ಹೊಸದಿಲ್ಲಿ: ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಅವರು ಕೇಂದ್ರ ವಿಚಕ್ಷಣಾ ದಳ (ಸಿವಿಸಿ)ದ ತನಿಖೆ ವೇಳೆ ನೀಡಿರುವ ಉತ್ತರಗಳು ಹಾಗೂ ಸೋಮವಾರ ಸಲ್ಲಿಕೆ ಮಾಡಿರುವ ರಹಸ್ಯ ಪ್ರತಿಕ್ರಿಯೆಯ ದಾಖಲೆಗಳು ಸೋರಿಕೆಯಾಗಿದ್ದಕ್ಕೆ ಸುಪ್ರೀಂ ಕೋರ್ಟ್ ಗರಂ ಆಗಿದ್ದು, ಪ್ರಕರಣದ ವಿಚಾರಣೆಯನ್ನು ನವೆಂಬರ್ 29ಕ್ಕೆ ಮುಂದೂಡಿದೆ.
ಅಲೋಕ್ ವರ್ಮಾ ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ರಂಜನ್ ಗೊಗೊಯ್, ಇಲ್ಲಿರುವ ಯಾವುದೇ ವ್ಯಕ್ತಿಯೂ ವಿಚಾರಣೆಗೆ ಅರ್ಹರಲ್ಲ ಎಂದು ಛೀಮಾರಿ ಹಾಕಿದ್ದಾರೆ.
ತನಿಖೆಯಲ್ಲಿ ಹಸ್ತಕ್ಷೇಪ: ದೋವಲ್, ಸಚಿವರ ವಿರುದ್ಧ ಅಲೋಕ್ ವರ್ಮಾ ಆರೋಪ
ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಅವರು ತಮ್ಮ ಮೇಲಿನ ಭ್ರಷ್ಟಾಚಾರ ಆರೋಪಗಳ ಕುರಿತ ಕೇಂದ್ರ ವಿಚಕ್ಷಣಾ ದಳ (ಸಿವಿಸಿ) ಸಲ್ಲಿಸಿದ್ದ ತನಿಖಾ ವರದಿಗೆ ಮೊಹರಾದ ಲಕೋಟೆಯಲ್ಲಿ ಸುಪ್ರೀಂ ಕೋಟ್ಗೆ ಸೋಮವಾರ ಉತ್ತರ ಸಲ್ಲಿಸಿದ್ದರು.
ಸಿಬಿಐ ಆಂತರಿಕ ಸಂಘರ್ಷ ತಿಳಿಗೊಳಿಸುವ ಭಾಗವಾಗಿ ಸರಕಾರ ಹಲವು ಅಧಿಕಾರಿಗಳನ್ನು ರಾತ್ರೋರಾತ್ರಿ ವರ್ಗಮಾಡಿತ್ತು. ಈ ವಿಚಾರದಲ್ಲಿ ಡಿಐಜಿ ಎಂ.ಕೆ.ಸಿನ್ಹಾ ಅವರನ್ನೂ ನಾಗ್ಪುರಕ್ಕೆ ವರ್ಗಾವಣೆ ಮಾಡಲಾಗಿತ್ತು. ಇದನ್ನು ಪ್ರಶ್ನಿಸಿ ಅವರು ಸೋಮವಾರ ಸುಪ್ರೀಂ ಕೋರ್ಟ್ಗೆ ಸಲ್ಲಿಸಿದ ಅರ್ಜಿಯಲ್ಲಿ ಈ ಆರೋಪ ಮಾಡಿದ್ದಾರೆ. ಆದರೆ, ‘ಇದರಲ್ಲಿ ನಮಗೇನೂ ಶಾಕಿಂಗ್ ಅನ್ನಿಸುತ್ತಿಲ್ಲ,’ ಎಂದ ನ್ಯಾಯಪೀಠವು ತುರ್ತು ವಿಚಾರಣೆಗೆ ನಿರಾಕರಿಸಿತು.
ಅಲೋಕ್ ವರ್ಮಾ ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ರಂಜನ್ ಗೊಗೊಯ್, ಇಲ್ಲಿರುವ ಯಾವುದೇ ವ್ಯಕ್ತಿಯೂ ವಿಚಾರಣೆಗೆ ಅರ್ಹರಲ್ಲ ಎಂದು ಛೀಮಾರಿ ಹಾಕಿದ್ದಾರೆ.
ತನಿಖೆಯಲ್ಲಿ ಹಸ್ತಕ್ಷೇಪ: ದೋವಲ್, ಸಚಿವರ ವಿರುದ್ಧ ಅಲೋಕ್ ವರ್ಮಾ ಆರೋಪ
ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಅವರು ತಮ್ಮ ಮೇಲಿನ ಭ್ರಷ್ಟಾಚಾರ ಆರೋಪಗಳ ಕುರಿತ ಕೇಂದ್ರ ವಿಚಕ್ಷಣಾ ದಳ (ಸಿವಿಸಿ) ಸಲ್ಲಿಸಿದ್ದ ತನಿಖಾ ವರದಿಗೆ ಮೊಹರಾದ ಲಕೋಟೆಯಲ್ಲಿ ಸುಪ್ರೀಂ ಕೋಟ್ಗೆ ಸೋಮವಾರ ಉತ್ತರ ಸಲ್ಲಿಸಿದ್ದರು.
ಸಿಬಿಐ ಆಂತರಿಕ ಸಂಘರ್ಷ ತಿಳಿಗೊಳಿಸುವ ಭಾಗವಾಗಿ ಸರಕಾರ ಹಲವು ಅಧಿಕಾರಿಗಳನ್ನು ರಾತ್ರೋರಾತ್ರಿ ವರ್ಗಮಾಡಿತ್ತು. ಈ ವಿಚಾರದಲ್ಲಿ ಡಿಐಜಿ ಎಂ.ಕೆ.ಸಿನ್ಹಾ ಅವರನ್ನೂ ನಾಗ್ಪುರಕ್ಕೆ ವರ್ಗಾವಣೆ ಮಾಡಲಾಗಿತ್ತು. ಇದನ್ನು ಪ್ರಶ್ನಿಸಿ ಅವರು ಸೋಮವಾರ ಸುಪ್ರೀಂ ಕೋರ್ಟ್ಗೆ ಸಲ್ಲಿಸಿದ ಅರ್ಜಿಯಲ್ಲಿ ಈ ಆರೋಪ ಮಾಡಿದ್ದಾರೆ. ಆದರೆ, ‘ಇದರಲ್ಲಿ ನಮಗೇನೂ ಶಾಕಿಂಗ್ ಅನ್ನಿಸುತ್ತಿಲ್ಲ,’ ಎಂದ ನ್ಯಾಯಪೀಠವು ತುರ್ತು ವಿಚಾರಣೆಗೆ ನಿರಾಕರಿಸಿತು.