ಆ್ಯಪ್ನಗರ

ಶಾರದಾ ಚಿಟ್‌ಫಂಡ್‌ ಕೇಸ್‌: ರಾಜೀವ್‌ಕುಮಾರ್‌ಗೆ ಲುಕ್ ಔಟ್ ನೋಟಿಸ್

ಮೇ 23ರಂದು ಈ ನೋಟಿಸ್ ಜಾರಿಯಾಗಿದ್ದು, 1 ವರ್ಷದ ಅವಧಿಗೆ ಜಾರಿಯಲ್ಲಿರಲಿದೆ. ಇದರ ಪ್ರಕಾರ ರಾಜೀವ್ ದೇಶ ಬಿಟ್ಟು ಹೋಗುವಂತಿಲ್ಲ. ಅವರು ಭಾರತ ಬಿಟ್ಟು ಹೋಗಲು ಯತ್ನಿಸಿದರೆ ವಿಮಾನ ನಿಲ್ದಾಣದ ಅಧಿಕಾರಿಗಳು ಸಿಬಿಐಗೆ ಮಾಹಿತಿ ನೀಡುತ್ತಾರೆ.

Times Now 26 May 2019, 2:24 pm
ಹೊಸದಿಲ್ಲಿ: ಶಾರದಾ ಚಿಟ್ ಫಂಡ್ ಹಗರಣಕ್ಕೆ ಸಂಬಂಧಿಸಿದಂತೆ ಕೋಲ್ಕತಾ ಮಾಜಿ ಪೋಲೀಸ್ ಆಯುಕ್ತ ರಾಜೀವ್ ಕುಮಾರ್ ಅವರ ವಿರುದ್ಧ ಸಿಬಿಐ ( ಕೇಂದ್ರೀಯ ತನಿಖಾ ದಳ ) ಭಾನುವಾರ ಲುಕ್ ಔಟ್ ನೋಟಿಸ್ ಜಾರಿ ಮಾಡಿದೆ.
Vijaya Karnataka Web Rajeev Kumar


ಮೇ 23ರಂದು ಈ ನೋಟಿಸ್ ಜಾರಿಯಾಗಿದ್ದು, 1 ವರ್ಷದ ಅವಧಿಗೆ ಜಾರಿಯಲ್ಲಿರಲಿದೆ. ಇದರ ಪ್ರಕಾರ ರಾಜೀವ್ ದೇಶ ಬಿಟ್ಟು ಹೋಗುವಂತಿಲ್ಲ. ಅವರು ಭಾರತ ಬಿಟ್ಟು ಹೋಗಲು ಯತ್ನಿಸಿದರೆ ವಿಮಾನ ನಿಲ್ದಾಣದ ಅಧಿಕಾರಿಗಳು ಸಿಬಿಐಗೆ ಮಾಹಿತಿ ನೀಡುತ್ತಾರೆ.

ಬಹುಕೋಟಿ ಶಾರದಾ ಚಿಟ್‌ಫಂಡ್‌ ಹಗರಣದಲ್ಲಿ ಬಂಧನ ಭೀತಿ ಎದುರಿಸುತ್ತಿರುವ ಹಿರಿಯ ಐಪಿಎಸ್‌ ಅಧಿಕಾರಿ ರಾಜೀವ್‌ ಕುಮಾರ್‌ ಅವರು ತಮ್ಮನ್ನು ಬಂಧಿಸದಂತೆ ಸುಪ್ರೀಂ ನೀಡಿದ್ದ 'ರಕ್ಷಣಾ ಅವಧಿ' ವಿಸ್ತರಣೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಶುಕ್ರವಾರ ವಜಾಗೊಳಿಸಿತ್ತು. ಹೀಗಾಗಿ ಯಾವುದೇ ಕ್ಷಣದಲ್ಲಿ ಸಿಬಿಐ ಅವರನ್ನು ಬಂಧಿಸುವ ಸಾಧ್ಯತೆಗಳು ಸಹ ಇದೆ.

ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರ ಆಪ್ತರಾಗಿರುವ ರಾಜೀವ್‌ ಕುಮಾರ್‌, ಶಾರದಾ ಚಿಟ್‌ಫಂಡ್‌ ಹಗರಣದಲ್ಲಿ ಭಾಗಿಯಾಗಿರುವುದಕ್ಕೆ ಸಾಕಷ್ಟು ಪುರಾವೆಗಳಿದ್ದು ಸಿಬಿಐ ಇದನ್ನು ಸವಾಲಾಗಿ ಸ್ವೀಕರಿಸಿದೆ. ಕುಮಾರ್‌ ಅವರು, ತಮ್ಮನ್ನು ಬಂಧಿಸದಂತೆ ಸುಪ್ರೀಂ ನೀಡಿದ್ದ 'ರಕ್ಷಣಾ ಅವಧಿ' ಶುಕ್ರವಾರಕ್ಕೆ ಅಂತ್ಯಗೊಂಡ ಹಿನ್ನೆಲೆಯಲ್ಲಿ ರಕ್ಷಣಾ ಅವಧಿ ವಿಸ್ತರಣೆ ಕೋರಿ ಮರು ಅರ್ಜಿ ಸಲ್ಲಿಸಿದ್ದರು.

ಕೋರ್ಟ್‌ ತರಾಟೆ: ನ್ಯಾಯಮೂರ್ತಿ ಅರುಣ್‌ ಮಿಶ್ರಾ ನೇತೃತ್ವದ ನ್ಯಾಯಪೀಠವು, ''ನೀವೇಕೆ ಇಲ್ಲಿ ಅರ್ಜಿ ಸಲ್ಲಿಸಿದ್ದೀರಿ. ವಕೀಲರ ಮುಷ್ಕರದಿಂದ ಕೋಲ್ಕೊತಾ ಹೈಕೋರ್ಟ್‌ ಹಾಗೂ ವಿಚಾರಣಾ ನ್ಯಾಯಾಲಯಗಳ ಕಲಾಪಗಳು ನಡೆಯುತ್ತಿಲ್ಲ ಎಂದು ಇಲ್ಲದ ಸಬೂಬು ಹೇಳಿಕೊಂಡು ಇಲ್ಲಿಗೆ ಬರಬೇಡಿ. ಅಲ್ಲಿ ಕೋರ್ಟ್‌ ಕಲಾಪಗಳು ನಡೆಯುತ್ತಿವೆ. ನಿಮ್ಮ ಕಕ್ಷಿದಾರರು ಮಾಜಿ ಪೊಲೀಸ್‌ ಆಯುಕ್ತರಾಗಿದ್ದು ಅವರಿಗೆ ಕಿರಿಯ ವಕೀಲರಿಗಿಂತಲೂ ಕಾನೂನು ಚೆನ್ನಾಗಿ ಗೊತ್ತಿದೆ,'' ಎಂದು ನ್ಯಾಯಪೀಠವು ರಾಜೀವ್‌ ಕುಮಾರ್‌ ಅವರ ವಕೀಲ ಸುನೀಲ್‌ ಫರ್ನಾಂಡಿಸ್‌ ಅವರನ್ನು ತರಾಟೆಗೆ ತೆಗೆದುಕೊಂಡಿತ್ತು.

ಸಾಕ್ಷ್ಯ ಅಳಿಸಿಹಾಕುವ ಆರೋಪ:

ಪಶ್ಚಿಮ ಬಂಗಾಳದ ದೀದಿ ಸರಕಾರದ ಪ್ರಭಾವಿ ಸಚಿವರು ಹಾಗೂ ಶಾಸಕರನ್ನು ಸುತ್ತುವರಿದಿರುವ ಶಾರದಾ ಚಿಟ್‌ಫಂಡ್‌ ಹಗರಣ 2012-13ರಲ್ಲಿ ಬೆಳಕಿಗೆ ಬಂದಿತು. ಹಗರಣದ ತನಿಖಾ ಹೊಣೆಯನ್ನು ಆರಂಭದಲ್ಲಿ ರಾಜ್ಯ ಸರಕಾರ ರಾಜೀವ್‌ ಕುಮಾರ್‌ ನೇತೃತ್ವದ ಎಸ್‌ಐಟಿಗೆ ವಹಿಸಿತ್ತು. ಅಂದು ರಾಜೀವ್‌ ಅವರು ಕೋಲ್ಕೊತಾ ಪೊಲೀಸ್‌ ಆಯುಕ್ತರಾಗಿದ್ದರು. 2014ರಲ್ಲಿ ಸುಪ್ರೀಂಕೋರ್ಟ್‌ ತನಿಖೆಯನ್ನು ಸಿಬಿಐಗೆ ಒಪ್ಪಿಸಿತು. ಪ್ರಭಾವಿಗಳಿಗೆ ರಕ್ಷಣೆ ನೀಡುವ ಮೂಲಕ ಹಗರಣ ಸಾಕ್ಷ್ಯಗಳನ್ನು ಅಳಿಸಿಹಾಕಲು ರಾಜೀವ್‌ ಯತ್ನಿಸಿದ್ದಾರೆಂದು ಅವರ ಮೇಲೆ ಸಿಬಿಐ ಆರೋಪಿಸಿದೆ. ಕೆಲವು ತಿಂಗಳ ಹಿಂದೆ ಅವರನ್ನು ಬಂಧಿಸಲು ಕೋಲ್ಕೊತಾಗೆ ಹೋಗಿದ್ದ ಸಿಬಿಐ ಅಧಿಕಾರಿಗಳನ್ನೇ ಪೊಲೀಸರು ತಡೆದಿದ್ದರು. ಇದರಿಂದ ಭಾರಿ ಸಂಘರ್ಷ ಉದ್ಭವಿಸಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ