ಆ್ಯಪ್ನಗರ

ಶಾಸಕರ ಕುದುರೆ ವ್ಯಾಪಾರ ಯತ್ನ: ಉತ್ತರಾಖಂಡ ಮಾಜಿ ಸಿಎಂ ಹರೀಶ್‌ ರಾವತ್‌ ವಿರುದ್ಧ ಸಿಬಿಐ ಕೇಸ್‌

ಹರೀಶ್ ರಾವತ್‌ ವಿರುದ್ಧ ಸಿಬಿಐ ಚಾಟಿ ಬೀಸಿದೆ. ಶಾಸಕರ ಕುದುರೆ ವ್ಯಾಪಾರ ಯತ್ನ ಆರೋಪ ಹಿನ್ನೆಲೆ ಕೇಂದ್ರ ತನಿಖಾ ದಳ ಕೇಸ್‌ ದಾಖಲಿಸಿದೆ. ಉತ್ತರಾಖಂಡ ಹೈಕೋರ್ಟ್ ಸಹ ಕೇಸ್‌ ದಾಖಲಿಸಲು ಅನುಮತಿ ದಾಖಲಿಸಿದೆ.

TIMESOFINDIA.COM 23 Oct 2019, 5:58 pm
ಹೊಸದಿಲ್ಲಿ: ಉತ್ತರಾಖಂಡ ಮಾಜಿ ಸಿಎಂ ಹರೀಶ್‌ ರಾವತ್‌ ವಿರುದ್ಧ ಸಿಬಿಐ ಕೇಸ್‌ ದಾಖಲಿಸಿಕೊಂಡಿದೆ. 2016ರಲ್ಲಿ ಶಾಸಕರ ಕುದುರೆ ವ್ಯಾಪಾರಕ್ಕೆ ಹರೀಶ್‌ ರಾವತ್‌ ಯತ್ನಿಸಿದ್ದ ಆರೋಪ ಹಿನ್ನೆಲೆ ಸಿಬಿಐ ಅಧಿಕಾರಿಗಳು ಮಾಜಿ ಸಿಎಂ ವಿರುದ್ಧ ಬುಧವಾರ ಕೇಸ್‌ ದಾಖಲಿಸಿಕೊಂಡಿದ್ದಾರೆ.
Vijaya Karnataka Web harish rawat toi



ಈ ಸುದ್ದಿ ಓದಿ: ಚಿದಂಬರಂ, ಡಿಕೆಶಿ ಬಳಿಕ ಉತ್ತರಾಖಂಡ ಮಾಜಿ ಸಿಎಂ ವಿರುದ್ಧ FIR ದಾಖಲಿಸಲು ಮುಂದಾದ CBI

2016ರಲ್ಲಿ ರಾಷ್ಟ್ರಪತಿ ಆಡಳಿತವಿದ್ದಾಗ ರೆಕಾರ್ಡ್ ಆಗಿದ್ದ ವಿಡಿಯೋ ಒಂದರ ಕುರಿತು ಸಿಬಿಐ ತನಿಖೆ ಮಾಡಿತ್ತು. ಕಮಲ ಹಿಡಿದಿದ್ದ ಕೈ ಶಾಸಕರ ಬೆಂಬಲ ಮತ್ತೆ ಪಡೆಯಲು ಕಾಂಗ್ರೆಸ್‌ ನಾಯಕ ಹಣದ ಬಗ್ಗೆ ವಿಡಿಯೋದಲ್ಲಿ ಚರ್ಚೆ ಮಾಡಿದ್ದರು. ಮತ್ತೆ ಕಾಂಗ್ರೆಸ್‌ ಅಧಿಕಾರಕ್ಕೆ ಬರಲು ಈ ಚರ್ಚೆ ನಡೆದಿತ್ತು ಎನ್ನಲಾಗಿತ್ತು.

ಇದನ್ನೂ ಓದಿ: ಗುಜರಾತ್ ಕಾಂಗ್ರೆಸ್ ಶಾಸಕರಿಗೆ ರಕ್ಷಣೆ ನೀಡಿದ್ದೇ ಡಿಕೆಶಿಗೆ ಮುಳುವಾಯ್ತು!: ಮನೀಶ್ ತಿವಾರಿ

ಇತ್ತೀಚೆಗಷ್ಟೇ ಈ ಪ್ರಕರಣದ ತನಿಖೆ ನಡೆಸಲು ಉತ್ತರಾಖಂಡ ಹೈಕೋರ್ಟ್ ಸಿಬಿಐಗೆ ಅನುಮತಿ ನೀಡಿತ್ತು. ಅಲ್ಲದೆ, ಸಿಬಿಐ ತನ್ನ ಪ್ರಾಥಮಿಕ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಕೋರ್ಟ್‌ಗೆ ನೀಡಿದ್ದ ಹಿನ್ನೆಲೆ ರಾವತ್‌ ವಿರುದ್ಧ ಎಫ್‌ಐಆರ್‌ ದಾಖಲಿಸಲು ಸಹ ಕೋರ್ಟ್‌ ಅನುಮತಿ ನೀಡಿದೆ.

ಸೋಮವಾರ ವಿಶ್ವಾಸಮತ ಸಾಬೀತು; ಬಿಜೆಪಿಯಿಂದ ಕುದುರೆ ವ್ಯಾಪಾರ: ಕೆಪಿಸಿಸಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ