವಿನಿಂದ ಇರಿದ ಪತಿ

2018ರಲ್ಲಿ ಕುಡಿದು ಸಿಕ್ಕಿ ಬಿದ್ದಿದ್ದು


ಊರ ಹಿರಿಯರ ಈ ಉಪಾಯ ನಿರೀಕ್ಷೆ ಮೀರಿ ಫಲ ನೀಡಿತು. ಈ ದಂಡ ಜಾರಿಗೆ ಬಂದ ಮೊದಲ ವರ್ಷಗಳಲ್ಲಿ ಮೂರು/ ನಾಲ್ಕು ಜನ ಕುಡಿದು ಸಿಕ್ಕಿ ಹಾಕಿಕೊಂಡರು. ಅವರೆಲ್ಲ 20,30 ಸಾವಿರ ಖರ್ಚು ಮಾಡಿ ಊರವರಿಗೆ ಮಾಂಸದೂಟ ಹಾಕಿಸಬೇಕಾಯಿತು. ಇದು ಉಳಿದ ಕುಡುಕರನ್ನು ಬೆಚ್ಚಿ ಬೀಳಿಸಿತು. ದಂಡಕ್ಕೆ ಹೆದರಿಗೆ ಹೆಚ್ಚಿನ ಜನ ಕುಡಿತವನ್ನು ಬಿಟ್ಟೇ ಬಿಟ್ಟರು. 2018ರಲ್ಲಿ ದಂಡ ತೆತ್ತಿದ್ದು ಕೇವಲ ಒಬ್ಬ ಮತ್ತು 2019ರಲ್ಲಿ ಇಲ್ಲಿಯವರೆಗೆ ಯಾರು ಕೂಡ ಸಿಕ್ಕಿ ಹಾಕಿಕೊಂಡಿಲ್ಲ ಎಂದು ಊರ ನಾಗರಿಕರು ಖುಷಿಯಿಂದ ಹೇಳಿಕೊಳ್ಳುತ್ತಾರೆ.

ಅಷ್ಟೇ ಅಲ್ಲ ಕಳೆದ ವರ್ಷ ಸಿಕ್ಕಿ ಬಿದ್ದಿದ್ದ ಏಕೈಕ ವ್ಯಕ್ತಿ ಕೂಡ ಪರ ಊರಿನವನು ಎಂದು ನಗುತ್ತಾರೆ ಸರಪಂಚ್.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ