ಆ್ಯಪ್ನಗರ

ಭಿಕ್ಷುಕನ ಸೋಗಿನಲ್ಲಿ 40 ಲಕ್ಷ ರೂ ಬೆಲೆಯ ವಜ್ರ ಕದ್ದ ಕಳ್ಳ

ಕಟ್ಟಡವೊಂದರ 2ನೇ ಮಹಡಿಯಲ್ಲಿರುವ ಕೃಶಾಯ್ ಡೈಮ್ ಹೆಸರಿನ ಮಳಿಗೆಯಿಂದ ಅಪರಿಚಿತ ವ್ಯಕ್ತಿಯೊಬ್ಬ 40 ಲಕ್ಷ ರೂ ಬೆಲೆಯ ವಜ್ರದ ಪ್ಯಾಕೆಟ್‌ ಅಪಹರಿಸಿ ಪರಾರಿಯಾಗಿದ್ದಾನೆ. ಪಿಂಕೇಶ್ ಶಾ ಎಂಬ ವ್ಯಾಪಾರಿ ನೀಡಿದ ದೂರಿನ ಮೇರೆಗೆ ಪೊಲೀಸರು ತನಿಖೆ ಆರಂಭಿಸಿದ್ದು, ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ್ದಾರೆ.

Vijaya Karnataka Web 19 Mar 2019, 12:49 pm
ಸೂರತ್‌: ಕಿವುಡ-ಮೂಗನಂತೆ ಸೋಗು ಹಾಕಿಕೊಂಡ ಭಿಕ್ಷುಕನೊಬ್ಬ ಸೂರತ್‌ನ ವಜ್ರದ ವ್ಯಾಪಾರ ಮಳಿಗೆಯೊಂದರಿಂದ 40 ಲಕ್ಷ ರೂ ಬೆಲೆಯ ವಜ್ರದ ಪ್ಯಾಕೆಟ್‌ ಲಪಟಾಯಿಸಿ ಪರಾರಿಯಾದ ಘಟನೆ ಸೋಮವಾರ ನಡೆದಿದೆ. ಇಡೀ ಘಟನೆ ಮಳಿಗೆಯ ಸಿಸಿಟಿವಿಯಲ್ಲಿ ದಾಖಲಾಗಿದೆ.

ಮಹಾಧೀರಪುರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಅಪರಿಚಿತ ವ್ಯಕ್ತಿಯೊಬ್ಬನ ಮೇಲೆ ಕೇಸು ದಾಖಲಾಗಿದೆ.

ಕಟ್ಟಡವೊಂದರ 2ನೇ ಮಹಡಿಯಲ್ಲಿರುವ ಕೃಶಾಯ್ ಡೈಮ್ ಹೆಸರಿನ ಮಳಿಗೆಯಿಂದ ಅಪರಿಚಿತ ವ್ಯಕ್ತಿಯೊಬ್ಬ 40 ಲಕ್ಷ ರೂ ಬೆಲೆಯ ವಜ್ರದ ಪ್ಯಾಕೆಟ್‌ ಅಪಹರಿಸಿ ಪರಾರಿಯಾಗಿದ್ದಾನೆ. ಪಿಂಕೇಶ್ ಶಾ ಎಂಬ ವ್ಯಾಪಾರಿ ನೀಡಿದ ದೂರಿನ ಮೇರೆಗೆ ಪೊಲೀಸರು ತನಿಖೆ ಆರಂಭಿಸಿದ್ದು, ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ್ದಾರೆ.

ಮಹಾಧೀರಪುರದ ಜಡ್ಡಾಖಾಡಿ ಎಂಬಲ್ಲಿರುವ ಡೈಮಂಡ್ ವಿಲೇಜ್‌ ಕಟ್ಟಡದಲ್ಲಿ ಈ ಘಟನೆ ನಡೆದಿದೆ. ಆರೋಪಿ ವ್ಯಕ್ತಿ ಸೋಮವಾರ ಅಪರಾಹ್ನ 3:25ರ ವೇಳೆಗೆ ಮಳಿಗೆಗೆ ಬಂದಿದ್ದ. ಮಾತು ಬರದವನಂತೆ ನಟಿಸುತ್ತ, ಕೈಸನ್ನೆ ಮೂಲಕ ಸಂಭಾಷಣೆ ಆರಂಭಿಸಿದೆ. ಕಿವುಡ-ಮೂಗನಂತೆ ನಟಿಸುತ್ತ ಭಿಕ್ಷುಕನಂತೆ ವರ್ತಿಸುತ್ತಿದ್ದ. ನೀಲಿ ಪಟ್ಟಿಯುಳ್ಳ ಬಿಳಿ ಶರ್ಟ್ ಹಾಗೂ ಕಪ್ಪು ಪ್ಯಾಂಟ್ ಧರಿಸಿದ್ದ. ದೂರುದಾರರಿಗೆ ಕೆಲವು ಕಾಗದ ಪತ್ರಗಳನ್ನು ತೋರಿಸುತ್ತಿರುವುದು ವೀಡಿಯೋದಲ್ಲಿ ಕಾಣಿಸುತ್ತದೆ. ಅದೇ ವೇಳೆಗೆ ಡೆಸ್ಕ್‌ ಮೇಲೆ ಇಟ್ಟಿದ್ದ ಕೆಲವು ವಜ್ರದ ತುಣುಕುಗಳನ್ನು ಪೇಪರ್‌ನಿಂದ ಮರೆಮಾಡಿದ್ದಾನೆ. ದೂರುದಾರರು ತಮ್ಮ ಜೇಬಿನಿಂದ ಸ್ವಲ್ಪ ಹಣ ತೆಗೆದು ಕೊಡಲು ಮುಂದಾಗುತ್ತಿದ್ದಂತೆ ಈತ ವಜ್ರದ ತುಣುಕುಗಳನ್ನು ಮೆತ್ತಗೆ ಎತ್ತಿಕೊಂಡಿದ್ದಾನೆ. ಆತ ಹೊರಗೆ ಹೋಗಿ ಸ್ವಲ್ಪ ಹೊತ್ತಿನ ಬಳಿಕ ವಜ್ರದ ತುಂಡುಗಳು ಕಾಣಿಯಾಗಿರುವುದು ಅಂಗಡಿಯಾತನ ಗಮನಕ್ಕೆ ಬಂದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

'ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಆರೋಪಿಯನ್ನು ಗುರುತಿಸಲು ಪ್ರಯತ್ನಿಸುತ್ತಿದ್ದೇವೆ. ಇದುವರೆಗೆ ತನಿಖೆಯಲ್ಲಿ ಯಾವುದೇ ಪ್ರಗತಿಯಾಗಿಲ್ಲ' ಎಂದು ಪೊಲೀಸರು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ